ಕರ್ನಾಟಕ

karnataka

ETV Bharat / state

ಕಾರಣ ನೀಡದೇ ಬಿಡ್​ ತಿರಸ್ಕರಿಸುವ ಅಧಿಕಾರ 'ಬಿಡಿಎ'ಗಿದೆ: ಕರ್ನಾಟಕ ಹೈಕೋರ್ಟ್​

ಯಾವುದೇ ಕಾರಣ ನೀಡದೇ ಬಿಡ್​ ತಿರಸ್ಕರಿಸುವ ಅಧಿಕಾರ ಬಿಡಿಎಗಿದೆ ಎಂದು ಹೈಕೋರ್ಟ್​ ಹೇಳಿದೆ.

By PTI

Published : 5 hours ago

ಕರ್ನಾಟಕ ಹೈಕೋರ್ಟ್​
ಕರ್ನಾಟಕ ಹೈಕೋರ್ಟ್​ (IANS)

ಬೆಂಗಳೂರು: ನಿವೇಶನಗಳ ಹರಾಜಿನ ಸಮಯದಲ್ಲಿ ಯಾವುದೇ ಕಾರಣ ನೀಡದೇ ಬಿಡ್ ಸ್ವೀಕರಿಸುವ ಅಥವಾ ತಿರಸ್ಕರಿಸುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ. ಬಿಡಿಎ ನಿರ್ಧಾರವು ಕಾನೂನುಬದ್ಧವಾಗಿದ್ದು, ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿದೆ ಮತ್ತು ಸಾರ್ವಜನಿಕರಿಗೆ ಪ್ರಯೋಜನಕಾರಿಯಾಗಿದೆ ಎಂದು ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಜಿ. ಬಸವರಾಜ್ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ.

ಸಚಿನ್ ನಾಗರಾಜಪ್ಪ ಎಂಬುವವರು ಸಲ್ಲಿಸಿದ್ದ ಬಿಡ್​ ಅನ್ನು ಬಿಡಿಎ ತಿರಸ್ಕರಿಸಿತ್ತು ಮತ್ತು ಬಿಡಿಎದ ಈ ನಿರ್ಧಾರವನ್ನು ಏಕಸದಸ್ಯ ಪೀಠವು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಬಿಡಿಎ ವಿಭಾಗೀಯ ಪೀಠದ ಮೊರೆ ಹೋಗಿತ್ತು. ನಾಗರಾಜಪ್ಪ ಅವರು ಸಲ್ಲಿಸಿದ್ದ ಪ್ರತಿ ಚದರ ಮೀಟರ್ ಗೆ 1,54,000 ರೂ.ಗಳ ಬಿಡ್ ಅನ್ನು ಪುರಸ್ಕರಿಸುವಂತೆ ಏಕಸದಸ್ಯ ಪೀಠವು ಬಿಡಿಎಗೆ ನಿರ್ದೇಶನ ನೀಡಿತ್ತು.

ಬಿಡ್​​​​​​​​​​​ ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಬಿಡಿಎಗೆ ಇದೆ;ತನ್ನ ಕ್ರಮಗಳು ಬಿಡಿಎ (ಕಾರ್ನರ್ ಸೈಟ್​ಗಳು ಮತ್ತು ವಾಣಿಜ್ಯ ಸೈಟ್​ಗಳ ವಿಲೇವಾರಿ) ನಿಯಮಗಳು, 1984 ಕ್ಕೆ ಅನುಗುಣವಾಗಿವೆ ಎಂದು ಬಿಡಿಎ ವಾದಿಸಿತು. ಈ ನಿಯಮಗಳ ಪ್ರಕಾರ ಯಾವುದೇ ಕಾರಣ ನೀಡದೇ ಬಿಡ್​ಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಇದೆ. ಆಸ್ತಿಯನ್ನು ಸಾಧ್ಯವಾದಷ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಸಾರ್ವಜನಿಕ ಆಸ್ತಿ ಹರಾಜು ಪ್ರಕ್ರಿಯೆಯ ಉದ್ದೇಶವಾಗಿದೆ ಮತ್ತು ಬಿಡ್ ಮಾಡಲಾದ ಬೆಲೆಯು ಅಸಮರ್ಪಕವೆಂದು ಕಂಡುಬಂದರೆ ಬಿಡ್​ಗಳನ್ನು ರದ್ದುಗೊಳಿಸುವ ಹಕ್ಕು ತನಗಿದೆ ಎಂದು ಎಂದು ಬಿಡಿಎ ಒತ್ತಿಹೇಳಿದೆ.

ಬಿಡಿಎ ಇ - ಹರಾಜು ಅಧಿಸೂಚನೆಯ ನಿಯಮ 7 ಮತ್ತು ಸಾಮಾನ್ಯ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲೇಖಿಸಿದ ವಿಭಾಗೀಯ ಪೀಠ, ಈ ನಿಯಮವು ಕಾರಣಗಳನ್ನು ನೀಡದೆ ಬಿಡ್​ಗಳನ್ನು ತಿರಸ್ಕರಿಸಲು ಪ್ರಾಧಿಕಾರಕ್ಕೆ ಅವಕಾಶ ನೀಡುತ್ತದೆ ಎಂದು ಹೇಳಿದೆ. ಕಾನೂನುಬಾಹಿರ ಅಥವಾ ದುಷ್ಕೃತ್ಯದ ಪುರಾವೆಗಳಿಲ್ಲದಿದ್ದರೆ ಶಾಸಕಾಂಗ ಅಥವಾ ನಿಯಂತ್ರಕ ಸಂಸ್ಥೆಗಳು ತೆಗೆದುಕೊಳ್ಳುವ ನೀತಿ ನಿರ್ಧಾರಗಳಲ್ಲಿ ನ್ಯಾಯಾಂಗವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಒತ್ತಿಹೇಳಿದೆ.

ಪ್ರತಿವಾದಿಯು ನಿಯಮ 7 ರ ಸಾಂವಿಧಾನಿಕತೆಯನ್ನು ಪ್ರಶ್ನಿಸದ ಕಾರಣ ಮತ್ತು ವಂಚನೆ, ಒಳಸಂಚು ಅಥವಾ ಪಕ್ಷಪಾತದ ಯಾವುದೇ ಪುರಾವೆಗಳನ್ನು ಪ್ರಸ್ತುತಪಡಿಸದ ಕಾರಣ, ನ್ಯಾಯಾಲಯವು ಬಿಡಿಎ ನಿರ್ಧಾರವು ನಿರಂಕುಶ ಅಥವಾ ಅತಾರ್ಕಿಕವಲ್ಲ ಎಂದು ತೀರ್ಮಾನಿಸಿತು. ನಂತರದ ಹರಾಜಿನಲ್ಲಿ ಆಸ್ತಿಯನ್ನು 10 ಕೋಟಿ ರೂ.ಗೆ ಮಾರಾಟ ಮಾಡಲಾಗಿದ್ದು, ಇದು ಬಿಡಿಎಗೆ ಲಾಭವಾಗಿದೆ ಎಂದು ಅದು ಗಮನಿಸಿದೆ. ಏಕಸದಸ್ಯ ಪೀಠದ ತೀರ್ಪನ್ನು ತಳ್ಳಿಹಾಕಿದ ವಿಭಾಗೀಯ ಪೀಠ, ಬಿಡ್ ತಿರಸ್ಕರಿಸಿದ ಬಿಡಿಎ ನಿರ್ಧಾರವನ್ನು ಎತ್ತಿಹಿಡಿದಿದೆ.

ಇದನ್ನೂ ಓದಿ : ಕೆಲವು ರಾಜಕೀಯ ಮುಖಂಡರು ಲೈನ್​ನಲ್ಲಿ ನಿಲ್ಲುವ ಕಾಲ ಬರುತ್ತದೆ: ಹೆಚ್.ಡಿ.ರೇವಣ್ಣ

ABOUT THE AUTHOR

...view details