ಮಂಗಳೂರು:ವಾರದಲ್ಲಿ ಮೂರು ದಿನ ಸಂಚರಿಸುವ ಮಂಗಳೂರು ಜಂಕ್ಷನ್-ಯಶವಂತಪುರ (ರೈಲು ಸಂಖ್ಯೆ 16576) ವೇಳಾಪಟ್ಟಿ ಬದಲಾಗಿದೆ. ಪರಿಷ್ಕೃತ ವೇಳಾಪಟ್ಟಿ ಪ್ರಕಾರ, ಈ ರೈಲು ಬೆಳಿಗ್ಗೆ 7 ಗಂಟೆಗೆ ಮಂಗಳೂರು ಜಂಕ್ಷನ್ನಿಂದ ಹೊರಟು ಸಂಜೆ 4.30ಕ್ಕೆ ಬೆಂಗಳೂರಿನ ಯಶವಂತಪುರ ನಿಲ್ದಾಣ ತಲುಪಲಿದೆ. ಈ ರೈಲು ಈ ಹಿಂದೆ ಮಂಗಳೂರಿನಿಂದ ಬೆಳಗ್ಗೆ 11.30ಕ್ಕೆ ಹೊರಟು ರಾತ್ರಿ 8.45ಕ್ಕೆ ಯಶವಂತಪುರ ತಲುಪುತ್ತಿತ್ತು.
ಹೊಸ ವೇಳಾಪಟ್ಟಿ ಪ್ರಕಾರ, ಮಂಗಳೂರು ಜಂಕ್ಷನ್ನಿಂದ 7 ಗಂಟೆಗೆ, ಬಂಟ್ವಾಳದಿಂದ 7.35ಕ್ಕೆ, ಕಬಕ ಪುತ್ತೂರಿನಿಂದ 8.22, ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಿಂದ 9.10, ಸಕಲೇಶಪುರದಿಂದ 11.40ಕ್ಕೆ, ಆಲೂರಿನಿಂದ ಮಧ್ಯಾಹ್ನ 12.15ಕ್ಕೆ, ಹಾಸನದಿಂದ 1.10ಕ್ಕೆ ಚನ್ನರಾಯಪಟ್ಟಣದಿಂದ 1.22ಕ್ಕೆ, ಶ್ರವಣಬೆಳಗೊಳದಿಂದ 1.32ಕ್ಕೆ, ಬಾಲಗಂಗಾಧರನಾಥ ನಗರ ನಿಲ್ದಾಣದಿಂದ 1.59ಕ್ಕೆ, ಯಡಿಯೂರಿನಿಂದ 2.12ಕ್ಕೆ, ಕುಣಿಗಲ್ನಿಂದ 2.25ಕ್ಕೆ, ನೆಲಮಂಗಲದಿಂದ 3ಕ್ಕೆ, ಚಿಕ್ಕಬಾಣಾವರದಿಂದ 3.45ಕ್ಕೆ ಹೊರಡಲಿದೆ.