ಕರ್ನಾಟಕ

karnataka

ಕದ್ದ ಚಿನ್ನ ಬೆಟ್ಟದಲ್ಲಿ ಬಚ್ಚಿಟ್ಟು, ಅತ್ತೆ ಮನೆಯಲ್ಲಿ ಅವಿತಿದ್ದ ಕಳ್ಳ ಸೆರೆ

By ETV Bharat Karnataka Team

Published : Aug 16, 2024, 3:32 PM IST

ಕಳ್ಳನ ಬಂಧನ
ಕಳ್ಳನ ಬಂಧನ (ETV Bharat)

ಬೆಂಗಳೂರು: ಮನೆಗಳ್ಳತನ ಮಾಡಿ ಕದ್ದ ಮಾಲನ್ನು ನಗರದ ಹೊರವಲಯದ ಬೆಟ್ಟದಲ್ಲಿ ಬಚ್ಚಿಡುತ್ತಿದ್ದ ಕಳ್ಳನನ್ನು ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ನೆಲಮಂಗಲದ ನರಸಿಂಹ ಬಂಧಿತ ಆರೋಪಿ.

ನಗರದಲ್ಲಿ ಯಾರೂ ಇಲ್ಲದ ಮನೆಗಳ ಬೀಗ ಮುರಿದು ಚಿನ್ನಾಭರಣ, ಹಣ ದೋಚುತ್ತಿದ್ದ ಆರೋಪಿ, ಬಳಕಿ ಅವುಗಳನ್ನು ಕೊಂಡೊಯ್ದು ಕುಣಿಗಲ್ ರಸ್ತೆಯ ಗುಡೇಮಾರಮಹಳ್ಳಿಯಲ್ಲಿರುವ ಬೆಟ್ಟದಲ್ಲಿನ ಬಂಡೆಗಳ ಬಳಿ ಬಚ್ಚಿಡುತ್ತಿದ್ದ. ನಂತರ ಪಕ್ಕದಲ್ಲೇ ಇರುವ ತನ್ನ ಅತ್ತೆ ಮನೆಗೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದ.

ಬಂಧಿತನಿಂದ 81.25 ಲಕ್ಷ ಮೌಲ್ಯದ 1 ಕೆ.ಜಿ ಚಿನ್ನಾಭರಣ, ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಸ್ನೇಹಿತ ಹಾಗು ಆತನ ಪ್ರೇಯಸಿಗೆ ಕದ್ದ ಚಿನ್ನಾಭರಣ ಕೊಟ್ಟ ಆರೋಪಿ ಸೇರಿ ಇಬ್ಬರ ಬಂಧನ - Bengaluru House Theft Case

ABOUT THE AUTHOR

...view details