ಮೈಸೂರು:ಹಣಕಾಸಿನ ವಿಚಾರಕ್ಕೆ ಮಹಿಳೆಯೊಂದಿಗೆ ಜಗಳವಾಡಿದ ಎಂಬ ಕಾರಣಕ್ಕೆ ಯುವಕನೋರ್ವನನ್ನು ಮಹಿಳೆ ಸೇರಿದಂತೆ ನಾಲ್ವರು ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಕಳೆದ ಮಂಗಳವಾರ ರಾತ್ರಿ ಸಿದ್ದಲಿಂಗಪುರದ ಪಾಳು ಮನೆಯೊಂದರಲ್ಲಿ ನಗರದ ಉದಯಗಿರಿ ನಿವಾಸಿ ನೂರುಲ್ಲಾ(35) ಎಂಬಾತನ ಕೊಲೆಯಾಗಿತ್ತು. ಸಿದ್ದಲಿಂಗಪುರ ನಿವಾಸಿ ರಾಜೇಶ್, ಚಂದ್ರು, ಜಯಕುಮಾರ್ ಹಾಗೂ ಎಚ್.ಡಿ.ಕೋಟೆ ನಿವಾಸಿಯಾಗಿರುವ ಮಹಿಳೆ ಬಂಧಿತರು.
ಸಿದ್ದಲಿಂಗಪುರ ನಿವಾಸಿ ರಾಜೇಶ್ ಹಾಗೂ ಮಹಿಳೆ ನಡುವೆ ಅಕ್ರಮ ಸಂಬಂಧವಿತ್ತು. ಹೀಗಾಗಿ ರಾಜೇಶ್ ಮನೆಯವರು ಆತನನ್ನು ಮನೆಯಿಂದ ಹೊರ ಹಾಕಿದ್ದರು. ಬಳಿಕ ರಾಜೇಶ್ ಮಹಿಳೆ ಜತೆಯಲ್ಲಿ ಸಿದ್ದಲಿಂಗಪುರದ ಬಳಿಯ ಪಾಳುಬಿದ್ದ ಮನೆಯಲ್ಲಿ ಆಶ್ರಯ ಪಡೆದಿದ್ದರು. ಈ ನಡುವೆ ರಾಜೇಶ್ ಹಣಕ್ಕಾಗಿ ಮಹಿಳೆಯನ್ನು ವೇಶ್ಯಾವಾಟಿಕೆಗೆ ಬಳಸಿಕೊಂಡಿದ್ದ ಎಂಬ ಆರೋಪ ಇದೆ.
ತನಗೆ ಪರಿಚಿತರು ಹಾಗೂ ಅಲ್ಲಿಗೆ ಬರುವವರ ಜೊತೆ ಮಹಿಳೆಯನ್ನು ಕಳುಹಿಸಿ ಹಣ ಸಂಪಾದನೆ ಮಾಡುತ್ತಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಅದರಂತೆ ಮಂಗಳವಾರ ರಾತ್ರಿ ನೂರುಲ್ಲಾ ಕೂಡ ಅಲ್ಲಿಗೆ ಬಂದಿದ್ದಾನೆ. ನಂತರ ಆಕೆಯೊಂದಿಗೆ ಸಂಪರ್ಕ ಬೆಳೆಸಿದ್ದಾನೆ. ಈ ವೇಳೆ ಹಣ ನೀಡುವ ವಿಚಾರದಲ್ಲಿ ಮಹಿಳೆಯೊಂದಿಗೆ ಜಗಳವಾಗಿದೆ.