ETV Bharat / bharat

ಕಾಣೆಯಾದವರು, ಓಡಿ ಹೋದವರು..: ದೆಹಲಿ ರೈಲು ನಿಲ್ದಾಣದಲ್ಲಿ 400 ಮಕ್ಕಳ ರಕ್ಷಣೆ

author img

By

Published : Apr 3, 2023, 1:04 PM IST

ಕಾಣೆಯಾದವರು, ಓಡಿ ಹೋದವರು ಮತ್ತು ಬಾಲ ಕಾರ್ಮಿಕರು ಸೇರಿದಂತೆ ದೆಹಲಿ ರೈಲು ನಿಲ್ದಾಣದಲ್ಲಿ ಒಟ್ಟು 400 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಎಂದು ಮಕ್ಕಳ ಕಲ್ಯಾಣ ಸಮಿತಿ ಮಾಹಿತಿ ನೀಡಿದೆ.

delhi railway station
ದೆಹಲಿ ರೈಲು ನಿಲ್ದಾಣ

ನವದೆಹಲಿ : 34 ಮಂದಿ ಬಾಲಕಿಯರು ಸೇರಿದಂತೆ 400 ಕ್ಕೂ ಹೆಚ್ಚು ಮಕ್ಕಳನ್ನು ರಾಷ್ಟ್ರ ರಾಜಧಾನಿ ನವದೆಹಲಿಯ ರೈಲು ನಿಲ್ದಾಣದಿಂದ ರಕ್ಷಿಸಲಾಗಿದೆ ಎಂದು ಭಾನುವಾರ ಮಕ್ಕಳ ಕಲ್ಯಾಣ ಸಮಿತಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಸಿಡಬ್ಲ್ಯುಸಿಯ ಮಯೂರ್ ವಿಹಾರ್ ಸಹಾಕಾರದೊಂದಿಗೆ ಉತ್ತರ ರೈಲ್ವೆ, ಸಾಥಿ, ಸಲಾಮ್ ಬಾಲಾಕ್ ಟ್ರಸ್ಟ್ ಮತ್ತು ಪ್ರಯಾಸ್ ಜೆಎಸಿ ಸೊಸೈಟಿ ಸಹಯೋಗದಲ್ಲಿ ಈ ರಕ್ಷಣಾ ಅಭಿಯಾನ ಆಯೋಜಿಸಲಾಗಿತ್ತು ಎಂದು ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ವರುಣ್ ಪಾಠಕ್ ತಿಳಿಸಿದ್ದಾರೆ.

402 ಮಕ್ಕಳಲ್ಲಿ 34 ಬಾಲಕಿಯರು ಮತ್ತು 372 ಬಾಲಕರು ಇದ್ದಾರೆ. ಈಗಾಗಲೇ ಎಲ್ಲರನ್ನು ರಕ್ಷಿಸುವ ಮೂಲಕ ಆರೈಕೆ ಮತ್ತು ರಕ್ಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿ (CWC) ಮುಂದೆ ಹಾಜರುಪಡಿಸಲಾಗಿದೆ. ಸದ್ಯಕ್ಕೆ ಅವರನ್ನು ನಗರದ ಶಿಶುಪಾಲನಾ ಸಂಸ್ಥೆಗಳಿಗೆ ಕಳುಹಿಸಲಾಗಿದೆ. ರಕ್ಷಿಸಲಾದ ಮಕ್ಕಳಲ್ಲಿ ಕಾಣೆಯಾದವರು, ಓಡಿ ಹೋದವರು ಮತ್ತು ಬಾಲ ಕಾರ್ಮಿಕರು ಸೇರಿದ್ದಾರೆ. ಈ ಕಾರ್ಯಚರಣೆಯಲ್ಲಿ ರೈಲ್ವೆ ಸಂರಕ್ಷಣಾ ಪಡೆ ಪೊಲೀಸರು ಮತ್ತು ಸರ್ಕಾರಿ ರೈಲ್ವೆ ಪೊಲೀಸರೂ ಸಹ ಭಾಗಿಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಸಚಿವ ಸಂಪುಟ ವಿಸ್ತರಣೆಗೆ ಕಸರತ್ತು, ಯುಪಿಯಲ್ಲಿ 20 ಮಕ್ಕಳ ರಕ್ಷಣೆ, 4ನೇ ಟಿ20 ಪಂದ್ಯ.... ಟಾಪ್ 10​ ಸುದ್ದಿಗಳ ಕ್ವಿಕ್​ಲುಕ್​!

ಕಳೆದ ಫೆಬ್ರವರಿಯಲ್ಲಿ ನರ ಬಲಿಗಾಗಿ ಕಳ್ಳಸಾಗಣೆ ಮಾಡಲಾಗಿದ್ದ 16 ವರ್ಷದ ನೇಪಾಳದ ಬಾಲಕಿಯನ್ನು ಭಾರತದಲ್ಲಿ ರಕ್ಷಿಸಲಾಗಿತ್ತು. ಸಂತ್ರಸ್ತೆಯು ಏಳನೇ ತರಗತಿ ವಿದ್ಯಾರ್ಥಿಯಾಗಿದ್ದು, ಪ್ರಕರಣ ಸಂಬಂಧ ನೇಪಾಳದ ಮಾನವ ಕಳ್ಳಸಾಗಣೆ ವಿರೋಧಿ ದಳ ಐದು ಮಹಿಳೆಯರು ಸೇರಿದಂತೆ ಆರು ಮಂದಿಯನ್ನು ಬಂಧಿಸಿದೆ.

ಇದನ್ನೂ ಓದಿ : ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದ 7 ಬಾಲಕಾರ್ಮಿಕರ ರಕ್ಷಣೆ....ಜಿಲ್ಲಾಧಿಕಾರಿಗಳಿಂದ ಎಚ್ಚರಿಕೆ

"ಭಾರತದ ತಾಂತ್ರಿಕ ಬಾಬಾನೋರ್ವನ ಸಲಹೆ ಮೇರೆಗೆ ಕಠ್ಮಂಡುವಿನಿಂದ ಪಶ್ಚಿಮಕ್ಕೆ 60 ಕಿ.ಮೀ ದೂರದಲ್ಲಿರುವ ಧಾಡಿಂಗ್ ಜಿಲ್ಲೆಯಿಂದ ಹದಿಹರೆಯದ ಬಾಲಕಿಯರನ್ನು ಕಳ್ಳಸಾಗಣೆ ಮಾಡುವಲ್ಲಿ ತೊಡಗಿಸಿಕೊಂಡ ಆರೋಪದ ಮೇರೆಗೆ ಐವರು ಮಹಿಳೆಯರು ಸೇರಿದಂತೆ ಆರು ನೇಪಾಳಿ ಪ್ರಜೆಗಳನ್ನು ಬಂಧಿಸಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಎಲ್ಲಾ ಐವರು ಮಹಿಳೆಯರು ತಾಂತ್ರಿಕ ಬಾಬಾ ಡಾನ್ ಬಹದ್ದೂರ್ ಮಲ್ಲಾ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆಂದು" ದಳದ ವಕ್ತಾರರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಜಾತ್ರೆಯಲ್ಲಿ ಬಲೂನು ಮಾರುತ್ತಿದ್ದ 12 ಅಪ್ರಾಪ್ತರ ರಕ್ಷಣೆ: ಶಾಲೆಗೆ ಕಳಿಸುವಂತೆ ಪೋಷಕರಿಗೆ ಮನವರಿಕೆ

ಕಳೆದ ವರ್ಷದ ನವೆಂಬರ್​ ತಿಂಗಳಿನಲ್ಲಿ ಉಡುಪಿ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ 16 ಮಕ್ಕಳನ್ನು ರಕ್ಷಣೆ ಮಾಡಲಾಗಿತ್ತು. ಮಲ್ಪೆ ಬಂದರಿನಲ್ಲಿ ಮೀನು ಆಯುವ ಕೆಲಸ ಮಾಡುತ್ತಿದ್ದ ಅಪ್ರಾಪ್ತ ಮಕ್ಕಳನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ಮಹಿಳಾ ಮತ್ತು ಮಕ್ಕಳ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನಗರ ಸಭೆ ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಜಂಟಿಯಾಗಿ ರಕ್ಷಿಸಿತ್ತು.

ಇದನ್ನೂ ಓದಿ: ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ 16 ಮಕ್ಕಳ‌ ರಕ್ಷಣೆ

ನವದೆಹಲಿ : 34 ಮಂದಿ ಬಾಲಕಿಯರು ಸೇರಿದಂತೆ 400 ಕ್ಕೂ ಹೆಚ್ಚು ಮಕ್ಕಳನ್ನು ರಾಷ್ಟ್ರ ರಾಜಧಾನಿ ನವದೆಹಲಿಯ ರೈಲು ನಿಲ್ದಾಣದಿಂದ ರಕ್ಷಿಸಲಾಗಿದೆ ಎಂದು ಭಾನುವಾರ ಮಕ್ಕಳ ಕಲ್ಯಾಣ ಸಮಿತಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಸಿಡಬ್ಲ್ಯುಸಿಯ ಮಯೂರ್ ವಿಹಾರ್ ಸಹಾಕಾರದೊಂದಿಗೆ ಉತ್ತರ ರೈಲ್ವೆ, ಸಾಥಿ, ಸಲಾಮ್ ಬಾಲಾಕ್ ಟ್ರಸ್ಟ್ ಮತ್ತು ಪ್ರಯಾಸ್ ಜೆಎಸಿ ಸೊಸೈಟಿ ಸಹಯೋಗದಲ್ಲಿ ಈ ರಕ್ಷಣಾ ಅಭಿಯಾನ ಆಯೋಜಿಸಲಾಗಿತ್ತು ಎಂದು ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ವರುಣ್ ಪಾಠಕ್ ತಿಳಿಸಿದ್ದಾರೆ.

402 ಮಕ್ಕಳಲ್ಲಿ 34 ಬಾಲಕಿಯರು ಮತ್ತು 372 ಬಾಲಕರು ಇದ್ದಾರೆ. ಈಗಾಗಲೇ ಎಲ್ಲರನ್ನು ರಕ್ಷಿಸುವ ಮೂಲಕ ಆರೈಕೆ ಮತ್ತು ರಕ್ಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿ (CWC) ಮುಂದೆ ಹಾಜರುಪಡಿಸಲಾಗಿದೆ. ಸದ್ಯಕ್ಕೆ ಅವರನ್ನು ನಗರದ ಶಿಶುಪಾಲನಾ ಸಂಸ್ಥೆಗಳಿಗೆ ಕಳುಹಿಸಲಾಗಿದೆ. ರಕ್ಷಿಸಲಾದ ಮಕ್ಕಳಲ್ಲಿ ಕಾಣೆಯಾದವರು, ಓಡಿ ಹೋದವರು ಮತ್ತು ಬಾಲ ಕಾರ್ಮಿಕರು ಸೇರಿದ್ದಾರೆ. ಈ ಕಾರ್ಯಚರಣೆಯಲ್ಲಿ ರೈಲ್ವೆ ಸಂರಕ್ಷಣಾ ಪಡೆ ಪೊಲೀಸರು ಮತ್ತು ಸರ್ಕಾರಿ ರೈಲ್ವೆ ಪೊಲೀಸರೂ ಸಹ ಭಾಗಿಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಸಚಿವ ಸಂಪುಟ ವಿಸ್ತರಣೆಗೆ ಕಸರತ್ತು, ಯುಪಿಯಲ್ಲಿ 20 ಮಕ್ಕಳ ರಕ್ಷಣೆ, 4ನೇ ಟಿ20 ಪಂದ್ಯ.... ಟಾಪ್ 10​ ಸುದ್ದಿಗಳ ಕ್ವಿಕ್​ಲುಕ್​!

ಕಳೆದ ಫೆಬ್ರವರಿಯಲ್ಲಿ ನರ ಬಲಿಗಾಗಿ ಕಳ್ಳಸಾಗಣೆ ಮಾಡಲಾಗಿದ್ದ 16 ವರ್ಷದ ನೇಪಾಳದ ಬಾಲಕಿಯನ್ನು ಭಾರತದಲ್ಲಿ ರಕ್ಷಿಸಲಾಗಿತ್ತು. ಸಂತ್ರಸ್ತೆಯು ಏಳನೇ ತರಗತಿ ವಿದ್ಯಾರ್ಥಿಯಾಗಿದ್ದು, ಪ್ರಕರಣ ಸಂಬಂಧ ನೇಪಾಳದ ಮಾನವ ಕಳ್ಳಸಾಗಣೆ ವಿರೋಧಿ ದಳ ಐದು ಮಹಿಳೆಯರು ಸೇರಿದಂತೆ ಆರು ಮಂದಿಯನ್ನು ಬಂಧಿಸಿದೆ.

ಇದನ್ನೂ ಓದಿ : ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದ 7 ಬಾಲಕಾರ್ಮಿಕರ ರಕ್ಷಣೆ....ಜಿಲ್ಲಾಧಿಕಾರಿಗಳಿಂದ ಎಚ್ಚರಿಕೆ

"ಭಾರತದ ತಾಂತ್ರಿಕ ಬಾಬಾನೋರ್ವನ ಸಲಹೆ ಮೇರೆಗೆ ಕಠ್ಮಂಡುವಿನಿಂದ ಪಶ್ಚಿಮಕ್ಕೆ 60 ಕಿ.ಮೀ ದೂರದಲ್ಲಿರುವ ಧಾಡಿಂಗ್ ಜಿಲ್ಲೆಯಿಂದ ಹದಿಹರೆಯದ ಬಾಲಕಿಯರನ್ನು ಕಳ್ಳಸಾಗಣೆ ಮಾಡುವಲ್ಲಿ ತೊಡಗಿಸಿಕೊಂಡ ಆರೋಪದ ಮೇರೆಗೆ ಐವರು ಮಹಿಳೆಯರು ಸೇರಿದಂತೆ ಆರು ನೇಪಾಳಿ ಪ್ರಜೆಗಳನ್ನು ಬಂಧಿಸಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಎಲ್ಲಾ ಐವರು ಮಹಿಳೆಯರು ತಾಂತ್ರಿಕ ಬಾಬಾ ಡಾನ್ ಬಹದ್ದೂರ್ ಮಲ್ಲಾ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆಂದು" ದಳದ ವಕ್ತಾರರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಜಾತ್ರೆಯಲ್ಲಿ ಬಲೂನು ಮಾರುತ್ತಿದ್ದ 12 ಅಪ್ರಾಪ್ತರ ರಕ್ಷಣೆ: ಶಾಲೆಗೆ ಕಳಿಸುವಂತೆ ಪೋಷಕರಿಗೆ ಮನವರಿಕೆ

ಕಳೆದ ವರ್ಷದ ನವೆಂಬರ್​ ತಿಂಗಳಿನಲ್ಲಿ ಉಡುಪಿ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ 16 ಮಕ್ಕಳನ್ನು ರಕ್ಷಣೆ ಮಾಡಲಾಗಿತ್ತು. ಮಲ್ಪೆ ಬಂದರಿನಲ್ಲಿ ಮೀನು ಆಯುವ ಕೆಲಸ ಮಾಡುತ್ತಿದ್ದ ಅಪ್ರಾಪ್ತ ಮಕ್ಕಳನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ಮಹಿಳಾ ಮತ್ತು ಮಕ್ಕಳ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನಗರ ಸಭೆ ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಜಂಟಿಯಾಗಿ ರಕ್ಷಿಸಿತ್ತು.

ಇದನ್ನೂ ಓದಿ: ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ 16 ಮಕ್ಕಳ‌ ರಕ್ಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.