ಕರ್ನಾಟಕ

karnataka

By ETV Bharat Karnataka Team

Published : Jun 24, 2024, 12:45 PM IST

ETV Bharat / entertainment

ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ನಾಗಾರ್ಜುನ್: ಇಷ್ಟಕ್ಕೂ ಆಗಿದ್ದೇನು ಗೊತ್ತಾ? - Nagarjuna Apologises

ಇತ್ತಿಚೇಗೆ ಮುಂಬೈ ಏರ್​ಪೋರ್ಟ್​ನಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಈ ಸಂಬಂಧ ಟಾಲಿವುಡ್​ ಕಿಂಗ್​ ನಾಗಾರ್ಜುನ್​ ಆ ಅಭಿಮಾನಿಯಲ್ಲಿ ಕ್ಷಮೇ ಯಾಚಿಸಿದ್ದಾರೆ. ಅಷ್ಟಕ್ಕೂ ಆ ಘಟನೆ ನಡೆದಿದ್ದೇನು ಎಂಬುದನ್ನ ತಿಳಿಯೋಣಾ ಬನ್ನಿ..

NAGARJUNA UPCOMING MOVIES  NAGARJUNA APOLOGISES  NAGARJUNA BODYGUARD PUSHES HIS FAN  TOLLYWOOD ACTOR NAGARJUNA NEWS
ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ನಾಗಾರ್ಜುನ್ (ETV Bharat)

ಹೈದರಾಬಾದ್​ (ತೆಲಂಗಾಣ): ಅಕ್ಕಿನೇನಿ ನಾಗಾರ್ಜುನ ಮುಂಬೈ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಾಗ ಅನಿರೀಕ್ಷಿತ ಘಟನೆಯೊಂದು ನಡೆದಿತ್ತು. ಏರ್​ಪೋರ್ಟ್​ನಿಂದ ನಾಗಾರ್ಜುನ ಹೊರಗೆ ಬರುತ್ತಿರುವುದನ್ನು ಕಂಡು ಅಭಿಮಾನಿಯೊಬ್ಬರು ಅವರನ್ನು ಭೇಟಿ ಮಾಡಲು ಹತ್ತಿರಕ್ಕೆ ಬಂದಿದ್ದರು. ಆದರೆ, ಇದನ್ನು ಗಮನಿಸಿದ ಅಂಗರಕ್ಷಕ ಆ ಅಭಿಮಾನಿಯನ್ನು ಕ್ಷಣಾರ್ಧದಲ್ಲಿ ಪಕ್ಕಕ್ಕೆ ಎಳೆದಿದ್ದನು. ಇದರಿಂದ ಆ ಅಭಿಮಾನಿ ಕೆಳಗೆ ಬಿದ್ದಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ಮಾನವೀಯತೆ ಏನಾಯಿತು ಎಂದು ನೆಟ್ಟಿಗರು ನಾಗಾರ್ಜುನ್ ಅವರನ್ನು ಪ್ರಶ್ನಿಸಿದ್ದರು. ಆದರೆ, ನಾಗಾರ್ಜುನ ತನ್ನ ಅಂಗರಕ್ಷಕ ಅಭಿಮಾನಿಯನ್ನು ಪಕ್ಕಕ್ಕೆ ಎಳೆದುಕೊಂಡು ಹೋದ ಘಟನೆಯನ್ನು ನಾನು ನಿಜವಾಗಿ ನೋಡಿರಲಿಲ್ಲ. ಇತ್ತೀಚೆಗಷ್ಟೇ ಈ ವಿಷಯ ಗಮನಕ್ಕೆ ಬಂದಿದ್ದರಿಂದ ಪ್ರತಿಕ್ರಿಯಿಸಿದ್ದಾರೆ. "ಈ ಘಟನೆ ಈಗಷ್ಟೇ ನನ್ನ ಗಮನಕ್ಕೆ ಬಂದಿದೆ. ಹೀಗಾಗಬಾರದಿತ್ತು. ನಾನು ಆ ಅಭಿಮಾನಿಗೆ ಕ್ಷಮೆಯಾಚಿಸುತ್ತೇನೆ. ಮುಂದೆ ಹೀಗಾಗದಂತೆ ಸೂಕ್ತ ಕ್ರಮಕೈಗೊಳ್ಳುತ್ತೇನೆ" ಎಂದು ಟಾಲಿವುಡ್​ ನಟ ನಾಗರ್ಜುನ್​ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಓದಿ:ಸೋನಾಕ್ಷಿ ಸಿನ್ಹಾ- ಜಹೀರ್ ಇಕ್ಬಾಲ್ ಅದ್ಧೂರಿ ರಿಸೆಪ್ಷನ್: ನವಜೋಡಿಯ ಸಖತ್ ಡ್ಯಾನ್ಸ್ - Sonakshi Sinha Zaheer Iqbal Dance

ABOUT THE AUTHOR

...view details