ETV Bharat / bharat

ಆಕ್ಸಿಜನ್​​ ಸಮಸ್ಯೆ: ಒಂದೇ ರಾತ್ರಿಯಲ್ಲಿ ದೆಹಲಿ ಆಸ್ಪತ್ರೆಯಲ್ಲಿ 25 ರೋಗಿಗಳ ಸಾವು!

author img

By

Published : Apr 24, 2021, 3:19 PM IST

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಕ್ಸಿಜನ್ ಸಮಸ್ಯೆ ಉಂಟಾಗಿರುವ ಕಾರಣ 25 ರೋಗಿಗಳು ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.

Covid death
Covid death

ನವದೆಹಲಿ: ದೇಶದಲ್ಲಿ ಡೆಡ್ಲಿ ವೈರಸ್​ ಹಾವಳಿ ಜೋರಾಗಿರುವ ಕಾರಣ ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್​ ಸಮಸ್ಯೆ ಉಂಟಾಗಿದ್ದು, ಸರಿಯಾದ ಸಮಯಕ್ಕೆ ಆಮ್ಲಜನಕ ಪೂರೈಕೆಯಾಗದೇ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಇದೀಗ ರಾಷ್ಟ್ರ ರಾಜಧಾನಿ ದೆಹಲಿಯ ಜೈಪುರ್ ಗೋಲ್ಡನ್​ ಆಸ್ಪತ್ರೆಯಲ್ಲಿ ಆಕ್ಸಿಜನ್​ ಪೂರೈಕೆ ವ್ಯತ್ಯಯದಿಂದಾಗಿ 25 ರೋಗಿಗಳು ಸಾವನ್ನಪ್ಪಿದ್ದಾರೆ. ಕೇವಲ ಒಂದೇ ರಾತ್ರಿಯಲ್ಲಿ ಇಷ್ಟೊಂದು ರೋಗಿಗಳು ಸಾವನ್ನಪ್ಪಿರುವುದು ಇದೀಗ ರಾಷ್ಟ್ರ ರಾಜಧಾನಿಯಲ್ಲಿನ ಸ್ಥಿತಿ ತುಂಬಾ ಗಂಭೀರವಾಗಿದೆ ಎಂಬ ವಿಷಯ ಬಹಿರಂಗಗೊಳಿಸಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಜೈಪುರ್ ಗೋಲ್ಡನ್​ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಡಿಕೆ ಬೆಲುಜಾ, ನಮಗೆ ಸರ್ಕಾರದಿಂದ 3.5 ಮೆಟ್ರಿಕ್​ ಟನ್​ ಆಮ್ಲಜನಕ ನೀಡಲಾಗಿತ್ತು. ಸಂಜೆ 5 ಗಂಟೆ ಹೊತ್ತಿಗೆ ಸರಬರಾಜು ನಮ್ಮನ್ನು ತಲುಪಬೇಕಾಗಿತ್ತು. ಆದರೆ ಮಧ್ಯರಾತ್ರಿ ಹೊತ್ತಗೆ ಅದು ತಲುಪಿದೆ. ಹೀಗಾಗಿ ಆಕ್ಸಿಜನ್​ ಕೊರತೆಯಿಂದಾಗಿ 25 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: "ನನ್ನನ್ನು ಇಲ್ಲಿ ಸಾಯಿಸ್ತಾರೆ" ವಿಡಿಯೋ ಹರಿಬಿಟ್ಟ ಮಗ.. ಸಾವಿನ ಸುದ್ದಿ ಕೇಳಿ ತಾಯಿ ಆಕ್ರಂದನ!

ಈ ಆಸ್ಪತ್ರೆಯಲ್ಲಿ ದಾಖಲಾಗಿರುವ ಅನೇಕ ರೋಗಿಗಳ ಪೈಕಿ 215 ರೋಗಿಗಳಿಗೆ ಆಕ್ಸಿಜನ್ ಅವಶ್ಯಕತೆ ಇದೆ ಎಂದು ತಿಳಿದು ಬಂದಿದ್ದು, ಆಕ್ಸಿಜನ್​ ಕೊರತೆ ಬಗ್ಗೆ ಈ ಹಿಂದೆ ಸರ್ಕಾರಕ್ಕೆ ಮಾಹಿತಿ ಸಹ ನೀಡಿತ್ತು. ಇನ್ನು ದೆಹಲಿಯ ಗಂಗಾರಾಮ್​ ಆಸ್ಪತ್ರೆಯಲ್ಲೂ ಅನೇಕರು ಆಕ್ಸಿಜನ್ ಕೊರತೆಯಿಂದಾಗಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಪಂಜಾಬ್​, ಮಹಾರಾಷ್ಟ್ರದಲ್ಲೂ ರೋಗಿಗಳು ಸಾವು

ಪಂಜಾಬ್​ನಲ್ಲೂ ಆಕ್ಸಿಜನ್ ಕೊರತೆ ಉಂಟಾಗಿರುವ ಕಾರಣ ಅನೇಕರು ಸಾವನ್ನಪ್ಪಿದ್ದಾರೆ. ಪಂಜಾಬ್​ನ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ರೋಗಿಗಳು ಇದೇ ಕಾರಣಕ್ಕಾಗಿ ಸಾವನ್ನಪ್ಪಿದ್ದಾಗಿ ಮಾಹಿತಿ ಲಭ್ಯವಾಗಿದೆ.

ನವದೆಹಲಿ: ದೇಶದಲ್ಲಿ ಡೆಡ್ಲಿ ವೈರಸ್​ ಹಾವಳಿ ಜೋರಾಗಿರುವ ಕಾರಣ ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್​ ಸಮಸ್ಯೆ ಉಂಟಾಗಿದ್ದು, ಸರಿಯಾದ ಸಮಯಕ್ಕೆ ಆಮ್ಲಜನಕ ಪೂರೈಕೆಯಾಗದೇ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಇದೀಗ ರಾಷ್ಟ್ರ ರಾಜಧಾನಿ ದೆಹಲಿಯ ಜೈಪುರ್ ಗೋಲ್ಡನ್​ ಆಸ್ಪತ್ರೆಯಲ್ಲಿ ಆಕ್ಸಿಜನ್​ ಪೂರೈಕೆ ವ್ಯತ್ಯಯದಿಂದಾಗಿ 25 ರೋಗಿಗಳು ಸಾವನ್ನಪ್ಪಿದ್ದಾರೆ. ಕೇವಲ ಒಂದೇ ರಾತ್ರಿಯಲ್ಲಿ ಇಷ್ಟೊಂದು ರೋಗಿಗಳು ಸಾವನ್ನಪ್ಪಿರುವುದು ಇದೀಗ ರಾಷ್ಟ್ರ ರಾಜಧಾನಿಯಲ್ಲಿನ ಸ್ಥಿತಿ ತುಂಬಾ ಗಂಭೀರವಾಗಿದೆ ಎಂಬ ವಿಷಯ ಬಹಿರಂಗಗೊಳಿಸಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಜೈಪುರ್ ಗೋಲ್ಡನ್​ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಡಿಕೆ ಬೆಲುಜಾ, ನಮಗೆ ಸರ್ಕಾರದಿಂದ 3.5 ಮೆಟ್ರಿಕ್​ ಟನ್​ ಆಮ್ಲಜನಕ ನೀಡಲಾಗಿತ್ತು. ಸಂಜೆ 5 ಗಂಟೆ ಹೊತ್ತಿಗೆ ಸರಬರಾಜು ನಮ್ಮನ್ನು ತಲುಪಬೇಕಾಗಿತ್ತು. ಆದರೆ ಮಧ್ಯರಾತ್ರಿ ಹೊತ್ತಗೆ ಅದು ತಲುಪಿದೆ. ಹೀಗಾಗಿ ಆಕ್ಸಿಜನ್​ ಕೊರತೆಯಿಂದಾಗಿ 25 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: "ನನ್ನನ್ನು ಇಲ್ಲಿ ಸಾಯಿಸ್ತಾರೆ" ವಿಡಿಯೋ ಹರಿಬಿಟ್ಟ ಮಗ.. ಸಾವಿನ ಸುದ್ದಿ ಕೇಳಿ ತಾಯಿ ಆಕ್ರಂದನ!

ಈ ಆಸ್ಪತ್ರೆಯಲ್ಲಿ ದಾಖಲಾಗಿರುವ ಅನೇಕ ರೋಗಿಗಳ ಪೈಕಿ 215 ರೋಗಿಗಳಿಗೆ ಆಕ್ಸಿಜನ್ ಅವಶ್ಯಕತೆ ಇದೆ ಎಂದು ತಿಳಿದು ಬಂದಿದ್ದು, ಆಕ್ಸಿಜನ್​ ಕೊರತೆ ಬಗ್ಗೆ ಈ ಹಿಂದೆ ಸರ್ಕಾರಕ್ಕೆ ಮಾಹಿತಿ ಸಹ ನೀಡಿತ್ತು. ಇನ್ನು ದೆಹಲಿಯ ಗಂಗಾರಾಮ್​ ಆಸ್ಪತ್ರೆಯಲ್ಲೂ ಅನೇಕರು ಆಕ್ಸಿಜನ್ ಕೊರತೆಯಿಂದಾಗಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಪಂಜಾಬ್​, ಮಹಾರಾಷ್ಟ್ರದಲ್ಲೂ ರೋಗಿಗಳು ಸಾವು

ಪಂಜಾಬ್​ನಲ್ಲೂ ಆಕ್ಸಿಜನ್ ಕೊರತೆ ಉಂಟಾಗಿರುವ ಕಾರಣ ಅನೇಕರು ಸಾವನ್ನಪ್ಪಿದ್ದಾರೆ. ಪಂಜಾಬ್​ನ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ರೋಗಿಗಳು ಇದೇ ಕಾರಣಕ್ಕಾಗಿ ಸಾವನ್ನಪ್ಪಿದ್ದಾಗಿ ಮಾಹಿತಿ ಲಭ್ಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.