ಕರ್ನಾಟಕ

karnataka

ವಾಹನ ನೋಂದಣಿ ಕಾಯಿದೆಯಲ್ಲಿ ತಿದ್ದುಪಡಿ: ಶೀಘ್ರವೇ TS ಆಗಲಿದೆ TG

By ETV Bharat Karnataka Team

Published : Feb 5, 2024, 10:29 AM IST

ಕೇಂದ್ರ ಸರ್ಕಾರದ ಗೆಜೆಟ್ ಪ್ರಕಾರ ಪ್ರಸ್ತುತ ತೆಲಂಗಾಣ ಸಂಪುಟ 'ಟಿಎಸ್' ಅನ್ನು 'ಟಿಜಿ' ಎಂದು ಬದಲಾಯಿಸಲು ನಿರ್ಧರಿಸಿದೆ. ಇದಕ್ಕಾಗಿ ವಾಹನ ನೋಂದಣಿ ಕಾಯ್ದೆಯಲ್ಲಿ ತಿದ್ದುಪಡಿ ತರಲು ತೀರ್ಮಾನಿಸಿದೆ.

Etv BharaTS will become TG - will soon be amended in the Vehicle Registration Actt
Etv Bharವಾಹನ ನೋಂದಣಿ ಕಾಯಿದೆಯಲ್ಲಿ ತಿದ್ದುಪಡಿ: ಶೀಘ್ರವೇ TS ಆಗಲಿದೆ TGat

ಹೈದರಾಬಾದ್​: ವಿಧಾನಸಭೆ ಚುನಾವಣೆ ವೇಳೆ ನೀಡಿದ ಆರು ಗ್ಯಾರಂಟಿಗಳ ಅಂಗವಾಗಿ ಈಗಾಗಲೇ ತೆಲಂಗಾಣ ಸರ್ಕಾರ ಎರಡು ಖಾತರಿಗಳಿಗೆ ಚಾಲನೆ ನೀಡಿದೆ. ಮತ್ತೆರಡು ಖಾತ್ರಿಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಮತ್ತು ಗೃಹ ಅಗತ್ಯಗಳಿಗೆ 500 ರೂ.ಗಳ ಗ್ಯಾಸ್‌ ಸಿಲಿಂಡರ್‌ ನೀಡುವ ಯೋಜನೆಗಳನ್ನು ಜಾರಿಗೆ ತರಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.

ಇದೇ 8ರಿಂದ ವಿಧಾನಸಭೆ ಅಧಿವೇಶನ ಕರೆಯಲು ತೀರ್ಮಾನಿಸಿದ್ದು, ಫೆ. 10ರಂದು ಬಜೆಟ್ ಮಂಡಿಸಲು ನಿರ್ಧರಿಸಲಾಗಿದೆ. ಈ ಸಭೆಗಳಲ್ಲಿ ಮೇಲಿನ ಎರಡು ಖಾತರಿಗಳ ಅನುಷ್ಠಾನದ ಕುರಿತು ಘೋಷಣೆ ಮಾಡಲಾಗುವುದು ಎಂದು ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಿಸಿದ ಆರು ಭರವಸೆಗಳಲ್ಲಿ ಆರೋಗ್ಯಶ್ರೀ ಯೋಜನೆಯ ಮೌಲ್ಯವನ್ನು 10 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇನ್ನು ಮಹಿಳೆಯರಿಗೆ ಆರ್ ಟಿಸಿ ಬಸ್ ನಲ್ಲಿ ಉಚಿತ ಪ್ರಯಾಣ ಈಗಾಗಲೇ ಜಾರಿಯಾಗಿದೆ.

ಕಾಂಗ್ರೆಸ್​​​​​ ಸರ್ಕಾರ ಅಧಿಕಾರಕ್ಕೆ ಬಂದ 100 ದಿನದೊಳಗೆ ಆರೂ ಯೋಜನೆಗಳನ್ನು ಜಾರಿಗೊಳಿಸುವ ಭರವಸೆಯ ಪ್ರಕಾರ ಇನ್ನೆರಡು ಯೋಜನೆಗಳಿಗೆ ಚಾಲನೆ ಸಿಗಲಿದೆ. ತೆಲಂಗಾಣ ಸೆಕ್ರೆಟರಿಯೇಟ್ ನಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅಧ್ಯಕ್ಷತೆಯಲ್ಲಿ ಭಾನುವಾರ ಮೂರು ಗಂಟೆಗೂ ಹೆಚ್ಚು ಕಾಲ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸಚಿವ ದುಡ್ಡಿಲ್ಲ ಶ್ರೀಧರಬಾಬು ಮತ್ತು ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಅವರು ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಣಯಗಳನ್ನು ಮಾಧ್ಯಮದವರಿಗೆ ನೀಡಿದರು.

ವಾಹನ ನೋಂದಣಿ ಕಾಯಿದೆಯಲ್ಲಿ ತಿದ್ದುಪಡಿ: ತೆಲಂಗಾಣ ರಾಜ್ಯ ರಚನೆಯಾದ ನಂತರ ತೆಲಂಗಾಣ ವಾಹನ ನೋಂದಣಿ ಕೋಡ್ ಅನ್ನು ಕೇಂದ್ರ ಸರ್ಕಾರದ ಗೆಜೆಟ್‌ನಲ್ಲಿ ಟಿಜಿ ಎಂದು ಘೋಷಿಸಿತ್ತು. ಆ ಗೆಜೆಟ್ ಪ್ರಕಾರ ಪ್ರಸ್ತುತ ತೆಲಂಗಾಣ ಸಂಪುಟ 'ಟಿಎಸ್' ಅನ್ನು 'ಟಿಜಿ' ಎಂದು ಬದಲಾಯಿಸಲು ನಿರ್ಧರಿಸಿದೆ. ಇದಕ್ಕಾಗಿ ವಾಹನ ನೋಂದಣಿ ಕಾಯ್ದೆಯಲ್ಲಿ ತಿದ್ದುಪಡಿ ತರುತ್ತೇವೆ. ಕೊಡಂಗಲ್ ಪ್ರದೇಶದ ಅಭಿವೃದ್ಧಿಗೆ ವಿಶೇಷ ಸಂಸ್ಥೆ ಸ್ಥಾಪಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.

ರಾಜ್ಯದಲ್ಲಿರುವ 65 ಸರ್ಕಾರಿ ಐಟಿಐಗಳನ್ನು ಆಧುನೀಕರಣಗೊಳಿಸಿ ಅದರಲ್ಲಿ ವಿವಿಧ ಕೋರ್ಸ್ ಗಳನ್ನು ಅಳವಡಿಸಿ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ. ಹೈಕೋರ್ಟ್‌ಗೆ 100 ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಇದನ್ನು ಓದಿ:ಯುಸಿಸಿ ವರದಿ ಅಂಗೀಕರಿಸಿದ ಉತ್ತರಾಖಂಡ ಸರ್ಕಾರ: ಅಧಿವೇಶನದಲ್ಲಿ ಮಸೂದೆಯಾಗಿ ಮಂಡನೆ ಸಾಧ್ಯತೆ

ABOUT THE AUTHOR

...view details