ಕರ್ನಾಟಕ

karnataka

ರಾಜ್ಯದ ಎಲ್ಲಾ ಜಲಾಶಯಗಳ ಗೇಟ್ ಪರಿಶೀಲನೆಗೆ ರಾಕೇಶ್ ಸಿಂಗ್ ನೇತೃತ್ವದ ಸಮಿತಿ ರಚನೆ - Dam Gate Inspection Committee

By ETV Bharat Karnataka Team

Published : Aug 15, 2024, 9:47 PM IST

ರಾಜ್ಯದ ಎಲ್ಲ ಜಲಾಶಯಗಳ ಗೇಟ್‌ಗಳನ್ನು ಪರಿಶೀಲಿಸಲು ನಿವೃತ್ತ ಐಎಎಸ್ ಅಧಿಕಾರಿಯ ನೇತೃತ್ವದಲ್ಲಿ ರಾಜ್ಯ ಸರ್ಕಾರ ಸಮಿತಿ ರಚಿಸಿದೆ.

GATE INSPECTION COMMITTEE
ವಿಧಾನಸೌಧ (ETV Bharat)

ಬೆಂಗಳೂರು:ರಾಜ್ಯದ ಎಲ್ಲಾ ಜಲಾಶಯಗಳ ಗೇಟ್‌ಗಳನ್ನು ಪರಿಶೀಲಿಸಲು ನಿವೃತ್ತ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇಂದು ಆದೇಶಿಸಿದ್ದಾರೆ.

ತುಂಗಭದ್ರಾ ಜಲಾಶಯದ 19ನೇ ಸಂಖ್ಯೆಯ ಗೇಟ್‌ನಲ್ಲಾದ ಅವಘಡದಿಂದ ಸರ್ಕಾರ ಎಚ್ಚೆತ್ತುಕೊಂಡಿದೆ.

ಗೇಟ್ ಸುರಕ್ಷತೆ, ದುರಸ್ತಿ ಕಾಮಗಾರಿ ಹಾಗೂ ಬದಲಾವಣೆಯ ಅಗತ್ಯತೆಯ ಬಗ್ಗೆ ಅಧ್ಯಯನ ನಡೆಸಿ, ಮುಂಜಾಗ್ರತಾ ಕೆಲಸವನ್ನು ಕೈಗೊಳ್ಳುವಂತೆ ಸಮಿತಿಗೆ ಸೂಚಿಸಲಾಗಿದೆ.

ಜಲಾಶಯಗಳ ಗೇಟ್‌ಗಳನ್ನು ಸೂಕ್ತ ತಾಂತ್ರಿಕ ನಿಪುಣರ ಸಮಿತಿ ರಚಿಸಿ ಪರಿಶೀಲಿಸುವುದು, ದುರಸ್ತಿ ಮತ್ತು ಬದಲಾವಣೆ ಮಾಡುವ ಕೆಲಸವನ್ನು ಈ ಸಮಿತಿ ಕೈಗೊಳ್ಳಬೇಕಿದೆ.

ಇದನ್ನೂ ಓದಿ: ಟಿಬಿ ಡ್ಯಾಂ ಬೋರ್ಡ್​ನಲ್ಲಿ ₹135 ಕೋಟಿ ಇದೆ, ಗೇಟ್ ಅಳವಡಿಕೆಗೆ ₹5 ಕೋಟಿ ಬಿಡುಗಡೆ: ಸಚಿವ ತಂಗಡಗಿ - TB Dam Crest Gate Repair

ABOUT THE AUTHOR

...view details