ಕರ್ನಾಟಕ

karnataka

By ETV Bharat Karnataka Team

Published : Sep 12, 2024, 1:27 PM IST

ETV Bharat / snippets

ಹಾವೇರಿ: ಪ್ರಮೋದ್​ ಮುತಾಲಿಕ್​ ರಟ್ಟಿಹಳ್ಳಿ ನಗರ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ

Pramod Muthalik
ಪ್ರಮೋದ್​ ಮುತಾಲಿಕ್​ (ETV Bharat)

ಹಾವೇರಿ: ಶ್ರೀ ರಾಮಸೇನೆ ಸಂಸ್ಥಾಪಕ ಪ್ರಮೋದ್​ ಮುತಾಲಿಕ್​, ಗಣೇಶ ಮೂರ್ತಿ ನಿಮಜ್ಜನ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ, ಜಿಲ್ಲೆಯ ರಟ್ಟಿಹಲ್ಲಿ ಪಟ್ಟಣಕ್ಕೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್​ ದಾನಮ್ಮನವರ್​ ಆದೇಶಿಸಿದ್ದಾರೆ.

ರಟ್ಟಿಹಳ್ಳಿ ನಗರದ ಶ್ರೀ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾನೆ ವೇಳೆ ಈ ಹಿಂದೆ ಗಲಭೆ ನಡೆದಿತ್ತು. ರಟ್ಟಿಹಳ್ಳಿ ಪಟ್ಟಣದ ಕುರುಬಗೇರಿ ಕ್ರಾಸ್ ಬಳಿ ಶ್ರೀ ಬೀರಲಿಂಗೇಶ್ವರ ಗೆಳೆಯರ ಬಳಗ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿ ನಿಮಜ್ಜನ ಕಾರ್ಯಕ್ರಮ ಗುರುವಾರ ನಡೆಯಲಿದೆ. ಮೆರವಣಿಗೆ ವೇಳೆ ಪ್ರಮೋದ್​ ಮುತಾಲಿಕ್​ ಭಾಷಣ ಗಲಭೆ ಹೆಚ್ಚಿಸುವ ಸಾಧ್ಯತೆ ಇದೆ. ಈ ಹಿನ್ನೆಲೆ ನಿಮಜ್ಜನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದನ್ನು ತಡೆಯಲು, ಹಾವೇರಿ ಜಿಲ್ಲಾಡಳಿತ 15 ದಿನಗಳ ಕಾಲ ಮುತಾಲಿಕ್​ಗೆ ರಟ್ಟಿಹಳ್ಳಿ ನಗರಕ್ಕೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಿದೆ. ಸೆಪ್ಟೆಂಬರ್ 7 ರಿಂದ 21ರ ವರೆಗೆ ಪ್ರಮೋದ್ ಮುತಾಲಿಕ್​ಗೆ​ ನಗರ ಪ್ರವೇಶ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ:ಹಿಂದೂಗಳ ಹಬ್ಬವಿದ್ದಾಗ ಮಾತ್ರ ಸರ್ಕಾರಕ್ಕೆ ಕಾನೂನುಗಳು ನೆನಪಾಗುತ್ತವೆ: ಪ್ರಮೋದ್​ ಮುತಾಲಿಕ್ ಅಸಮಾಧಾನ - Pramod Muthalik

ABOUT THE AUTHOR

...view details