ಧಾರವಾಡ: ದೆಹಲಿಯಲ್ಲಿರುವ ಇಂಡಿಯಾ ಗೇಟ್ ಮಾದರಿಯಲ್ಲಿ ಧಾರವಾಡದಲ್ಲೊಂದು ಮಿನಿ ಇಂಡಿಯಾ ಗೇಟ್ ನಿರ್ಮಾಣಗೊಳಿಸಲಾಗಿದೆ. ಧಾರವಾಡದ ಕೊಪ್ಪದಕೇರಿಯ ಶಿವಾಲಯದ ಎದುರಿಗೆ ಸಿದ್ಧಗೊಳ್ಳುತ್ತಿದೆ. ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಮಾಜಿ ಮೇಯರ್ ಹಾಗೂ ಹಾಲಿ ಸದಸ್ಯ ಈರೇಶ ಅಂಚಟಗೇರಿ ಮುತುವರ್ಜಿ ವಹಿಸಿ ನಿರ್ಮಾಣ ಮಾಡಿದ್ದಾರೆ.
ದೆಹಲಿಯ ಇಂಡಿಯಾ ಗೇಟ್ ಮಾದರಿಯಲ್ಲಿ ಮಿನಿ ಇಂಡಿಯಾ ಗೇಟ್ ನಿರ್ಮಾಣವಾಗಿದ್ದು, ದೆಹಲಿ ಇಂಡಿಯಾ ಗೇಟ್ ಒಳಗಡೆ ಅಮರ್ ಜವಾನ್ ಜ್ಯೋತಿಯನ್ನು ಇಡಲಾಗಿದೆ. ಇಲ್ಲಿನ ಮಿನಿ ಇಂಡಿಯಾ ಗೇಟ್ ಒಳಗಡೆ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮೂರ್ತಿಯನ್ನು ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ. ಯುದ್ಧ ಸ್ಮಾರಕವಾಗಿರುವ ಇಂಡಿಯಾ ಗೇಟ್ನಲ್ಲಿ ಅಮರ್ ಜವಾನ್ ಜ್ಯೋತಿ ಸದಾ ಬೆಳಗುತ್ತಿರುತ್ತದೆ.