ಕರ್ನಾಟಕ

karnataka

ETV Bharat / sports

ಅಕ್ಷರ್​ ಪಟೇಲ್​ಗೆ ಕೈ ಮುಗಿದು ಕ್ಷಮೆ ಕೇಳಿದ ರೋಹಿತ್ ಶರ್ಮಾ​: ಏನಾಯ್ತು? - ROHIT APOLOGIZES TO AXAR PATEL

ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತದ ಬೌಲರ್‌ ಅಕ್ಷರ್​ ಪಟೇಲ್​ ಐತಿಹಾಸಿಕ ಸಾಧನೆಯಿಂದ ಸ್ವಲ್ಪದರಲ್ಲೇ ಮಿಸ್​ ಆದರು.

IND VS BAN MATCH  AXAR PATEL  ROHIT SHARMA  ICC CHAMPIONS TROPHY 2025
ರೋಹಿತ್ ಶರ್ಮಾ (X Screen Grab)

By ETV Bharat Sports Team

Published : Feb 20, 2025, 5:47 PM IST

Ind vs Ban: ಐಸಿಸಿ ಚಾಂಪಿಯನ್ಸ್​ ಟ್ರೋಫಿಯ 2ನೇ ಪಂದ್ಯದಲ್ಲಿ ಇಂದು ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿ ಆಗಿವೆ. ದುಬೈ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಗೆದ್ದಿರುವ ಬಾಂಗ್ಲಾ ಮೊದಲು ಬ್ಯಾಟಿಂಗ್​ ಮಾಡಲು ಕ್ರೀಸ್​ಗೆ ಆಗಮಿಸಿ ಆರಂಭಿಕ ಆಘಾತ ಅನುಭವಿಸಿತು. ಟಾಪ್​ ಆರ್ಡರ್​​ ಕೈಕೊಟ್ಟ ಕಾರಣ ತಂಡ ಸಂಕಷ್ಟಕ್ಕೆ ಸಿಲುಕಿತು.

ಆರಂಭಿಕ ಬ್ಯಾಟರ್​ಗಳಾದ ತಂಜಿದ್​ ಹಸನ್​ (25), ಮೆಹದಿ ಹಸನ್​ (5) ಹೊರತುಪಡಿಸಿ ಮೂವರು ಬ್ಯಾಟರ್​ಗಳಾದ ಸೌಮ್ಯ ಸರ್ಕಾರ್​, ಸಜ್ಮುಲ್​ ಹೊಸೆನ್​ ಶಾಂಟೋ, ಮುಷ್ಪಿಕರ್​ ರಹಿಮ್​ ಡಕ್​ಔಟ್​ ಆಗಿದ್ದು ತಂಡದ ಸ್ಕೋರ್​ ಬೋರ್ಡ್​ಗೆ ಭಾರೀ ಹೊಡೆತ ಬಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ತೊಹಿದ್​ ಹ್ರದೋಯ್​ ಮತ್ತು ಜಾಕರ್​ ಅಲಿ ಅರ್ಧಶತಕ ಸಿಡಿಸಿ ಅಲ್ಪಮೊತ್ತದ ಸ್ಕೋರ್​ನಿಂದ ತಂಡವನ್ನು ಪಾರು ಮಾಡಿದರು.

ಅಕ್ಷರ್​ ಹ್ಯಾಟ್ರಿಕ್​ ಸಾಧನೆ ಮಿಸ್​:ಏತನ್ಮಧ್ಯೆ, ಅಕ್ಷರ್​ ಪಟೇಲ್​ ಹ್ಯಾಟ್ರಿಕ್ ವಿಕೆಟ್​ ಮಿಸ್​ ಆಗಿದ್ದು ಇದರಿಂದ ಐತಿಹಾಸಿಕ ದಾಖಲೆ ಸ್ವಲ್ಪದರಲ್ಲೇ ಕೈ ತಪ್ಪಿತು. ಈವರೆಗೂ ಚಾಂಪಿಯನ್ಸ್​ ಟ್ರೋಫಿಯಲ್ಲಿ ಯಾವೊಬ್ಬ ಬೌಲರ್​ ಹ್ಯಾಟ್ರಿಕ್​ ವಿಕೆಟ್​ ಪಡೆದ ಸಾಧನೆ ಮಾಡಿಲ್ಲ. ಆದರೆ ಇಂದಿನ ಪಂದ್ಯಲ್ಲಿ ಅಕ್ಷರ್​ ಪಟೇಲ್​ ಹ್ಯಾಟ್ರಿಕ್​ ಮಾಡುವ ಸುವರ್ಣಾವಕಾಶ ದೊರೆತಿತ್ತು. ಆದರೆ ನಾಯಕ ರೋಹಿತ್​ ಶರ್ಮಾ ಮಾಡಿದ ತಪ್ಪಿನಿಂದಾಗಿ ಅಕ್ಷರ್​​ ಸಾಧನೆ ಕೈತಪ್ಪಿತು.

ಪಂದ್ಯದ 8ನೇ ಓವರ್​ನಲ್ಲಿ ಅಕ್ಷರ್​ ಬೌಲಿಂಗ್​ಗೆ ಆಗಮಿಸಿದರು. ಓವರ್​ನ 2ನೇ ಎಸೆತದಲ್ಲಿ ತಂಜಿದ್​ ಹಸನ್​ ಅವರನ್ನು ಔಟ್​ ಮಾಡಿದರು. ಇದರ ಬೆನ್ನಲ್ಲೇ ಮುಂದಿನ ಎಸೆತದಲ್ಲಿ ಮುಷ್ಪಿಕರ್​ ರಹಿಮ್​ ವಿಕೆಟ್​ ಪಡೆದರು. ಈ ಇಬ್ಬರ ನಿರ್ಗಮನದ ಬಳಿಕ ಬಂದಿದ್ದ ಜಾಕರ್​ ಅಲಿ ಕೂಡ ಅಕ್ಷರ್​ ಅವರ ಮುಂದಿನ ಎಸೆತದಲ್ಲೇ ಸ್ಲೀಪ್​ನಲ್ಲಿ ಕ್ಯಾಚ್​ ನೀಡಿದ್ದರು. ಆದರೆ ಎಡವಟ್ಟು ಮಾಡಿದ ರೋಹಿತ್​ ಶರ್ಮಾ ಕ್ಯಾಚ್​ ಕೈಚೆಲ್ಲಿದ್ದರು. ಇದರಿಂದಾಗಿ ಅಕ್ಷರ್​ ಹ್ಯಾಟ್ರಿಕ್​ ವಿಕೆಟ್​ ಕೈತಪ್ಪಿತು.

ಕೈ ಮುಗಿದು ಕ್ಷಮೆ ಕೇಳಿದ ರೋಹಿತ್​:ಜಾಕರ್​ ಅಲಿ ಕ್ಯಾಚ್​ ಕೈಚೆಲ್ಲಿದ ರೋಹಿತ್​ ಶರ್ಮಾ ಅಕ್ಷರ್​ ಪಟೇಲ್​ ಐತಿಹಾಸಿಕ ಸಾಧನೆಗೂ ಮುಳುವಾದರು. ಇದರ ಬೆನ್ನಲ್ಲೇ ತಮ್ಮನ್ನು ಕ್ಷಮಿಸಿ ಎಂದು ಕೈ ಮಿಗಿದು ಎಲ್ಲರೆದುರೇ ಕ್ಷಮೆ ಕೋರಿದರು. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

ಬಾಂಗ್ಲಾ ಜೀವದಾನ:23ರನ್​ ಗಳಿಸಿದ್ದ ಹೃದೊಯಿ ಅವರ ಕ್ಯಾಚ್​ ಅನ್ನು ಪಾಂಡ್ಯ ಕೈಚೆಲ್ಲಿದರು. ಇದರ ಬೆನ್ನಲ್ಲೇ ಜಾಕೆರ್​ ಅಲಿ 24 ರನ್​ ಗಳಿಸಿದ್ದ ವೇಳೆ ಕೆ.ಎಲ್.ರಾಹುಲ್​ ಸ್ಟಂಪಿಂಗ್​ ಮಿಸ್​ ಮಾಡಿದರು. ಸಿಕ್ಕ ವರದಾನವನ್ನು ಸದುಪಯೋಗಪಡಿಸಿಕೊಂಡಿರುವ ಬಾಂಗ್ಲಾ ಆಟಗಾರರು ಉತ್ತಮ ಮೊತ್ತ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ:ಭಾರತದ ಮಾರಕ ಬೌಲಿಂಗ್​ ದಾಳಿಗೆ ತತ್ತರಿಸಿದ ಬಾಂಗ್ಲಾ​: ಸಂಕಷ್ಟದಲ್ಲಿ ತಂಡ!

ABOUT THE AUTHOR

...view details