ಕರ್ನಾಟಕ

karnataka

ETV Bharat / state

Karnataka Today - Live News: ಕರ್ನಾಟಕ Fri Oct 11 2024 ಇತ್ತೀಚಿನ ಸುದ್ದಿ

By Karnataka Live News Desk

Published : 5 hours ago

Updated : 56 minutes ago

Etv Bharat
Etv Bharat (Etv Bharat)

11:33 AM, 11 Oct 2024 (IST)

ಬೆಂಗಳೂರು: ಆರ್‌ಬಿಐಗೆ ₹50 ಲಕ್ಷ ನಕಲಿ ನೋಟು ತಂದು ಅಸಲಿ ನೋಟು ಪಡೆಯಲು ಯತ್ನ: ಐವರ ಬಂಧನ

ನಕಲಿ ನೋಟುಗಳನ್ನು ಮುದ್ರಿಸಿಕೊಂಡು ಬ್ಯಾಂಕ್​ನಲ್ಲಿ ಬದಲಾವಣೆಗೆ ಯತ್ನಿಸಿದ ಆರೋಪದ ಮೇಲೆ ಐವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. | Read More

ETV Bharat Live Updates - BENGALURU POLICE

11:28 AM, 11 Oct 2024 (IST)

ರಾಜ್ಯವನ್ನು ವಾಮ ಮಾರ್ಗ, ಮೋಸದಿಂದ ಸ್ಥಿರಗೊಳಿಸುವ ಸರ್ಕಾರ ಕಾಂಗ್ರೆಸ್​: ಹೆಚ್​.ಡಿ. ಕುಮಾರಸ್ವಾಮಿ

ರಾಜ್ಯ ಕಾಂಗ್ರೆಸ್​ ಸರ್ಕಾರ ಪತ್ರಿಕೆಯಲ್ಲಿ ನೀಡಿದ ಜಾಹೀರಾತನ್ನು ಟೀಕಿಸಿರುವ ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ ಅವರು ಕರ್ನಾಟಕವನ್ನು ವಾಮ ಮಾರ್ಗ, ಮೋಸದಿಂದ ಸ್ಥಿರಗೊಳಿಸುವ ಸರ್ಕಾರ ಕಾಂಗ್ರೆಸ್ ಎಂದು ಆರೋಪಿಸಿದ್ದಾರೆ. | Read More

ETV Bharat Live Updates - CONGRESS GOVERNMENT

11:04 AM, 11 Oct 2024 (IST)

ಕೇಂದ್ರ ವಿತರಿಸುವ ಅಕ್ಕಿಗೆ ಶೇ.1ರಷ್ಟು ಪೌಷ್ಟಿಕಾಂಶ ಸೇರ್ಪಡೆ: ಪ್ರಲ್ಹಾದ್​ ಜೋಶಿ

ಕೇಂದ್ರ ಸರ್ಕಾರ ವಿತರಣೆ ಮಾಡುವ ಅಕ್ಕಿಗೆ ಶೇ.1ರಷ್ಟು ಪೌಷ್ಟಿಕಾಂಶ ಸೇರ್ಪಡೆ ಮಾಡಲಾಗುವುದು. 5 ವರ್ಷ ಸಾರವರ್ಧಿತ ಅಕ್ಕಿ ನೀಡುವ ಯೋಜನೆ ಇದಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ತಿಳಿಸಿದ್ದಾರೆ. | Read More

ETV Bharat Live Updates - PRALHAD JOSHI

09:53 AM, 11 Oct 2024 (IST)

ಅಡವಿಟ್ಟ ಚಿನ್ನಾಭರಣ ಬಿಡಿಸಿಕೊಡಿ ಎಂದ ಪತ್ನಿಗೆ ಬೆಂಕಿ ಇಟ್ಟ ಗಂಡ: ಪತಿ, ಅತ್ತೆ, ಮಾವನಿಗೆ ಜೀವಾವಧಿ ಶಿಕ್ಷೆ

ಪತಿ, ಅತ್ತೆ ಹಾಗೂ ಮಾವ ಸೇರಿಕೊಂಡು ಗೃಹಿಣಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ನ್ಯಾಯಾಲಯವು ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ. | Read More

ETV Bharat Live Updates - WOMAN MURDER CASE

09:36 AM, 11 Oct 2024 (IST)

ಯುವ ದಸರಾ 2024: ಸಂಗೀತ ಮಾಂತ್ರಿಕ ಇಳಯರಾಜಾ ಗಾಯನಕ್ಕೆ ಮಳೆರಾಯನೂ ಕೂಲ್​ ಕೂಲ್!

ನಿನ್ನೆಯ ಯುವ ದಸರಾದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಈ ವೇಳೆ ತಾವು ಮೈಸೂರಿಗೆ ಮೊದಲು ಭೇಟಿ ನೀಡಿದ ಕ್ಷಣವನ್ನು ನೆನಪಿಸಿಕೊಂಡರು. | Read More

ETV Bharat Live Updates - MUSIC DIRECTOR ILAIYARAAJA

09:02 AM, 11 Oct 2024 (IST)

ದಾವಣಗೆರೆ: ಭಾರಿ ಮಳೆಗೆ ರೈಲ್ವೆ ಕೆಳಸೇತುವೆಯಲ್ಲಿ ಮುಳುಗಿದ ಟ್ರ್ಯಾಕ್ಟರ್‌: 10 ಜನರ ರಕ್ಷಣೆ

ಭಾರಿ ಮಳೆಯಿಂದ ದಾವಣಗೆರೆ ಜಿಲ್ಲೆಯ ರೈಲ್ವೆ ಕೆಳಸೇತುವೆಯಲ್ಲಿ ಸಂಗ್ರಹವಾಗಿದ್ದ ನೀರಿನಲ್ಲಿ ಟ್ರ್ಯಾಕ್ಟರ್‌ವೊಂದು ಮುಳುಗಿತ್ತು. ಅಪಾಯಕ್ಕೆ ಸಿಲುಕಿದ್ದ 10 ಜನರನ್ನು ಅಗ್ನಿಶಾಮಕ ಹಾಗೂ ತುರ್ತುಸೇವಾ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. | Read More

ETV Bharat Live Updates - PEOPLE RESCUED FROM WATER

07:30 AM, 11 Oct 2024 (IST)

ಕಲಬುರಗಿ: ಭೀಮಾ ನದಿಯಲ್ಲಿ ಬಾಲಕಿಯರಿಬ್ಬರು ಸಾವು; ಹೃದಯಾಘಾತದಿಂದ ವ್ಯಕ್ತಿ ಮೃತ

ಪ್ರತ್ಯೇಕ ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಭೀಮಾ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವನ್ನಪ್ಪಿದರೆ, ಹೋಟೆಲ್​ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇದರ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. | Read More

ETV Bharat Live Updates - KALABURAGI

07:02 AM, 11 Oct 2024 (IST)

ಕೋವಿಡ್ ಅವ್ಯವಹಾರ: ಡಿಸಿಎಂ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಿ ಸಿಎಂ ಆದೇಶ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ವೇಳೆ ಉಪಕರಣ ಖರೀದಿ ಅಕ್ರಮ ಕುರಿತಂತೆ ಅಗತ್ಯ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಉಪಸಮಿತಿ ರಚಿಸಿ ಆದೇಶಿಸಿದ್ದಾರೆ. | Read More

ETV Bharat Live Updates - COVID SCANDAL

07:01 AM, 11 Oct 2024 (IST)

ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಕಿರುಕುಳ ಪ್ರಕರಣ: ಸಿಐಡಿ ಹೆಗಲಿಗೆ ತನಿಖೆಯ ಹೊಣೆ

ಶಾಸಕ ವಿನಯ್ ಕುಲಕರ್ಣಿ ವಿರುದ್ಧ ದಾಖಲಾದ ಲೈಂಗಿಕ ಕಿರುಕುಳ ಆರೋಪ ಪ್ರಕರಣ ಹಾಗೂ ಶಾಸಕರ ದೂರಿನ ಸಂಬಂಧ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. | Read More

ETV Bharat Live Updates - MLA VINAY KULKARNI
Last Updated : 56 minutes ago

ABOUT THE AUTHOR

...view details