ಕರ್ನಾಟಕ

karnataka

ETV Bharat / sports

ಬೆಂಗಳೂರಲ್ಲಿ ಮತ್ತೆ ಮಳೆ ಶುರು: ಭಾರತ - ನ್ಯೂಜಿಲೆಂಡ್​ ಪಂದ್ಯಕ್ಕೆ ಬ್ರೇಕ್ ಹಾಕಿದ ವರುಣ​​!

ಭಾರತ ನ್ಯೂಜಿಲೆಂಡ್​ ನಡುವಿನ ಮೊದಲ ಟೆಸ್ಟ್​ನ ನಾಲ್ಕನೇ ದಿನದಾಟಕ್ಕೆ ಮತ್ತೆ ವರುಣ ಅಡ್ಡಿ ಪಡಿಸಿದ್ದಾನೆ.

By ETV Bharat Sports Team

Published : 5 hours ago

ಬೆಂಗಳೂರಲ್ಲಿ ಮತ್ತೆ ಮಳೆ
ಬೆಂಗಳೂರಲ್ಲಿ ಮತ್ತೆ ಮಳೆ (IANS And AFP)

ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್​ ನಡುವೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದ ನಾಲ್ಕನೇ ದಿನದಾಟಕ್ಕೆ ಮತ್ತೆ ಮಳೆ ಅಡ್ಡಿಪಡಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಲ್ಕನೇ ದಿನದಾಟದಲ್ಲಿ ಮಳೆಗೂ ಮುನ್ನವೇ ಭಾರತದ ಸರ್ಫರಾಜ್​ ಶತಕ ಮತ್ತು ರಿಷಭ್​ ಪಂತ್​ ಅರ್ಧಶತಕ ಸಿಡಿಸಿದ್ದಾರೆ. ಸದ್ಯ ಟೀಂ ಇಂಡಿಯಾ 3 ವಿಕೆಟ್​ ಕಳೆದುಕೊಂಡು 344 ರನ್​ ಸಿಡಿಸಿದ್ದು, 12 ರನ್​ಗಳ ಹಿನ್ನಡೆಯಲ್ಲಿದೆ.

ಸರ್ಫರಾಜ್​ ಚೊಚ್ಚಕ ಶತಕ:ಪಂದ್ಯದ ನಾಲ್ಕನೇ ದಿನದಾಟದಲ್ಲಿ ಯುವ ಬ್ಯಾಟರ್​ ಸರ್ಫರಾಜ್​ ಖಾನ್​ ಚೊಚ್ಚಲ ಶತಕ ಸಿಡಿಸಿದ್ದಾರೆ. 154 ಎಸೆತಗಳನ್ನು ಎದುರಿಸಿರುವ ಅವರು 16 ಬೌಂಡರಿ ಮತ್ತು 3 ಸಿಕ್ಸರ್​ ಸಮೇತ ಅಜೇಯವಾಗಿ 125 ರನ್​ಗಳನ್ನು ಸಿಡಿಸಿದ್ದಾರೆ. ಮತ್ತೊಂದೆಡೆ ಪ್ರಥಮ ಇನ್ನಿಂಗ್ಸ್​ನಲ್ಲಿ ಗಾಯಕ್ಕೆ ತುತ್ತಾಗಿದ್ದ ಪಂತ್​ ಎರಡನೇ ಇನ್ನಿಂಗ್ಸ್​ನಲ್ಲಿ ಭರ್ಜರಿ ಕಮ್​ಬ್ಯಾಕ್​ ಮಾಡಿ ಅರ್ಧಶತಕ ಪೂರೈಸಿದ್ದಾರೆ. ಇವರು 56 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್​ ಸಹಾಯದಿಂದ 53 ರನ್​ ಕಲೆಹಾಕಿ ಕ್ರೀಸ್​ನಲ್ಲಿದ್ದಾರೆ.

ಏತನ್ಮಧ್ಯೆ: 356 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆದುಕೊಂಡಿತ್ತು. ಆರಂಭಿಕ ಬ್ಯಾಟರ್​ ರೋಹಿತ್​ ಶರ್ಮಾ (52) ಮತ್ತು ವಿರಾಟ್​ ಕೊಹ್ಲಿ (70) ಅರ್ಧಶತಕ ಸಿಡಿಸಿದರು.

ಬೆಂಗಳೂರಲ್ಲಿ ಇನ್ನೂ 5 ದಿನ ಮಳೆ:ಬೆಂಗಳೂರಿನಲ್ಲಿ ಇನ್ನೂ 5 ದಿನಗಳ ಕಾಳ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅ.21ರವರೆಗೆ ನಗರದಲ್ಲಿ ಲಘು ಮಳೆಯಾಗಲಿದ್ದು, ಅ.22 ಮತ್ತು 23 ರಂದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅ.21ರ ವರೆಗೆ ಸಿಲಿಕಾನ್​ ಸಿಟಿಯಲ್ಲಿ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್​ ಮತ್ತು ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್​ ಇರಲಿದೆ.

ಇದನ್ನೂ ಓದಿ:ಕೇವಲ 3 ಓವರ್​ಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ ಬರೆದವರು ಡಾನ್ ಬ್ರಾಡ್​ಮನ್​! ಈ ದಾಖಲೆ ಮುರಿಯಲು ಸಾಧ್ಯವೇ?

ABOUT THE AUTHOR

...view details