ಶಿವಮೊಗ್ಗ:ಜಿಲ್ಲೆಯ ಉಂಬ್ಳೆಬೈಲು ವಲಯ ವ್ಯಾಪ್ತಿಯಲ್ಲಿ ಕಡವೆ ಬೇಟೆಯಾಡಿದ್ದ ನಾಲ್ವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ಕಾಡಿನಲ್ಲಿ ಕಡವೆ ಕೊಂದು, ಮಾಂಸ ಹಂಚಿಕೊಳ್ಳುವಾಗ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದು, ನಾಲ್ವರು ಸಿಕ್ಕಿಬಿದ್ದಿದ್ದಾರೆ.
ಭದ್ರಾವತಿಯ ಹಿರಿಯೂರಿನ ಗೊಂದಿ ಗ್ರಾಮದ ನಿವಾಸಿಗಳಾದ ಶಿವ (28), ವೆಂಕಟೇಶ್ (60), ಚಿಕ್ಕಮಗಳೂರು ಜಿಲ್ಲೆ ಚೌಡಿಕಟ್ಟೆಯ ಭೈರಾಪುರ ಗ್ರಾಮದ ಮಂಜಪ್ಪ (45) ಹಾಗೂ ವಿನೋದ್ (19) ಬಂಧಿತರು. ಇವರನ್ನು ಎನ್.ಆರ್.ಪುರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.