ಕರ್ನಾಟಕ

karnataka

ತಂದೆಯ ನಿರ್ಮಾಣದ ಚಿತ್ರದಲ್ಲಿ ಪುತ್ರ: ಮಗ-ಮೊಮ್ಮಗನ 'ಓಂ ಶಿವಂ'ಗೆ ಅಜ್ಜ-ಅಜ್ಜಿ ಸಾಥ್ - Om Shivam

By ETV Bharat Karnataka Team

Published : Jul 23, 2024, 2:13 PM IST

'ಓಂ ಶಿವಂ' ಶೀರ್ಷಿಕೆಯ ಕನ್ನಡ ಸಿನಿಮಾವನ್ನು ಕೃಷ್ಣ ಎಂಬವರು ನಿರ್ಮಿಸಿದ್ದು, ಅವರ ಪುತ್ರ ಭಾರ್ಗವ್ ಕೃಷ್ಣ ನಾಯಕ ನಟನ ಪಾತ್ರ ನಿರ್ವಹಿಸಿದ್ದಾರೆ.

Om Shivam film team
'ಓಂ ಶಿವಂ' ಚಿತ್ರತಂಡ (ETV Bharat)

ಸ್ಯಾಂಡಲ್​ವುಡ್​​ ಅಂಗಳಕ್ಕೆ ಯುವ ನಟ ನಟಿ, ನಿರ್ದೇಶಕರ ಆಗಮನ ಮುಂದುವರಿದಿದೆ‌. ನೂತನ ನಾಯಕ ನಟರ ಪಟ್ಟಿಗೀಗ ಭಾರ್ಗವ್ ಕೃಷ್ಣ ಎಂಬವರು ಸೇರ್ಪಡೆಯಾಗುತ್ತಿದ್ದಾರೆ. 'ಓಂ ಶಿವಂ' ಶೀರ್ಷಿಕೆಯ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

'ಓಂ ಶಿವಂ' ಚಿತ್ರತಂಡ (ETV Bharat)

ಈ ಹಿಂದೆ‌ 'ರಾಜ್ ಬಹದ್ದೂರ್' ಸಿನಿಮಾ ನಿರ್ದೇಶಿಸಿದ್ದ ಆಲ್ವಿನ್, ಯುವ ನಟ‌ ಭಾರ್ಗವ್ ಕೃಷ್ಣ ಅವರನ್ನು ಕನ್ನಡ ಚಿತ್ರರಂಗಕ್ಕೆ‌ ಪರಿಚಯಿಸುತ್ತಿದ್ದಾರೆ‌. 'ಓಂ ಶಿವಂ' ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಲಿರಿಕಲ್ ಸಾಂಗ್‌ವೊಂದನ್ನು ಇತ್ತೀಚೆಗೆ ಅನಾವರಣಗೊಳಿಸಲಾಯಿತು. ಭಾರ್ಗವ್ ಕೃಷ್ಣ ಅವರ ಅಜ್ಜ ಅಜ್ಜಿ ಈ ಹಾಡನ್ನು ಬಿಡುಗಡೆ ಮಾಡಿ ಮೊಮ್ಮಗನ ಚೊಚ್ಚಲ ಚಿತ್ರಕ್ಕೆ ಶುಭ ಹಾರೈಸಿದರು. ಬಳಿಕ ಚಿತ್ರತಂಡದವರು ತಮ್ಮ ಚಿತ್ರದ ಅನುಭವ ಹಂಚಿಕೊಂಡರು.

'ಓಂ ಶಿವಂ' ಚಿತ್ರತಂಡ (ETV Bharat)

ನಿರ್ದೇಶಕ ಆಲ್ವಿನ್ ಮಾತನಾಡಿ, ''ರಾಜ್ ಬಹದ್ದೂರ್ ಚಿತ್ರದ ನಂತರ ನಾನು ಆ್ಯಕ್ಷನ್​ ಕಟ್​ ಹೇಳಿರುವ ಎರಡನೇ ಚಿತ್ರವಿದು. ಓಂ ಶಿವಂ, ಲವ್ ಜಾನರ್​ನ ಚಿತ್ರ. ಆದ್ರೆ ಚಿತ್ರದಲ್ಲಿ ಕೇವಲ ಲವ್ ಮಾತ್ರ ಇಲ್ಲ. ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಅಂಶಗಳು ಇದರಲ್ಲಿದೆ. ನಮ್ಮ ಚಿತ್ರಕ್ಕೆ 21 ವಯಸ್ಸಿನ ನಾಯಕ ಬೇಕಾಗಿತ್ತು. ಭಾರ್ಗವ್ ಅವರಿಗೂ ಅಷ್ಟೇ ವಯಸ್ಸು. ಹಾಗಾಗಿ ಅವರನ್ನೇ ಈ ಚಿತ್ರದ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ಮೊದಲ ಪ್ರಯತ್ನದಲ್ಲೇ ಭಾರ್ಗವ್ ಚೆನ್ನಾಗಿ ಅಭಿನಯಿಸಿದ್ದಾರೆ. ನಾಲ್ಕು ಹಾಡುಗಳು, ಅದ್ಧೂರಿ ಸಾಹಸ ಸನ್ನಿವೇಶಗಳು ಈ ಚಿತ್ರದಲ್ಲಿದೆ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ'' ಎಂದು ಮಾಹಿತಿ ಹಂಚಿಕೊಂಡರು.

'ಓಂ ಶಿವಂ' ಚಿತ್ರತಂಡ (ETV Bharat)

ನಂತರ ಯುವ ನಟ ಭಾರ್ಗವ್ ಕೃಷ್ಣ ಮಾತನಾಡಿ, "ಆಲ್ವಿನ್ ಅವರು ಉತ್ತಮ ಕಥೆ ಮಾಡಿಕೊಂಡಿದ್ದರು. ಮೊದಲ ಚಿತ್ರವಾಗಿರುವುದರಿಂದ ನಾನು ಸಾಕಷ್ಟು ತಯಾರಿ ಮಾಡಿಕೊಂಡು ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಲವ್ ಸ್ಟೋರಿ ಜೊತೆ ಫ್ಯಾಮಿಲಿ ಕಥಾಹಂದರವುಳ್ಳ ಚಿತ್ರ. ಎಲ್ಲರಿಗೂ ನಮ್ಮ ಚಿತ್ರ ಇಷ್ಟವಾಗಲಿದೆ" ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.

'ಓಂ ಶಿವಂ' ಈವೆಂಟ್​ (ETV Bharat)

ಇದನ್ನೂ ಓದಿ:ಪತ್ನಿಗೆ ಗೊತ್ತಿಲ್ಲದಂತೆ ಮತ್ತೊಂದು ನಿಶ್ಚಿತಾರ್ಥ ಆರೋಪ: ಕಿರುತೆರೆ ನಟನ ವಿರುದ್ಧ ದೂರು - Complaint Against Serial Actor

ಚಿತ್ರದ ನಿರ್ಮಾಪಕ ಕೃಷ್ಣ ಮಾತನಾಡಿ, "ಆಲ್ವಿನ್ ಅವರು ಒಳ್ಳೆಯ ಕಥೆ ಸಿದ್ಧ ಮಾಡಿಕೊಂಡು ಬಂದರು. ನಾನು ಕಥೆ ಚೆನ್ನಾಗಿದೆ, ನಾಯಕನನ್ನು ಹುಡುಕಿ, ಚಿತ್ರ ಆರಂಭಿಸೋಣ ಎಂದು ತಿಳಿಸಿದೆ. ಅದಕ್ಕೆ ಆಲ್ವಿನ್ ಅವರು ನಿಮ್ಮ ಮಗ ಭಾರ್ಗವ್, ನನ್ನ ಕಥೆಗೆ ಸರಿ ಹೊಂದುತ್ತಾರೆ. ಅವರೇ ನಮ್ಮ ಚಿತ್ರದ ನಾಯಕ ಎಂದರು. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ" ಎಂದು ತಿಳಿಸಿದರು.

ನಾಯಕಿಯೊಂದಿಗೆ ಯುವ ನಟ ಭಾರ್ಗವ್ ಕೃಷ್ಣ (ETV Bharat)

ಇದನ್ನೂ ಓದಿ:ರಿವೀಲ್​ ಆಯ್ತು ಉಪ್ಪಿ ಅಭಿನಯದ 'ಯುಐ' ಬಿಡುಗಡೆ ದಿನಾಂಕ: ಗುಟ್ಟು ಬಿಟ್ಟುಕೊಟ್ರಾ ನಿರ್ಮಾಪಕರು..! - UI Release Date

ಭಾರ್ವವ್ ಕೃಷ್ಣ ಜೊತೆ ವಿರಾಣಿಕ ಶೆಟ್ಟಿ ಜೋಡಿಯಾಗಿದ್ದಾರೆ. ಇವರ ಜೊತೆ ಕಾಕ್ರೋಜ್ ಸುಧೀ, ಯಶ್ ಶೆಟ್ಟಿ, ವರ್ಧನ್, ಅಪೂರ್ವ, ಲಕ್ಷ್ಮೀ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ. ಚಿತ್ರಕ್ಕೆ ವಿಜಯ್ ಯಾರ್ಡ್ಲೆ ಸಂಗೀತ ನಿರ್ದೇಶನ ಮಾಡಿದ್ದಾರೆ. ವೀರೇಶ್ ಅವರ ಕ್ಯಾಮರಾ ಕೈಚಳಕವಿದೆ. ಕೌರವ ವೆಂಕಟೇಶ್ ಅವರ ಸಾಹಸ ನಿರ್ದೇಶನವಿದೆ. ಹಾಡಿನಿಂದ ಗಮನ‌ ಸೆಳೆಯುತ್ತಿರುವ 'ಓಂ ಶಿವಂ' ಚಿತ್ರ ಆಗಸ್ಟ್​​ನಲ್ಲಿ ಬಿಡುಗಡೆ ಆಗಲಿದೆ.

ABOUT THE AUTHOR

...view details