ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಕನ್ನಡ ಸೀಸನ್ 11'ರ ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಆದ್ರೆ ಫಿನಾಲೆ ವೀಕ್ ರೋಷಾವೇಷದಲ್ಲೇ ಶುರುವಾಗಿದೆ. ಹೌದು, ರಜತ್ ಕಿಶನ್ ಮತ್ತು ಉಗ್ರಂ ಮಂಜು ನಡುವೆ ಮಾತಿಗೆ ಮಾತು ಬೆಳೆದು, ದೊಡ್ಡ ಜಗಳವೇ ನಡೆದು ಹೋಗಿದೆ. ಇನ್ನೇನು ಕೈ ಕೈ ಮಿಲಾಯಿಸಿಕೊಳ್ತಾರಾ ಅನ್ನೋವಷ್ಟರ ಮಟ್ಟಿಗೆ ಟಾಕ್ ವಾರ್ ನಡೆದಿದೆ.
ರಜತ್ ಕಿಶನ್ ಮತ್ತು ಉಗ್ರಂ ಮಂಜು ನಡುವಿನ ಗಲಾಟೆಯ ಒಂದು ನೋಟವನ್ನು ಬಿಗ್ ಬಾಸ್ ತಮ್ಮ ಪ್ರೋಮೋದಲ್ಲಿ ಒದಗಿಸಿದ್ದಾರೆ. 'ರೋಷಾವೇಷದಲ್ಲೇ ಶುರುವಾಯ್ತಾ ಫಿನಾಲೆ ವಾರ?' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನಡಿ ಪ್ರೋಮೋ ಅನಾವರಣಗೊಂಡಿದೆ.
ಮನದಲ್ಲಿರುವ ಕೋಪ, ಬೇಸರ, ಹತಾಷೆಯನ್ನು ಹೊಡೆಯುತ್ತಾ ಮನದೊಳಗಿರುವ ಭಾರವನ್ನು ಇಳಿಸಬೇಕು ಎಂದು ಬಿಗ್ ಬಾಸ್ ತನ್ನ ಫೈನಲಿಸ್ಟ್ಗಳಿಗೆ ತಿಳಿಸಿದ್ದಾರೆ. ಮಣ್ಣಿನ ಮಡಕೆ ಮೇಲೆ ಸ್ಪರ್ಧಿಗಳ ಫೋಟೋ ಅಂಟಿಸಲಾಗಿದ್ದು, ಕೋಲಿನಿಂದ ಅದನ್ನು ಒಡೆಯಬೇಕಿದೆ. ಈ ಮೂಲಕ ಸ್ಪರ್ಧಿಗಳು ತಮ್ಮ ಆಕ್ರೋಶವನ್ನು ಹೊರಹಾಕಬೇಕಿದೆ.
ಅದರಂತೆ, ಮೊದಲು ಉಗ್ರಂ ಮಂಜು ಅವರು ರಜತ್ ಕಿಶನ್ ಹೆಸರು ತೆಗೆದುಕೊಂಡಿದ್ದಾರೆ. ಗ್ಯಾಂಗ್ಗಳನ್ನೆಲ್ಲಾ ಹೊಡೆದಾಕ್ತೀನಿ ಅಂದಿದ್ರಿ, ಏನೂ ಮಾಡೋಕ್ಕಾಗ್ಲಿಲ್ಲ ನನ್ನ ಗೌತಮಿ ಫ್ರೆಂಡ್ಶಿಪ್ ನಾ ಎಂದಿದ್ದಾರೆ. ಅದಕ್ಕೆ ವ್ಯಂಗ್ಯವಾಡಿದ ರಜತ್, ಏಳೆಂಟ್ ವಾರ ಗುಳ್ಳೇ ನರಿ ತರ ಇದ್ದೆ ಎಂದಿದ್ದಾರೆ. ಭವ್ಯಾ ಜೊತೆ ಸೇರಿ ಮಂಜುನನ್ನು ಅಣಕಿಸಿದ್ದಾರೆ. ಅಲ್ಲದೇ, ಬರ್ತೀಯಾ ಎಂದು ಫೈಟ್ಗೆ ಆಹ್ವಾನಿಸಿದ್ದಾರೆ. ಮತ್ತದೇ ಅವಾಚ್ಯ ಶಬ್ದವನ್ನೂ ಬಳಸಿದ್ದಾರೆ.