ಕರ್ನಾಟಕ

karnataka

ETV Bharat / state

ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವಂತಿರೋ ಸರ್ಕಾರಿ ಶಾಲೆ: ಮುಸ್ಲಿಮರೇ ಹೆಚ್ಚಿರುವ ಊರಲ್ಲಿ ಕನ್ನಡ ಶಾಲೆಗೆ ಬರುತ್ತಿರುವ ಮಕ್ಕಳು! - HighTech Government School - HIGHTECH GOVERNMENT SCHOOL

ಶಾಲೆಯನ್ನು ಅಭಿವೃದ್ಧಿ ಮಾಡುವ ಮುಖ್ಯಶಿಕ್ಷಕ ಎಂ.ಎಂ ಚಂದ್ರಪ್ಪ ಹಾಗೂ ನಾನು ಎಸ್​ಡಿಎಂಸಿ ಅಧ್ಯಕ್ಷ ಗೌಸ್ ಪೀರ್ ಅವರ ಕನಸಿಗೆ ರಾಮಗನರ ಊರಿನ ಗ್ರಾಮಸ್ಥರೇ ಬೆನ್ನೆಲುಬಾಗಿ ನಿಂತವರು.

HighTech Government School
ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವಂತಿರೋ ಸರ್ಕಾರಿ ಶಾಲೆ (ETV Bharat)

By ETV Bharat Karnataka Team

Published : Jul 6, 2024, 10:38 PM IST

ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವಂತಿರೋ ಸರ್ಕಾರಿ ಶಾಲೆ (ETV Bharat)

ದಾವಣಗೆರೆ: ಸರ್ಕಾರಿ ಶಾಲೆ ಎಂದರೇ ಮೂಗು ಮುರಿಯುವವರೇ ಹೆಚ್ಚು. ಅದರಲ್ಲೂ ಪ್ರಸ್ತುತ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಸಂಖ್ಯೆ ಅಧಿಕವಾಗಿದೆ. ಆದರೆ ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪುಟ್ಟ ಸರ್ಕಾರಿ ಶಾಲೆ ಇದೀಗ ಫುಲ್ ಹೈಟೆಕ್ ಆಗಿದೆ. ವಿಶೇಷ ಎಂದರೆ ಈ ಶಾಲೆಯಲ್ಲಿರುವ ವ್ಯವಸ್ಥೆ ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವಂತಿವೆ. ಈ ಶಾಲೆ ಇರುವ ಗ್ರಾಮದಲ್ಲಿ ಮುಸ್ಲಿಂ ಸಮುದಾಯದವರೇ ಹೆಚ್ಚಿದ್ದು, ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಿ ಉರ್ದು ಬದಲು ಕನ್ನಡದ ಪ್ರೇಮ ಮೆರೆದಿದ್ದಾರೆ.

ಹರಪನಹಳ್ಳಿ ತಾಲೂಕಿನ ರಾಮನಗರದಲ್ಲಿರುವ ಪುಟ್ಟ ಸರ್ಕಾರಿ ಶಾಲೆ ಇದೀಗ ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವ ರೀತಿ ತಲೆ ಎತ್ತಿದೆ. ಊರಿನ ಹೆಸರಿನಲ್ಲೇ ರಾಮನಿರುವ ರಾಮನಗರ ಗ್ರಾಮದಲ್ಲಿ ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ‌. ಗ್ರಾಮದ ಗ್ರಾಮಸ್ಥರು ತಮ್ಮ ಮಕ್ಕಳನ್ನು ಉರ್ದು ಶಾಲೆಗೆ ಸೇರಿಸುವ ಬದಲು ಸರ್ಕಾರಿ ಶಾಲೆಗೆ ಸೇರಿಸಿ ಕನ್ನಡ ಪ್ರೇಮ ಮೆರೆದಿದ್ದಾರೆ.

ಅಲ್ಲದೇ ಈ ಶಾಲೆಯನ್ನು ಹೈಟೆಕ್ ಶಾಲೆ ಮಾಡುವಲ್ಲಿ ಮುಸ್ಲಿಂ ಸಮುದಾಯದ ಪಾತ್ರ ಹೆಚ್ಚಿದೆ. ದಾಖಲಾತಿಯಲ್ಲಿ ವಿಶೇಷ ಸಾಧನೆ ಮಾಡುವಲ್ಲಿ ಶಾಲೆಯ ಮುಖ್ಯಶಿಕ್ಷಕ ಎಂ.ಎಂ. ಚಂದ್ರಪ್ಪ ಅವರ ಶ್ರಮ ಕೂಡ ಅಧಿಕವಾಗಿದೆ. ಈ ಶಾಲೆ ಗುಣಮಟ್ಟದ ಶಿಕ್ಷಣ, ಕಟ್ಟಡ, ಉತ್ತಮ ವಾತಾರಣದ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನೀಡುವಂತೆ ಮಾಡಿದ್ದೇ ಚಂದ್ರಪ್ಪ ಅವರು. ಇದಕ್ಕೆ ಬೆನ್ನೆಲುಬಾಗಿ ಗ್ರಾಮಸ್ಥರು ನಿಂತಿದ್ದು, ಸಾಧನೆ ಮಾಡಲು ಸಾಧ್ಯವಾಗಿದೆ.

"ನಮ್ಮದು ದಾಖಲಾತಿ ಹೆಚ್ಚಿರುವ ಶಾಲೆಯಾಗಿದೆ. ಕಾನ್ವೆಂಟ್ ರೀತಿಯಲ್ಲಿ ನಲಿ-ಕಲಿ ಮೂರು ಘಟಕಗಳನ್ನು ತೆಗೆದಿದ್ದು, ಸಮವಸ್ತ್ರ, ಐಡಿ ಕಾರ್ಡ್, ಸ್ಮಾರ್ಟ್ ಕ್ಲಾಸ್, ವ್ಯವಸ್ಥೆ ಮಾಡಿದ್ದೇವೆ. ಕುಡಿಯುವ ನೀರಿಗಾಗಿ ವಾಟರ್ ಫಿಲ್ಟರ್ ಇದೆ. ಅಲ್ಪಾಸಂಖ್ಯಾತ ಮಕ್ಕಳೇ ಹೆಚ್ಚಿದ್ದು ಉರ್ದು ಶಾಲೆಗೆ ಸೇರಿಸಬಹುದಿತ್ತು. ಬದಲಿಗೆ ಕನ್ನಡ ಶಾಲೆಗೆ ಸೇರಿಸಿ ಕನ್ನಡವನ್ನು ಉಳಿಸುತ್ತಿದ್ದಾರೆ, ಒಟ್ಟು 137 ದಾಖಲಾತಿ ಇದೆ. ಇಂಗ್ಲಿಷ್ ಕಲಿಕೆ ಹೆಚ್ಚು ಮಾಡಿದ್ದು, ಗಣಿತ ಕಲಿಕೆ ಮಾಡಿ ಖಾಸಗಿ ಶಾಲೆಗೆ ಶೆಡ್ಡು ಹೊಡೆದಿದ್ದೇವೆ" ಎನ್ನುತ್ತಾರೆ ಮುಖ್ಯಶಿಕ್ಷಕ ಎಂ.ಎಂ. ಚಂದ್ರಪ್ಪ.

ಈ ಶಾಲೆಯ ವಿಶೇಷತೆ ಏನು ಗೊತ್ತಾ?: ಶಾಲೆಯಲ್ಲಿ ಪ್ರಾಜೆಕ್ಟರ್ ಮೂಲಕ ಸ್ಮಾರ್ಟ್ ಕ್ಲಾಸ್ ಮಾಡಲಾಗುತ್ತದೆ. ಟೀ ಶರ್ಟ್ ಸಮವಸ್ತ್ರ, ಹೈಟೆಕ್ ಶೌಚಾಲಯ, ಕಂಪ್ಯೂಟರ್, ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸ್, ಶುದ್ಧ ನೀರಿನ ಘಟಕ, ಈ ರೀತಿಯ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯ ಈ ಶಾಲೆಯಲ್ಲಿದೆ. ಆಂಗ್ಲ ಭಾಷೆ ಪಾಠ ಕಲಿಯುತ್ತಿದ್ದಾರೆ. ಗಣಿತ ಪಾಠದಲ್ಲಿ ಲೆಕ್ಕಗಳನ್ನು ಸುಲಭವಾಗಿ ಬಿಡಿಸುವಂತೆ ಕಲಿಸಲಾಗುತ್ತದೆ. 1 ರಿಂದ 5ನೇ ತರಗತಿವರೆಗೆ ಕ್ಲಾಸ್​ಗಳಿದ್ದು, 137 ವಿದ್ಯಾರ್ಥಿಗಳಿದ್ದಾರೆ. 7 ಜನ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಾರೆ. ಹರಪನಹಳ್ಳಿ ತಾಲೂಕಿನಲ್ಲಿ ಎರಡನೇ ಅತೀ ಹೆಚ್ಚು ದಾಖಲಾತಿ ಹೊಂದಿದ ಶಾಲೆ ಇಗಿದೆ.

ಮುಸ್ಲಿಂ ಸಮುದಾಯದ ಕನ್ನಡ ಪ್ರೇಮ:ಈ ಊರಲ್ಲಿ 180 ಮುಸ್ಲಿಂ ಕುಟುಂಬಗಳು ಕೃಷಿ ಚಟುವಟಿಕೆಗಳನ್ನು ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ಆದರೂ ಇಲ್ಲಿಯ ಪೋಷಕರು ಉರ್ದು ಶಾಲೆಯ ಗೋಜಿಗೆ ಹೋಗದೆ, ಕನ್ನಡ ಶಾಲಾ ಪ್ರೇಮವನ್ನು ಮೆರೆದಿದ್ದಾರೆ. ತಮ್ಮ ಮಕ್ಕಳನ್ನು ಖಾಸಗಿ ಹಾಗೂ ಉರ್ದು ಶಾಲೆಗೆ ದಾಖಲಿಸದೇ. ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದಾಖಲಿಸಿ ಅಭಿಮಾನ ಮೆರೆದಿದ್ದಾರೆ.

"ಶಾಲೆ ಅವ್ಯವಸ್ಥೆಯಿಂದ ಕೂಡಿತ್ತು. ಇದೀಗ ಮುಖ್ಯಶಿಕ್ಷಕ ಎಂ.ಎಂ ಚಂದ್ರಪ್ಪ ಹಾಗೂ ನಾನು ಎಸ್​ಡಿಎಂಸಿ ಅಧ್ಯಕ್ಷ ಆದ ಬಳಿಕ ಅಭಿವೃದ್ಧಿ ಮಾಡಿದ್ದೇವೆ.‌ ಈ ರೀತಿ ಅಭಿವೃದ್ಧಿಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಉರ್ದು ಶಾಲೆ ಮಾಡಿ ಎಂದು ಹಲವು ಜನ ಹೇಳಿದರು. ಆದರೆ ಪೋಷಕರು ಕನ್ನಡ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸಿ ಕನ್ನಡ ಪ್ರೇಮ ಮೆರೆದಿದ್ದಾರೆ" ಎಂದು ಎಸ್​ಡಿಎಂಸಿ ಅಧ್ಯಕ್ಷ ಗೌಸ್ ಪೀರ್ ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ:155 ವರ್ಷಗಳ ಇತಿಹಾಸದ ಪುತ್ತೂರು ನೆಲ್ಲಿಕಟ್ಟೆ ಶಾಲೆಗೆ ಬೇಕಿದೆ ಅಗತ್ಯ ಮೂಲಭೂತ ಸೌಕರ್ಯ - Puttur Nellikatte School

ABOUT THE AUTHOR

...view details