ಕರ್ನಾಟಕ

karnataka

ETV Bharat / health

ಫೆ.10 ವಿಶ್ವ ದ್ವಿದಳ ಧಾನ್ಯಗಳ ದಿನ: ಏನಿದರ ಮಹತ್ವ

ಪ್ರತಿ ವರ್ಷ ಫೆಬ್ರವರಿ 10 ರಂದು ವಿಶ್ವ ದ್ವಿದಳ ಧಾನ್ಯಗಳ ದಿನವಾಗಿ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮ ದ್ವಿದಳ ಧಾನ್ಯಗಳ ಪೌಷ್ಟಿಕಾಂಶದ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಒಂದು ಅದ್ಭುತ ವೇದಿಕೆಯಾಗಿದೆ.

By ETV Bharat Karnataka Team

Published : Feb 10, 2024, 10:23 AM IST

ವಿಶ್ವ ದ್ವಿದಳ ಧಾನ್ಯಗಳ ದಿನ
ವಿಶ್ವ ದ್ವಿದಳ ಧಾನ್ಯಗಳ ದಿನ

ಹೈದರಾಬಾದ್ :ಜಗತ್ತಿನಲ್ಲೆಡೆ ದ್ವಿದಳ ಧಾನ್ಯಗಳು ಶತಕೋಟಿ ಜನರಿಗೆ ಪೌಷ್ಟಿಕಾಂಶವನ್ನು ಒದಗಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿವೆ. ಹೀಗಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2019 ರಲ್ಲಿ ಫೆಬ್ರವರಿ 10 ಅನ್ನು ವಿಶ್ವ ದ್ವಿದಳ ಧಾನ್ಯಗಳ ದಿನವೆಂದು ಅಧಿಕೃತವಾಗಿ ಘೋಷಿಸಿದೆ. 2016 ಅನ್ನು ಅಂತಾರಾಷ್ಟ್ರೀಯ ದ್ವಿದಳ ಧಾನ್ಯಗಳ ವರ್ಷ (ಐವೈಪಿ) ಎಂದು ಘೋಷಿಸಿತು. ಸುಸ್ಥಿರ ಆಹಾರ ಉತ್ಪಾದನೆಯಲ್ಲಿ ಅವುಗಳ ಪೌಷ್ಟಿಕಾಂಶ ಮತ್ತು ಪ್ರಯೋಜನಗಳ ಬಗ್ಗೆ ಒತ್ತಿ ಹೇಳಿತು.

ದ್ವಿದಳ ಧಾನ್ಯಗಳು ಏಕೆ ಅಗತ್ಯ? :ದ್ವಿದಳ ಧ್ಯಾನಗಳು ಹೆಚ್ಚು ಪ್ರೋಟೀನ್​ ಅಂಶಗಳನ್ನು ಹೊಂದಿದ್ದು, ಮಾಂಸಕ್ಕೆ ಸರಿ ಸಮಾನವಾಗಿದೆ. ಅಲ್ಲದೇ ಮಾಂಸಗಿಂತ ಕಡಿಮೆ ಕೊಬ್ಬಿನಾಂಶ ಇರುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣ ಮತ್ತು ಬೇಗ ಜೀರ್ಣ ಕ್ರಿಯೆ ಆಗುವ ಸಮರ್ಥ್ಯ ಇರುವುದರಿಂದ ರಕ್ತದಲ್ಲಿನ ಸಕ್ಕರೆ ನಿರ್ವಹಣೆಯಲ್ಲಿ ಸಹಾಯ ಮಾಡುತ್ತವೆ. ಆರೋಗ್ಯ ಸಂಸ್ಥೆಗಳು ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ದ್ವಿದಳ ಧಾನ್ಯಗಳನ್ನು ತಿನ್ನಲು ಶಿಫಾರಸು ಮಾಡುತ್ತವೆ. ಬೊಜ್ಜು ಕರಗಿಸುವಲ್ಲಿ ದ್ವಿದಳ ಧಾನ್ಯಗಳು ಪರಿಣಾಮಕಾರಿಯಾಗಿವೆ. ದ್ವಿದಳ ಧ್ಯಾನ್ಯಗಳಲ್ಲಿ ಸಾರಜನಕ - ಫಿಕ್ಸಿಂಗ್ ಗುಣಲಕ್ಷಣಗಳಿರುತ್ತದೆ. ಇದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಕೃಷಿ ಭೂಮಿಯ ಉತ್ಪಾದಕತೆಯನ್ನು ಉತ್ತೇಜಿಸುತ್ತವೆ.

ಪ್ರಭೇದಗಳು :ಪ್ರಮುಖವಾಗಿ ದ್ವಿದಳ ಧಾನ್ಯಗಳೆಂದರೆ, ಕಡಲೆ, ಮೂಂಗ್ ಬೀನ್ಸ್, ಉರಡ್, ಮಸೂರ್, ಬಟಾಣಿ ಮತ್ತು ವಿವಿಧ ಬೀನ್ಸ್ ಸೇರಿವೆ. ಹೆಚ್ಚಿನ ಉತ್ಪಾದಕತೆಯ ಪ್ರದೇಶಗಳಲ್ಲಿ ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಬೆಳಯಲಾಗುತ್ತದೆ.

ಭಾರತದ ಆರ್ಥಿಕ ಸ್ಥಿತಿಗತಿ : ಭಾರತವು 7,75,000 ಲಕ್ಷ ಮೌಲ್ಯದ ದ್ವಿದಳ ಧಾನ್ಯಗಳನ್ನು ರಫ್ತು ಮಾಡುತ್ತದೆ. 2022-23 ರಲ್ಲಿ 5,39,786 ಕೋಟಿಗಳಷ್ಟು ಆದಾಯ ಗಳಿಸಿದೆ. ಬಾಂಗ್ಲಾದೇಶ, ಚೀನಾ, ಯುನೈಟೆಡ್ ಅರಬ್ ಎಮಿರೇಟ್ಸ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಮತ್ತು ನೇಪಾಳ ಸೇರಿದಂತೆ ಇನ್ನು ಅನೇಕ ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ.

ಭಾರತೀಯ ಆಹಾರ ಕ್ರಮದಲ್ಲಿ ದ್ವಿದಳ ಧಾನ್ಯಗಳ ಪಾತ್ರ:ಮಾಂಸಾಹಾರಿ ಆಹಾರಗಳು ಹೆಚ್ಚುತ್ತಿರುವ ಹೊರತಾಗಿಯೂ, ಹೆಚ್ಚಿನ ಭಾರತೀಯರಿಗೆ ದ್ವಿದಳ ಧಾನ್ಯಗಳು ಪ್ರಮುಖ ಪ್ರೋಟೀನ್ ಮೂಲವಾಗಿ ಉಳಿದಿವೆ. ಭಾರತೀಯರ ಆಹಾರದಲ್ಲಿ ಪ್ರೋಟೀನ್​ಗಳು, ಹಣ್ಣುಗಳು ಮತ್ತು ತರಕಾರಿಗಳ ಕೊರತೆಯಿದೆ. ಇದು ದ್ವಿದಳ ಧಾನ್ಯಗಳ ಮಹತ್ವವನ್ನು ಒತ್ತಿ ಹೇಳುತ್ತದೆ.

ಸರ್ಕಾರದ ಕ್ರಮಗಳು:ನಾಫೆಡ್ ಮತ್ತು ಎನ್‌ಸಿಸಿಎಫ್‌ನಿಂದ ನೋಂದಾಯಿತ ರೈತರಿಂದ ದ್ವಿದಳ ಧಾನ್ಯಗಳನ್ನು ನೇರವಾಗಿ ಖರೀದಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಜನವರಿ 2028 ರ ವೇಳೆಗೆ ಭಾರತವು ದ್ವಿದಳ ಧಾನ್ಯಗಳಲ್ಲಿ ಸ್ವಾವಲಂಬಿಯಾಗಬೇಕು ಮತ್ತು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುಬೇಕು ಎಂಬ ಗುರಿಯನ್ನು ಹೊಂದಿದ್ದಾರೆ. ಈ ಕ್ರಮವು 2023-24ರಲ್ಲಿ ಹೆಚ್ಚಿದ ಟರ್ ಉತ್ಪಾದನೆಯ ಅಂದಾಜಿನೊಂದಿಗೆ ಹೊಂದಿಕೆಯಾಗುತ್ತದೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆ ( ಎಂಎಸ್​ಪಿ) ಅಥವಾ ಮಾರುಕಟ್ಟೆ ಬೆಲೆಗಳ ಮೂಲಕ ನ್ಯಾಯಯುತ ಬೆಲೆಗಳನ್ನು ಖಾತರಿಪಡಿಸಲಾಗುತ್ತಿದೆ.

ಇದನ್ನೂ ಓದಿ :ಆತ್ಮ ವಿಶ್ವಾಸ ವೃದ್ಧಿಸಲು, ಮೆದುಳು ಚುರುಕಾಗಿಸಲು ಈ ಆಹಾರ ಸೇವಿಸಿ

ABOUT THE AUTHOR

...view details