ಕರ್ನಾಟಕ

karnataka

ETV Bharat / lifestyle

ಧನ ತ್ರಯೋದಶಿ ಯಾವ ದಿನ ಬರುತ್ತೆ ಗೊತ್ತಾ?: ಸಂಪೂರ್ಣ ಅನುಗ್ರಹ ಪಡೆಯಲು ಲಕ್ಷ್ಮಿ ದೇವಿ ಪೂಜಿಸುವುದು ಹೇಗೆ?

Dhantrayodashi 2024 Date: ಧನ ತ್ರಯೋದಶಿ ಯಾವ ದಿನ ಬರುತ್ತೆ ಗೊತ್ತಾ? ಹಾಗಾದ್ರೆ, ಸಂಪೂರ್ಣ ಅನುಗ್ರಹ ಪಡೆಯಲು ಲಕ್ಷ್ಮಿ ದೇವಿಯನ್ನು ಹೇಗೆ ಪೂಜಿಸಬೇಕು? ಹೀಗೆ ಪೂಜೆ ಮಾಡಿದರೆ ಅಷ್ಟೈಶ್ವರ್ಯಗಳು ನಿಮ್ಮದಾಗುತ್ತದೆ ಎಂದು ಜ್ಯೋತಿಷಿಗಳು ತಿಳಿಸುತ್ತಾರೆ.

DHANTRAYODASHI 2024 IN Kannada  DHANTERAS PUJA RITUALS  HOW TO DO DHANTERAS PUJA AT HOME  DHANTERAS 2024 IN Kannada
ಲಕ್ಷ್ಮಿ ದೇವಿ ಪೂಜೆ (ETV Bharat)

By ETV Bharat Lifestyle Team

Published : 5 hours ago

Dhantrayodashi 2024 Date:ಹಿಂದೂ ಸಂಪ್ರದಾಯದಲ್ಲಿ ಧನ ತ್ರಯೋದಶಿಗೆ ವಿಶೇಷ ಸ್ಥಾನವಿದೆ. ದೀಪಗಳ ಹಬ್ಬವಾದ ದೀಪಾವಳಿಗೆ ಮುನ್ನ ನಡೆಯುವ ಈ ಹಬ್ಬವನ್ನು 'ಧನ್ತೇರಸ್' ಎಂದೂ ಕರೆಯುತ್ತಾರೆ. ಆಶ್ವಯುಜ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯ ದಿನ.. ಧನ ತ್ರಯೋದಶಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ವರ್ಷ ಧನ ತ್ರಯೋದಶಿ ತಿಥಿ ಅಕ್ಟೋಬರ್ 29 ಮಂಗಳವಾರ ಬರುತ್ತದೆ.

ಧನ ತ್ರಯೋದಶಿ ತಿಥಿಯನ್ನು ಲಕ್ಷ್ಮಿ ದೇವಿಗೆ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಮುಂಜಾನೆ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಮನೆಯ ಐಶ್ವರ್ಯಕ್ಕೆ ಧಕ್ಕೆಯಾಗುವುದಿಲ್ಲ. ಮತ್ತು ಕುಟುಂಬದಲ್ಲಿ ಎಲ್ಲರೂ ಸಂತೋಷವಾಗಿರುತ್ತಾರೆ ಎಂದು ಭಕ್ತರು ನಂಬುತ್ತಾರೆ. ಖ್ಯಾತ ಜ್ಯೋತಿಷಿ ಮಾಚಿರಾಜು ಕಿರಣ್ ಕುಮಾರ್ ಅವರು ಸಂಪೂರ್ಣ ಅನುಗ್ರಹ ಪಡೆಯಲು ಧನ್ತೇರಸ್ ದಿನದಂದು ಲಕ್ಷ್ಮಿ ದೇವಿಯನ್ನು ಹೇಗೆ ಪೂಜಿಸಬೇಕು ಎಂದು ಹೇಳುತ್ತಾರೆ. ಈ ಕುರಿತ ವಿವರಗಳನ್ನು ತಿಳಿಯೋಣ.

ಪೂಜೆ ಹೀಗೆ ಮಾಡಿ:

  • ಧನ ತ್ರಯೋದಶಿಯಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ. ಹೊಸ ಸೀರೆ ಉಟ್ಟುಕೊಳ್ಳಬೇಕು. ಪೂಜಾ ಮಂದಿರದಲ್ಲಿ ಧನ ಲಕ್ಷ್ಮಿ ಅಥವಾ ಪಾದರಸದಿಂದ ಮಾಡಿದ ಲಕ್ಷ್ಮಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು.
  • ಹಾಗೆಯೇ ಮನೆಯಲ್ಲಿನ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಹಾಲಿನಿಂದ ತೊಳೆಯಬೇಕು. ನಂತರ ನೀರಿನಿಂದ ತೊಳೆಯಿರಿ. ಇವುಗಳನ್ನು ಧನ ಲಕ್ಷ್ಮೀ ಪೂಜೆಯಲ್ಲಿ ಇಡಬೇಕು. ಲಕ್ಷ್ಮಿ ದೇವಿಗೆ ಆರತಿ ಕೊಡುವಾಗ ಆಭರಣಗಳನ್ನೂ ಕೊಡಬೇಕು.
  • ಪೂಜೆ ಮುಗಿದ ನಂತರ ಬೀರುವಿನಲ್ಲಿ ಇಡಬೇಕು.
  • ಧನಲಕ್ಷ್ಮಿಯ ಭಾವಚಿತ್ರ ಅಥವಾ ಲಕ್ಷ್ಮೀದೇವಿಯ ವಿಗ್ರಹದ ಮುಂದೆ ಬೆಳ್ಳಿಯ ಪಾತ್ರೆಯಲ್ಲಿ ಕಮಲ ಮತ್ತು ಬತ್ತಿಯಿಂದ ದೀಪ ಹಚ್ಚಬೇಕು.
  • ಅದರ ನಂತರ ಲಕ್ಷ್ಮಿ ದೇವಿಗೆ ಕೇಸರಿ ಹೂವಿನ ಬಣ್ಣದ ಕುಂಕುಮದಿಂದ ಪೂಜಿಸಬೇಕು. ಇದನ್ನು ‘ಚಂದ್ರ’ ಎನ್ನುತ್ತಾರೆ. ಅಥವಾ ಹಸಿರು ಬಣ್ಣದ ಕುಬೇರ ಕೇಸರಿ.. ಅದರಿಂದಲೇ ಪೂಜಿಸಿ.
  • ಲಕ್ಷ್ಮಿ ದೇವಿಯನ್ನು ಪೂಜಿಸುವಾಗ ನಿರ್ದಿಷ್ಟ ಮಂತ್ರವನ್ನು 108 ಅಥವಾ 54 ಅಥವಾ 21 ಬಾರಿ ಪಠಿಸಬೇಕು. ಆ ಮಂತ್ರವೇ "ಓಂ ಶ್ರೀ ಶ್ರೀ ನಮಃ".
  • ಅದರ ನಂತರ ದಾಳಿಂಬೆ ಬೀಜಗಳನ್ನು ಸ್ವಲ್ಪ ಜೇನುತುಪ್ಪದೊಂದಿಗೆ ಬೆರೆಸಿ ಲಕ್ಷ್ಮಿ ದೇವಿಗೆ ನೈವೇದ್ಯವಾಗಿ ಅರ್ಪಿಸಬೇಕು. ಬಳಿಕ ಮನೆಯವರೆಲ್ಲರೂ ಈ ಪ್ರಸಾದವನ್ನು ಸ್ವೀಕರಿಸಬೇಕು.

ನಿಮ್ಮ ಸಂಪತ್ತನ್ನು ಹೆಚ್ಚಿಸಲು ಧನ ತ್ರಯೋದಶಿಯಂದು ಹೀಗೆ ಮಾಡಿ:

  • ಬೆಳಗ್ಗೆ ಧನ ಲಕ್ಷ್ಮೀ ಪೂಜೆ ಮಾಡಿದ ನಂತರ ದೇವಿಗೆ ಬೆಲ್ಲದ ಸಜ್ಜಕವನ್ನು ನೈವೇದ್ಯವಾಗಿ ಅರ್ಪಿಸಿ.
  • ಬಳಿಕ ಆರು ಮಂದಿ ಮುತ್ತೈದೆಯರನ್ನು ಮನೆಗೆ ಕರೆದು ಪಾದಗಳಿಗೆ ಅರಿಶಿನ ಹಚ್ಚಿ.
  • ನಂತರ ತಾಂಬೂಲದಲ್ಲಿ ಅರಿಶಿನ, ಕುಂಕುಮ, ಹೂವು, ಹಣ್ಣುಗಳು, ಎಲೆ, ಅಡಿಕೆ, ಸ್ವಲ್ಪ ಬೆಲ್ಲ ಇಟ್ಟು ಉಡಿ ತುಂಬಬೇಕಾಗುತ್ತದೆ. ಪೂಜೆಯ ನಂತರ ಮನೆಯ ಮಹಿಳೆಯರು ಹೀಗೆ ಮಾಡಿದರೆ ಸಂಪತ್ತು ವೃದ್ಧಿಯಾಗುತ್ತದೆ.
  • ಹೀಗಾಗಿ ಧನ ತ್ರಯೋದಶಿಯ ದಿನದಂದು ವಿಶೇಷ ಆಚರಣೆಗಳನ್ನು ಮಾಡುವುದರಿಂದ ಲಕ್ಷ್ಮಿ ದೇವಿಯ ಸಂಪೂರ್ಣ ಕೃಪೆ ಲಭಿಸುತ್ತದೆ ಎನ್ನುತ್ತಾರೆ ಜ್ಯೋತಿಷಿ ಮಾಚಿರಾಜು ಕಿರಣ್ ಕುಮಾರ್.

ಪ್ರಮುಖ ಸೂಚನೆ:ಮೇಲಿನ ವಿವರಗಳನ್ನು ವಿವಿಧ ವಿಜ್ಞಾನಗಳಲ್ಲಿ ಉಲ್ಲೇಖಿಸಲಾದ ಅಂಶಗಳ ಆಧಾರದ ಮೇಲೆ ಕೆಲವು ತಜ್ಞರು ಮಾತ್ರ ಒದಗಿಸಿದ್ದಾರೆ. ಆದರೆ, ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಓದುಗರು ಗಮನಿಸಬೇಕು. ನೀವು ಎಷ್ಟು ನಂಬುತ್ತೀರಿ ಎಂಬುದು ಸಂಪೂರ್ಣವಾಗಿ ನಿಮಗೆ ಬಿಟ್ಟದೆ.

ಇದನ್ನೂ ಓದಿ:

ABOUT THE AUTHOR

...view details