ಕರ್ನಾಟಕ

karnataka

ETV Bharat / state

ಬೆಂಗಳೂರು: ಕಾಲೇಜು ಸಿಬ್ಬಂದಿಗೆ ಚಾಕು ಇರಿದು ಕೊಂದ ಪಾನಮತ್ತ ವಿದ್ಯಾರ್ಥಿ! - Murder in college

ಪಾನಮತ್ತ ವಿದ್ಯಾರ್ಥಿಯೊಬ್ಬ ಕಾಲೇಜು ಸಿಬ್ಬಂದಿಗೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಅಮೃತಹಳ್ಳಿ ಠಾಣಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

By ETV Bharat Karnataka Team

Published : Jul 3, 2024, 6:15 PM IST

Updated : Jul 3, 2024, 8:37 PM IST

BENGALURU  MURDER IN COLLEGE  MURDER CASE  STUDENT KILLED COLLEGE STAFF
ಕಾಲೇಜು ಸಿಬ್ಬಂದಿಗೆ ಚಾಕು ಇರಿದು ಹತ್ಯೆ: ಪಾನಮತ್ತ ವಿದ್ಯಾರ್ಥಿಯಿಂದ ಕೃತ್ಯ (ETV Bharat)

ಬೆಂಗಳೂರು:ವಿದ್ಯಾರ್ಥಿಯೊಬ್ಬ ತನ್ನ ಕಾಲೇಜಿನ ಸಿಬ್ಬಂದಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಸಿಂಧಿ ಕಾಲೇಜಿನಲ್ಲಿ ನಡೆದಿದೆ. ಅಸ್ಸೋಂ ಮೂಲದ ಜೈಕಿಶೋರ್ ರಾಯ್ (52) ಮೃತ ವ್ಯಕ್ತಿ. ಬಿಹಾರ ಮೂಲದ 22 ವರ್ಷದ ಆರೋಪಿ ಭಾರ್ಗವ್ ಎಂಬಾತನನ್ನು ಅಮೃತಹಳ್ಳಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಎ. ವ್ಯಾಸಾಂಗ ಮಾಡುತ್ತಿದ್ದ ಭಾರ್ಗವ್, ಇಂದು ಮಧ್ಯಾಹ್ನ 3.30ರ ಸುಮಾರಿಗೆ ಪಾನಮತ್ತನಾಗಿ ಕಾಲೇಜು ಬಳಿ ಬಂದಿದ್ದ. ಕಾಲೇಜಿನಲ್ಲಿ ಕಾರ್ಯಕ್ರಮ ಸಹ ಇತ್ತು. ಪಾನಮತ್ತನಾಗಿದ್ದ ಭಾರ್ಗವ್​ನನ್ನು ಕಾಲೇಜು ಆವರಣದೊಳಗೆ ಬಿಡಲು ಜೈಕಿಶೋರ್ ರಾಯ್ ನಿರಾಕರಿಸಿದ್ದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಬಳಿಕ ಸ್ಥಳದಿಂದ ತೆರಳಿದ್ದ ಭಾರ್ಗವ್, ಅಂಗಡಿಯೊಂದರಲ್ಲಿ ಚಾಕು ಖರೀದಿಸಿ ಕೆಲ ಸಮಯದ ಬಳಿಕ ಪುನಃ ಕಾಲೇಜು ಬಳಿ ಬಂದಿದ್ದ. ಕಾಲೇಜು ಪ್ರವೇಶಿಸಲು ನಿರಾಕರಿಸಿದ್ದ ಜೈಕಿಶೋರ್ ಎದೆಗೆ ಚಾಕುವಿನಿಂದ ಐದಾರು ಬಾರಿ ಇರಿದಿದ್ದ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಜೈಕಿಶೋರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಅಮೃತಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಆರೋಪಿಯನ್ನ ವಶಕ್ಕೆ ಪಡೆದಲಾಗಿದೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ಇದನ್ನೂ ಓದಿ:ಭೀಮಾ ತೀರಕ್ಕೆ ಕಂಟ್ರಿ ಪಿಸ್ತೂಲ್ ಪೂರೈಸುತ್ತಿದ್ದ ಪ್ರಮುಖ ಆರೋಪಿ ಬಂಧನ

Last Updated : Jul 3, 2024, 8:37 PM IST

ABOUT THE AUTHOR

...view details