ಕರ್ನಾಟಕ

karnataka

By ETV Bharat Karnataka Team

Published : Apr 26, 2024, 2:59 PM IST

Updated : Apr 26, 2024, 3:21 PM IST

ETV Bharat / state

ಬಾರ್​ಗೆ ಅನುಮತಿ ಖಂಡಿಸಿ ಮತದಾನ ಬಹಿಷ್ಕಾರ, ಗ್ರಾಮಸ್ಥರ ಮನವೊಲಿಸಿದ ಅಧಿಕಾರಿಗಳು-ಜನಪ್ರತಿನಿಧಿಗಳು - Voting by Villagers

ಕೋಲಾರದ ಬೆಗ್ಲಿಬೆಣಜೇನಹಳ್ಳಿಯಲ್ಲಿ ಮತದಾನ ಬಹಿಷ್ಕರಿಸಿ ಪ್ರತಿಭಟನೆ ಕೈಗೊಂಡಿದ್ದ ಗ್ರಾಮಸ್ಥರ ಮನವೊಲಿಸುವಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಶಸ್ವಿಯಾಗಿದ್ದಾರೆ.

POLLING BOYCOTT  OFFICIALS POLITICAL LEADERS  PERSUADED BY VILLAGERS  KOLAR
ಗ್ರಾಮಸ್ಥರ ಮನವೊಲಿಸಿದ ಅಧಿಕಾರಿಗಳು-ಜನಪ್ರತಿನಿಧಿಗಳು

ಗ್ರಾಮಸ್ಥರ ಮನವೊಲಿಸಿದ ಅಧಿಕಾರಿಗಳು-ಜನಪ್ರತಿನಿಧಿಗಳು

ಕೋಲಾರ:ತಾಲ್ಲೂಕಿನ ಬೆಗ್ಲಿಬೆಣಜೇನಹಳ್ಳಿ ಗ್ರಾಮದಲ್ಲಿ ಬಾರ್​ಗೆ ಅನುಮತಿ ನೀಡಿದ್ದನ್ನು ಖಂಡಿಸಿ ಮತದಾನ ಬಹಿಷ್ಕರಿಸಲಾಗಿತ್ತು. ಮತದಾನ ಸಮಯ ಕಳೆದ್ರೂ ಸಹ ಮತಗಟ್ಟೆ ಸಂಖ್ಯೆ 249ಗೆ ಏಜೆಂಟರು ಹಾಗೂ ಮತದಾರರು ಯಾರೂ ಸುಳಿಯುತ್ತಿರಲಿಲ್ಲ. ಬಾರ್ ಸ್ಥಳಾಂತರ ಮಾಡುವ ಭರವಸೆ ನೀಡಿದ ನಂತರ ಮತದಾನ ಮಾಡುವುದಾಗಿ ಗ್ರಾಮಸ್ಥರು ಪಟ್ಟು ಹಿಡಿದಿದ್ದರು.

ಇನ್ನು ಮತದಾನ ಬಹಿಷ್ಕರಿಸಿ ಪ್ರತಿಭಟನೆ ಕೈಗೊಂಡಿರುವ ಮಾಹಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ತಿಳಿದಿತ್ತು. ಕೂಡಲೇ ಗ್ರಾಮದ ಕಡೆ ಸುಳಿದ ಅಧಿಕಾರಿಗಳು ಮದ್ಯದಂಗಡಿ ಶಿಫ್ಟ್ ಮಾಡುವ ಭರವಸೆ ನೀಡಿದರು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮನವಿಗೆ ಸ್ಪಂದಿಸಿದ ಗ್ರಾಮಸ್ಥರು ಮತದಾನ ಮಾಡಲು ಮುಂದಾದರು.

ಸುಮಾರು 567 ಮತದಾರರಿರುವ ಬೆಗ್ಲಿಬೆಣಜೇನಹಳ್ಳಿಯಲ್ಲಿ ಮತದಾರರು ಸಾಲುಗಟ್ಟಿ ನಿಂತು ಮತದಾನ ಮಾಡುತ್ತಿದ್ದಾರೆ. ಬೆಳಗಿನಿಂದಲೂ ಮತದಾನದಿಂದದೂರ ಉಳಿದಿದ್ದ ಗ್ರಾಮಸ್ಥರು ಮದ್ಯದಂಗಡಿ ಶಿಫ್ಟ್ ಮಾಡುವ ಭರವಸೆ ಬಳಿಕ ತಮ್ಮ ಹಕ್ಕು ಚಲಾಯಿಸಲು ಮುಂದಾದರು.

ಓದಿ:ದೊಡ್ಡರಸಿನಕೆರೆ ಗ್ರಾಮದಲ್ಲಿ ಸಂಸದೆ ಸುಮಲತಾ ಅಂಬರೀಶ್‌ ಮತದಾನ - Mandya MP Sumalatha Ambarish

Last Updated : Apr 26, 2024, 3:21 PM IST

ABOUT THE AUTHOR

...view details