ಕರ್ನಾಟಕ

karnataka

ETV Bharat / business

ಎಚ್ಚರ.. ಎಚ್ಚರ..: ನೀರಿನ ಬಿಕ್ಕಟ್ಟಿನಿಂದ ಜಾಗತಿಕ ಆಹಾರ ಉತ್ಪಾದನೆ ಮೇಲೆ ಭಾರಿ ಅಪಾಯ: ವರದಿ

2050 ರ ವೇಳೆಗೆ ವಿಶ್ವದ ಅರ್ಧಕ್ಕಿಂತ ಹೆಚ್ಚು ಆಹಾರ ಉತ್ಪಾದನೆ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಲಿದೆ ಎಂದು ಗ್ಲೋಬಲ್​ ಕಮಿಷನ್​ ಆನ್​​​​ ದಿ ಎಕನಾಮಿಕ್ಸ್​ ಆಫ್​ ವಾಟರ್​ ಹೇಳಿದೆ.

By PTI

Published : 4 hours ago

CLIMATE-WATER-REPORT
ಎಚ್ಚರ.. ಎಚ್ಚರ..: ನೀರಿನ ಬಿಕ್ಕಟ್ಟಿನಿಂದ ಜಾಗತಿಕ ಆಹಾರ ಉತ್ಪಾದನೆ ಮೇಲೆ ಭಾರಿ ಅಪಾಯ: ವರದಿ (ETV Bharat)

ನವದೆಹಲಿ:ನೀರಿನ ಬಿಕ್ಕಟ್ಟು ವಿಶ್ವದ ಆಹಾರ ಉತ್ಪಾದನೆಯ ಅರ್ಧಕ್ಕಿಂತ ಹೆಚ್ಚಿನ ಭಾಗವನ್ನು ಅಪಾಯಕ್ಕೆ ತಳ್ಳಬಹುದು ಮತ್ತು 2050 ರ ವೇಳೆಗೆ ಸರಾಸರಿ ಶೇಕಡಾ 8 ರಷ್ಟು ಜಾಗತಿಕ ಜಿಡಿಪಿ ನಷ್ಟವನ್ನು ಉಂಟುಮಾಡಬಹುದು, ಕಡಿಮೆ ಆದಾಯದ ದೇಶಗಳು ಶೇಕಡಾ 15 ರಷ್ಟು ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ವರದಿಯೊಂದು ಅಂದಾಜಿಸಿದೆ.

ದುರ್ಬಲ ಆರ್ಥಿಕ ವ್ಯವಸ್ಥೆಗಳು, ವಿನಾಶಕಾರಿ ಭೂ ಕಬಳಿಕೆ ಮತ್ತು ನೀರಿನ ಸಂಪನ್ಮೂಲಗಳ ನಿರಂತರ ಅಸಮರ್ಪಕ ನಿರ್ವಹಣೆ, ಹದಗೆಡುತ್ತಿರುವ ಹವಾಮಾನ ಬಿಕ್ಕಟ್ಟು ನೀರಿನ ಸಮಸ್ಯೆಯನ್ನು ತಂದಿಡಲಿದೆ ಎಂದು ಗ್ಲೋಬಲ್​ ಕಮಿಷನ್​ ಆನ್​​​​ ದಿ ಎಕನಾಮಿಕ್ಸ್​ ಆಫ್​ ವಾಟರ್​ ವರದಿ ಹೇಳಿದೆ.

ನೀರಿನ ಬಿಕ್ಕಟ್ಟು 2050 ರ ವೇಳೆಗೆ ವಿಶ್ವದ ಅರ್ಧಕ್ಕಿಂತ ಹೆಚ್ಚು ಆಹಾರ ಉತ್ಪಾದನೆ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಲಿದೆ. ಮತ್ತು ಜಾಗತಿಕವಾಗಿ ದೇಶಗಳಲ್ಲಿ ಜಿಡಿಪಿಯ ಶೇಕಡಾ 8 ರಷ್ಟು ನಷ್ಟವನ್ನು ಉಂಟುಮಾಡಬಹುದು, ಕಡಿಮೆ-ಆದಾಯದ ರಾಷ್ಟ್ರಗಳಲ್ಲಿ ಇದು ಶೇಕಡಾ 15ರಷ್ಟನ್ನು ದಾಟಲಿದೆ. ಜೊತೆಗೆ ಇನ್ನೂ ದೊಡ್ಡ ಆರ್ಥಿಕ ಪರಿಣಾಮಗಳನ್ನು ಉಂಟುಮಾಡಬಹುದು " ಎಂದು ಆಯೋಗ ಹೇಳಿದೆ.

ಸುಮಾರು ಮೂರು ಶತಕೋಟಿ ಜನರು ಮತ್ತು ಪ್ರಪಂಚದ ಅರ್ಧದಷ್ಟು ಆಹಾರ ಉತ್ಪಾದನೆಯು ನೀರಿನ ಲಭ್ಯತೆ ಕೊರತೆಯಿಂದ ಒಣಗಿಸುವಿಕೆಗೆ ಕಾರಣವಾಗಲಿದೆ. ಇದು ಅಸ್ಥಿರ ಪ್ರವೃತ್ತಿಯನ್ನು ಅನುಭವಿಸುತ್ತಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಅಂತರ್ಜಲ ಕುಸಿತದಿಂದ ಹಲವಾರು ನಗರಗಳು ಮುಳುಗುತ್ತಿವೆ ಎಂವ ವಿಚಾರವನ್ನು ವರದಿಯಲ್ಲಿ ಹೇಳಲಾಗಿದೆ.

ವಿಶ್ವದ ಅರ್ಧದಷ್ಟು ಜನಸಂಖ್ಯೆ ಮೇಲೆ ಜಲಾಘಾತ:ಇಂದು, ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರು ನೀರಿನ ಕೊರತೆ ಎದುರಿಸುತ್ತಿದ್ದಾರೆ. ಈ ಪ್ರಮುಖ ಸಂಪನ್ಮೂಲವು ಹೆಚ್ಚು ಕೊರತೆಯಾಗುತ್ತಿದ್ದಂತೆ, ಆಹಾರ ಭದ್ರತೆ ಮತ್ತು ಮಾನವ ಅಭಿವೃದ್ಧಿ ಅಪಾಯದಲ್ಲಿದೆ ಎಂಬುದನ್ನು ನಾವು ಅನುಮತಿಸುತ್ತಿದ್ದೇವೆ ಎಂದು ಪಾಟ್ಸ್‌ಡ್ಯಾಮ್ ಇನ್‌ಸ್ಟಿಟ್ಯೂಟ್ ಫಾರ್ ಕ್ಲೈಮೇಟ್‌ನ ನಿರ್ದೇಶಕ ಜೋಹಾನ್ ರಾಕ್‌ಸ್ಟ್ರಾಮ್ ಹೇಳಿದ್ದಾರೆ. ಇವರು, ಇಂಪ್ಯಾಕ್ಟ್ ರಿಸರ್ಚ್ (PIK) ಮತ್ತು ಆಯೋಗದ ನಾಲ್ಕು ಸಹ - ಅಧ್ಯಕ್ಷರಲ್ಲಿ ಒಬ್ಬರಾಗಿದ್ದಾರೆ.

ಸಮತೋಲಿತ ಜಲಚಕ್ರದಿಂದ ಹೊರಕ್ಕೆ:ಮಾನವ ಇತಿಹಾಸದಲ್ಲಿ ಮೊದಲ ಬಾರಿಗೆ, ನಾವು ಜಾಗತಿಕ ಜಲಚಕ್ರವನ್ನು ಸಮತೋಲನದಿಂದ ಹೊರಕ್ಕೆ ತಳ್ಳುತ್ತಿದ್ದೇವೆ. ಎಲ್ಲ ಸಿಹಿನೀರಿನ ಮೂಲವಾದ ಮಳೆಯು ಮಾನವ - ಉಂಟು ಮಾಡುವ ಹವಾಮಾನ ಮತ್ತು ಭೂ ಬಳಕೆಯ ಬದಲಾವಣೆಗಳಿಂದ ಮಾನವನ ಅಡಿಪಾಯವನ್ನು ದುರ್ಬಲಗೊಳಿಸುವುದರಿಂದ ಇನ್ನು ಮುಂದೆ ಇದನ್ನು ಅವಲಂಬಿಸಲಾಗುವುದಿಲ್ಲ ಎಂದು ರಾಕ್‌ಸ್ಟ್ರಾಮ್ ಹೇಳಿದ್ದಾರೆ.

ನೀರಿನ ನಿರ್ವಹಣೆಯ ಪ್ರಸ್ತುತ ವಿಧಾನಗಳು ಆರ್ಥಿಕತೆಯಾದ್ಯಂತ ನೀರಿನ ಬಹು ಮೌಲ್ಯಗಳನ್ನು ಮತ್ತು ನಿರ್ಣಾಯಕ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುವಲ್ಲಿ ಅದರ ಪಾತ್ರವನ್ನು ಕಡೆಗಣಿಸುವ ಮೂಲಕ ವಿಫಲವಾಗಿವೆ ಎಂದು ವರದಿ ಹೇಳಿದೆ.

ಜಾಗತಿಕವಾಗಿ ನೀರಿನ ಕಡಿಮೆ ಬೆಲೆಯು ಅದರ ಅತಿಯಾದ ಬಳಕೆಗೆ ಉತ್ತೇಜನ ನೀಡಿದೆ ಮತ್ತು ನೀರಿನ ಒತ್ತಡಕ್ಕೆ ಹೆಚ್ಚು ದುರ್ಬಲವಾಗಿರುವ ಪ್ರದೇಶಗಳಲ್ಲಿ ಡೇಟಾ ಕೇಂದ್ರಗಳು ಮತ್ತು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಂತಹ ನೀರು - ತೀವ್ರವಾದ ಕೈಗಾರಿಕೆಗಳ ಸ್ಥಳಾಂತರಕ್ಕೆ ಕಾರಣವಾಗಿದೆ.

ನೀರಿನ ಪರಿಣಾಮಕಾರಿ ಬಳಕೆ ಬಗ್ಗೆ ಸಲಹೆ:ಪ್ರತಿ ವಲಯದಲ್ಲಿ ನೀರನ್ನು ಹೆಚ್ಚು ಪರಿಣಾಮಕಾರಿಯಾಗಿ, ಜನಸಂಖ್ಯೆಯಾದ್ಯಂತ ಸಮಾನವಾಗಿ ಮತ್ತು ದೀರ್ಘಾವಧಿಯಲ್ಲಿ ಸುಸ್ಥಿರವಾಗಿ ಬಳಸುವುದನ್ನು ಖಚಿತಪಡಿಸಿಕೊಳ್ಳಲು ಸರಿಯಾದ ಬೆಲೆ, ಸಬ್ಸಿಡಿಗಳು ಮತ್ತು ಇತರ ಪ್ರೋತ್ಸಾಹದ ಅಗತ್ಯವಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಜಾಗತಿಕವಾಗಿ ನೀರಿನ ಬಿಕ್ಕಟ್ಟು ಒಂದು ದುರಂತವೇ ಸರಿ, ಆದರೆ ಇದು ನೀರಿನ ಅರ್ಥಶಾಸ್ತ್ರವನ್ನು ಪರಿವರ್ತಿಸುವ ಅವಕಾಶವನ್ನು ಒದಗಿಸುತ್ತದೆ. ನೀರಿನ ಕೊರತೆ ಮತ್ತು ಅದು ಒದಗಿಸುವ ಅನೇಕ ಪ್ರಯೋಜನಗಳನ್ನು ಗುರುತಿಸಲು ನಾವು ಅದನ್ನು ಸರಿಯಾಗಿ ಮೌಲ್ಯಮಾಪನ ಮಾಡುವ ಮೂಲಕ ಸರಿಪಡಿಸಬೇಕಿದೆ ಎಂದು ವಿಶ್ವ ವ್ಯಾಪಾರ ಸಂಸ್ಥೆಯ ಮಹಾನಿರ್ದೇಶಕ ಮತ್ತು ಆಯೋಗದ ಸಹ-ಅಧ್ಯಕ್ಷರಾದ ನ್ಗೋಜಿ ಒಕೊಂಜೊ-ಇವಾಲಾ ಹೇಳಿದ್ದಾರೆ

ಪ್ರಸ್ತುತ ವಿಧಾನಗಳು ಮುಖ್ಯವಾಗಿ ನದಿಗಳು, ಸರೋವರಗಳು ಮತ್ತು ಜಲಚರಗಳಂತಹ ಗೋಚರ ನೀರಿನ ಮೂಲಗಳ ಮೇಲೆ ಕೇಂದ್ರೀಕರಿಸುತ್ತವೆ, ಆದರೆ "ಹಸಿರು ನೀರಿನ" ಪ್ರಾಮುಖ್ಯತೆಯನ್ನು ನಿರ್ಲಕ್ಷಿಸುತ್ತಿದ್ದೇವೆ - ಮಣ್ಣಿನಲ್ಲಿ ತೇವಾಂಶ ಮತ್ತು ಸಸ್ಯ ಜೀವನ, ಇದು ಸ್ಥಿರವಾದ ಮಳೆಯ ಮಾದರಿಗಳನ್ನು ಕಾಪಾಡಿಕೊಳ್ಳಲು ಮತ್ತು ಬೆಂಬಲಿಸಲು ಪ್ರಮುಖವಾದ ಅಂಶವಾಗಿದೆ.

"ಹಸಿರು ನೀರಿನ" ಸ್ಥಿರ ಪೂರೈಕೆಯು ಸ್ಥಿರವಾದ ಮಳೆಯ ಮಾದರಿಗಳನ್ನು ನಿರ್ವಹಿಸಲು ನಿರ್ಣಾಯಕವಾಗಿದೆ, ಇದು ಆರ್ಥಿಕತೆಗಳು, ಜೀವನೋಪಾಯಗಳು ಮತ್ತು ಹವಾಮಾನ ಬದಲಾವಣೆಯನ್ನು ತಗ್ಗಿಸಲು ಅವಶ್ಯಕವಾಗಿದೆ ಎಂದು ವರದಿಯಲ್ಲಿ ಒತ್ತಿ ಹೇಳಲಾಗಿದೆ.

ಇವುಗಳನ್ನು ಓದಿ:ಸಮುದ್ರಕ್ಕೆ ಮರು ಆಮ್ಲಜನಕೀಕರಣ; ಬಾಲ್ಟಿಕ್​ ಸಮುದ್ರದಲ್ಲಿ ನಡೆಯಲಿದೆ ವಿನೂತನ ಪ್ರಯೋಗ

2035ಕ್ಕೆ ಮಂಗಳನ ಅಂಗಳಕ್ಕೆ ಮಾನವರನ್ನ ಕಳುಹಿಸಲು ನಾಸಾ ಸರ್ವ ಸನ್ನದ್ಧ

ಹೈನುಗಾರಿಕೆ ಅಭಿವೃದ್ಧಿ, ಪ್ರಾಣಿಗಳಿಗೆ ಉತ್ತಮ ಪ್ರಪಂಚ ಸೃಷ್ಟಿಸಲು AI ಬಹು ಉಪಯೋಗ!: ಅದು ಹೇಗಂತೀರಾ? - AI for Better World for Animals

ABOUT THE AUTHOR

...view details