ಕರ್ನಾಟಕ

karnataka

ಪ್ರೇಯಸಿಯ ವಿಲಾಸಿ ಜೀವನ ತೃಪ್ತಿಪಡಿಸಲು ಕಳ್ಳತನ: ಆರೋಪಿ ಬಂಧನ

By ETV Bharat Karnataka Team

Published : Sep 5, 2024, 3:05 PM IST

THIEF ARRESTED IN ANEKAL
ಬಂಧಿತ ಆರೋಪಿಯೊಂದಿಗೆ ಪೊಲೀಸ್​ ಸಿಬ್ಬಂದಿ (ETV Bharat)

ಆನೇಕಲ್ :ಪ್ರೇಯಸಿಯನ್ನು ತೃಪ್ತಿಪಡಿಸಲು ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಜಿಗಣಿ ಪೊಲೀಸರು ಸಫಲರಾಗಿದ್ದಾರೆ.

ಸರ್ಜಾಪುರದ ಚಿಕ್ಕದಾಸರಹಳ್ಳಿಯ ಲಕ್ಷ್ಮಣ್ (38) ಬಂಧಿತ ಆರೋಪಿ. ಸೂರ್ಯನಗರ, ಅತ್ತಿಬೆಲೆ, ಜಿಗಣಿ ಸೇರಿದಂತೆ ಬಂಧಿತ ಆರೋಪಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 23 ಪ್ರಕರಣಗಳಲ್ಲಿ ಬೇಕಾಗಿದ್ದ. ತನ್ನ ಪ್ರೇಯಸಿಯ ವಿಲಾಸಿ ಜೀವನ ತೃಪ್ತಿಪಡಿಸಲು ಕಳ್ಳತನ ಮಾಡುತ್ತಿದ್ದುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ವಾಬಸಂದ್ರದ ಗೋಪಾಲಸ್ವಾಮಿ ಎಂಬುವರ ಮನೆ ಬಾಗಿಲು ಮುರಿದು 7,25,000 ಬೆಲೆ ಬಾಳುವ ಚಿನ್ನಾಭರಣ ಕಳ್ಳತನ ಮಾಡಿದ್ದ. ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇನ್ಸ್​ಪೆಕ್ಟರ್ ಬಿಎಸ್ ಮುಂಜುನಾಥ್, ಎಸ್ಐ ಶಿವಲಿಂಗಾನಾಯಕ್, ಎಸ್ಐ ಶಭನಾ ಮಕಂದಾರ್ ತಂಡ ಆರೋಪಿಯನ್ನು ಬಂಧಿಸಿದ್ದು, ಅವನಿಂದ ಎಂಟು ಲಕ್ಷ ಮೌಲ್ಯದ ಕಳ್ಳತನ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ. ಲಕ್ಷ್ಮಣ್ ನುರಿತ ಕಳ್ಳನಾಗಿದ್ದು, ಪದೇ ಪದೆ ಸಿಕ್ಕಿ ಬಿದ್ದು ಜೈಲಿದೆ ಹೋಗಿ ಹೊರಬರುತ್ತಿದ್ದ.

ಇದನ್ನೂ ಓದಿ:ಬೆಂಗಳೂರು: ದುಬಾರಿ ಬೆಲೆಯ 38 ರೇಷ್ಮೆ ಸೀರೆ ಕಳ್ಳತನ, ನಾಲ್ವರು ಆರೋಪಿಗಳ ಬಂಧನ

ABOUT THE AUTHOR

...view details