ಕರ್ನಾಟಕ

karnataka

ETV Bharat / state

ಸ್ಮಶಾನಕ್ಕೆ ಶವ ಸಾಗಾಟ ವಿಚಾರಕ್ಕೆ ಬಡಿದಾಡಿಕೊಂಡ ಆ್ಯಂಬುಲೆನ್ಸ್ ಸಿಬ್ಬಂದಿ; ಎಫ್ಐಆರ್ ದಾಖಲು

ಸ್ಮಶಾನಕ್ಕೆ ಶವ ಸಾಗಿಸಿದ ವಿಚಾರವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ.

By ETV Bharat Karnataka Team

Published : 4 hours ago

ambulance staff fight
ಎಸ್​ಆರ್​​ಎಸ್ ಚಿತಾಗಾರ, ಆರ್​​ಎಂಸಿ ಯಾರ್ಡ್ ಠಾಣೆ (ETV Bharat)

ಬೆಂಗಳೂರು:ಮೃತದೇಹವನ್ನು ಅಂತ್ಯಕ್ರಿಯೆಗೆ ಸಾಗಿಸಿದ ವಿಚಾರಕ್ಕೆ ಆ್ಯಂಬುಲೆನ್ಸ್ ಚಾಲಕರು ಹೊಡೆದಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಕ್ಟೋಬರ್ 15ರಂದು ಪೀಣ್ಯದ ಎಸ್​ಆರ್​​ಎಸ್ ಚಿತಾಗಾರದ ಬಳಿ ಘಟನೆ ನಡೆದಿದೆ.

ಹಲ್ಲೆಗೊಳಗಾದ ಖಾಸಗಿ ಆ್ಯಂಬುಲೆನ್ಸ್ ಸರ್ವಿಸ್ ಚಾಲಕ ಶಿವರಾಜು ಹಾಗೂ ಶ್ರೀಕಾಂತ್ ನೀಡಿರುವ ದೂರಿನ ಅನ್ವಯ ಮಹದೇವಮ್ಮ ಹಾಗೂ ಆಟೋ ಮಂಜು ಎಂಬಾತನ ವಿರುದ್ಧ ಆರ್​​ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ವಿವರ:ಆ್ಯಂಬುಲೆನ್ಸ್ ಚಾಲಕರಾದ ಶಿವರಾಜು ಹಾಗೂ ಶ್ರೀಕಾಂತ್ ಅಕ್ಟೋಬರ್ 15ರಂದು ನೆಲಮಂಗಲದ ಸರ್ಕಾರಿ ಆಸ್ಪತ್ರೆಯಿಂದ ಮೃತದೇಹವೊಂದನ್ನು ಪೀಣ್ಯದ ಎಸ್​ಆರ್​​ಎಸ್ ಚಿತಾಗಾರಕ್ಕೆ ತಂದಿದ್ದಾರೆ. ಆದರೆ, ಸ್ವತಃ ತಾವೇ ಆ್ಯಂಬುಲೆನ್ಸ್ ಸರ್ವೀಸ್ ಕೂಡ ಹೊಂದಿರುವ ಚಿತಾಗಾರದ ಮೇಲ್ವಿಚಾರಕಿ ಮಹದೇವಮ್ಮ ಈ ಬಗ್ಗೆ ಗಲಾಟೆ ಮಾಡಿದ್ದಾರೆ. 'ನಮಗೆ ಬಂದಿರುವ ಬಾಡಿಗೆಯನ್ನು ನೀವು ತೆಗೆದುಕೊಂಡಿದ್ದು ಯಾಕೆ?, ನಾವು ಇಲ್ಲಿಯ ಲೋಕಲ್​, ನಮ್ಮನ್ನು ಎದುರು ಹಾಕಿಕೊಂಡರೆ ಸರಿ ಇರಲ್ಲ' ಎಂದು ಎಂದು ಬ್ಲೇಡ್ ಫ್ರೇಮ್​ನಿಂದ ಹಲ್ಲೆ ಮಾಡಿದ್ದಾರೆ. ಹಾಗೂ ಮೃತದೇಹದ ಅಂತ್ಯಸಂಸ್ಕಾರಕ್ಕೆ 5 ಸಾವಿರ ರೂ. ಹೆಚ್ಚುವರಿ ಹಣ ಕೇಳಿದ್ದಾರೆ ಎಂದು ದೂರು ನೀಡಲಾಗಿದೆ.

ಶಿವರಾಜು ಹಾಗೂ ಶ್ರೀಕಾಂತ್ ನೀಡಿರುವ ದೂರಿನ ಅನ್ವಯ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ:ಹಾವೇರಿ ಬಾಲಕನ ಸಾವು ಪ್ರಕರಣ: ಇಬ್ಬರು ಅಧಿಕಾರಿಗಳ ಅಮಾನತು

ABOUT THE AUTHOR

...view details