ರಾಮನಗರ:ಎರಡು ಚಿರತೆ ಮರಿಗಳು ಮೃತಪಟ್ಟಿರುವ ಘಟನೆ ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಲಕ್ಕಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಾಡುಹಂದಿ ದಾಳಿಗೆ ಒಳಗಾಗಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ನಿಖರ ಕಾರಣ ತಿಳಿಯಲಿದೆ.
ರಾಮನಗರ: ಎರಡು ಚಿರತೆ ಮರಿಗಳ ಕಳೇಬರ ಪತ್ತೆ
ಚಿರತೆ ಮರಿಗಳ ಕಳೇಬರ (ETV Bharat)
Published : Oct 21, 2024, 5:26 PM IST
ಲಕ್ಕಪ್ಪನಹಳ್ಳಿ ಗ್ರಾಮದ ಆಸುಪಾಸಿನ ಗುಡ್ಡಗಳಲ್ಲಿ ಚಿರತೆಗಳು ವಾಸವಾಗಿದ್ದು, ಸುತ್ತಮುತ್ತ ಓಡಾಟ ನಡೆಸುತ್ತವೆ. ಆಹಾರ ಅರಸಿ ಬಂದ ಸಂದರ್ಭದಲ್ಲಿ ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ:ಕೋಲಾರ: ಕಾಡುಪ್ರಾಣಿಗಳ ಬೇಟೆಗೆ ಹಾಕಿದ್ದ ತಂತಿಯ ಉರುಳಿಗೆ ಸಿಲುಕಿ ಚಿರತೆ ಸಾವು