ಬೆಂಗಳೂರು: ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಅವರನ್ನು ಇಂದು ಆರ್.ಆರ್.ನಗರದ ಪಟ್ಟಣಗೆರೆಯ ಶೆಡ್ಗೆ ಕರೆದೊಯ್ದ ಪೊಲೀಸರು ಸ್ಥಳ ಮಹಜರು ನಡೆಸಿದರು. ಈ ಶೆಡ್ ಆರೋಪಿಗಳ ಪೈಕಿ ಓರ್ವನಾದ ವಿನಯ್ ಸೋದರ ಮಾವನ ಒಡೆತನದಲ್ಲಿದೆ. ಇಲ್ಲಿಗೆ ದರ್ಶನ್ ಹೋಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಮಹಜರು ನಡೆಸಲಾಗಿದೆ.
ರೇಣುಕಾಸ್ವಾಮಿ ಹತ್ಯೆಗೈದ ಸ್ಥಳಕ್ಕೆ ದರ್ಶನ್ ಕರೆದೊಯ್ದು ಮಹಜರು ನಡೆಸಿದ ಪೊಲೀಸರು - Renukaswamy Murder Case - RENUKASWAMY MURDER CASE
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಆರ್.ನಗರದ ಪಟ್ಟಣಗೆರೆಯ ಶೆಡ್ಗೆ ಆರೋಪಿ ದರ್ಶನ್ ಕರೆದೊಯ್ದು ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ (ETV Bharat)
Published : Jun 12, 2024, 4:37 PM IST
ರೇಣುಕಾಸ್ವಾಮಿ ಕೊಲೆ ಪ್ರಕರಣದ ಸ್ಥಳ ಮಹಜರು (ETV Bharat)
ದರ್ಶನ್ ಶೆಡ್ ಬಳಿ ಯಾವಾಗ ಹೋಗಿದ್ದರು?, ರೇಣುಕಾಸ್ವಾಮಿ ಅವರನ್ನು ಎಲ್ಲಿರಿಸಲಾಗಿತ್ತು?, ಯಾವ ರೀತಿ ಹಲ್ಲೆ ಮಾಡಲಾಗಿತ್ತು?, ನೀವು ಹಲ್ಲೆ ಮಾಡಿದ್ದೀರಾ?, ನಿಮ್ಮದುರಿನಲ್ಲೇ ಇತರರಿಂದ ಹಲ್ಲೆ ನಡೆದಿತ್ತಾ? ಹಲ್ಲೆಯನ್ನು ನೀವು ತಡೆಯಲಿಲ್ಲವೇ? ಎಂಬೆಲ್ಲಾ ವಿವರಣೆಯನ್ನು ಪೊಲೀಸರು ಪಡೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ರೇಣುಕಾಸ್ವಾಮಿ ಶವ ಎಸೆದಿದ್ದ ಜಾಗ ತೋರಿಸಿದ ಆರೋಪಿಗಳು - Renukaswamy Murder case