ಕರ್ನಾಟಕ

karnataka

ರಕ್ಷಾಬಂಧನದಂದು ಮಹಿಳೆಯರ ಸುರಕ್ಷತೆಗೆ ರಾಷ್ಟ್ರಪತಿ ಕರೆ; ಪ್ರಧಾನಿ ಸೇರಿದಂತೆ ಹಲವು ಗಣ್ಯರಿಂದ ಶುಭಾಶಯ - President Droupadi Murmu wishes

By ETV Bharat Karnataka Team

Published : Aug 19, 2024, 12:26 PM IST

ಈ ದಿನದಂದು ಸಮಾಜದಲ್ಲಿರುವ ಎಲ್ಲಾ ಮಹಿಳೆಯರ ಸುರಕ್ಷೆ ಮತ್ತು ಗೌರವ ಖಚಿತಪಡಿಸುವ ಭರವಸೆಯನ್ನು ಪ್ರತಿಯೊಬ್ಬರು ನೀಡುತ್ತಾರೆ ಎಂಬ ನಿರೀಕ್ಷೆ ಹೊಂದಿರುವುದಾಗಿ ತಿಳಿಸಿದ್ದಾರೆ.

President Droupadi Murmu wished the people on the Raksha Bandhan
ರಾಷ್ಟ್ರಪತಿ ಮುರ್ಮಾ (ಐಎಎನ್​ಎಸ್​​)

ನವದೆಹಲಿ: ರಕ್ಷಾ ಬಂಧನ ಹಿನ್ನೆಲೆ ಜನರಿಗೆ ಶುಭಾಶಯ ತಿಳಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮಾ ಅವರು, ಮಹಿಳೆಯರ ಸುರಕ್ಷತೆ ಮತ್ತು ಗೌರವ ಕಾಪಾಡುವುದು ಅತ್ಯಗತ್ಯ ಎಂದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, ರಕ್ಷಾ ಬಂಧನದ ವಿಶೇಷ ದಿನದಂದು, ಪ್ರತಿಯೊಬ್ಬರಿಗೆ ಶುಭ ಹಾರೈಸುತ್ತೇನೆ. ಈ ಹಬ್ಬವನ್ನು ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿ ಮತ್ತು ನಂಬಿಕೆಯಾಗಿ ಆಚರಿಸಲಾಗುವುದು. ಹಾಗೇ ಈ ಹಬ್ಬವು ನಮಗೆ ಎಲ್ಲಾ ಸಹೋದರಿಯರನ್ನು ಮತ್ತು ಮಕ್ಕಳನ್ನು ಕಾಳಜಿ ಮತ್ತು ಗೌರವಯುತವಾಗಿ ನೋಡುವಂತೆ ಕಲಿಸುತ್ತದೆ ಎಂಬ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಈ ದಿನದಂದು ಸಮಾಜದಲ್ಲಿರುವ ಎಲ್ಲಾ ಮಹಿಳೆಯರ ಸುರಕ್ಷೆ ಮತ್ತು ಗೌರವ ಖಚಿತಪಡಿಸುವ ಭರವಸೆಯನ್ನು ಪ್ರತಿಯೊಬ್ಬರು ನೀಡುತ್ತಾರೆ ಎಂಬ ನಿರೀಕ್ಷೆ ಹೊಂದಿರುವುದಾಗಿ ತಿಳಿಸಿದ್ದಾರೆ.

ಪ್ರಧಾನಿ ಶುಭಾಶಯ: ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ರಕ್ಷಾ ಬಂಧನ್​ ಹಿನ್ನೆಲೆ ದೇಶದ ಜನರಿಗೆ ಶುಭಾಶಯ ಕೋರಿದ್ದಾರೆ. ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿ ವ್ಯಕ್ತಪಡಿಸುವ ರಕ್ಷಾ ಬಂಧನ ಹಬ್ಬದ ಶುಭಾಯಗಳು. ಈ ದಿನವು ಎಲ್ಲರ ಜೀವನದಲ್ಲಿ ಸುಖ, ಯಶಸ್ಸು, ಒಳ್ಳೆಯದನ್ನು ತರಲಿ ಎಂದು ಹಾರೈಸಿದ್ದಾರೆ.

ಗೃಹ ಸಚಿವ ಅಮಿತ್​ ಶಾ ಕೂಡ ರಕ್ಷಾ ಬಂಧನ್​ ದಿನದಂದು ಎಲ್ಲಾ ಕುಟುಂಬಗಳಿಗೆ ಸುಖ ಮತ್ತು ಸಮೃದ್ಧಿ ತರಲಿ ಎಂದು ಆಶಿಸುವುದಾಗಿ ಶುಭ ಕೋರಿದ್ದಾರೆ.

ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ರಕ್ಷಾ ಬಂಧನದ ಶುಭಾಶಯವನ್ನು ಎಲ್ಲರಿಗೂ ತಿಳಿಸಿದ್ದು, ಸಹೋದರ ಸಹೋದರಿಯರ ನಡುವಿನ ಬಂಧವನ್ನು ಈ ದಿನ ತೋರಿಸುತ್ತದೆ. ಇದು ರಕ್ಷಣೆ ಮತ್ತು ಭದ್ರತೆಯ ಮಹತ್ವವನ್ನು ನೆನಪಿಸುತ್ತದೆ. ಈ ಹಬ್ಬವು ನಿಮ್ಮ ಕುಟುಂಬಗಳಿಗೆ ಮತ್ತು ನಮ್ಮ ದೇಶಕ್ಕೆ ಒಳಿತಾಗಲಿ ಎಂದಿದ್ದಾರೆ.

ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ, ರಕ್ಷಾ ಬಂಧನ್​ ಹಬ್ಬವು ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿಯ ಸಂಕೇತವಾಗಿದೆ. ಈ ದಿನದಂದು ದೇಶದ ಎಲ್ಲಾ ಜನರಿಗೆ ನಾನು ಹೃದಯಪೂರ್ವಕ ಶುಭಾಶಯ ತಿಳಿಸುತ್ತೇನೆ. ಈ ಹಬ್ಬವು ಸಂಬಂಧಗಳ ನಡುವಿನ ಬಲ ಮತ್ತು ಸಾಮರಸ್ಯವನ್ನು ತೋರಿಸುತ್ತದೆ ಎಂದು ತಿಳಿಸಿದರು.

ವಿಶೇಷ ಫೋಟೋ ಹಂಚಿಕೊಂಡ ರಾಹುಲ್​ ಗಾಂಧಿ: ವಿಪಕ್ಷ ನಾಯಕ ರಾಹುಲ್​ ಗಾಂಧಿ ಕೂಡ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿಯೊಂದಿಗಿನ ವಿಶೇಷದ ಫೋಟೋ ಹಂಚಿಕೊಳ್ಳುವ ಮೂಲಕ ಶುಭ ಕೋರಿದ್ದಾರೆ. ಸಹೋದರ ಮತ್ತು ಹಸೋದರಿಯ ನಡುವಿನ ಅಚಲ ಪ್ರೀತಿ ಮತ್ತು ವಿಶ್ವಾಸದ ಪ್ರತೀಕ ಈ ಹಬ್ಬವಾಗಿದೆ. ಈ ರಕ್ಷಾ ಬಂಧನವು ಈ ಪವಿತ್ರ ಬಂಧವನ್ನು ಬಲಗೊಳಿಸಲಿದೆ ಎಂದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ರಕ್ಷಾ ಬಂಧನ: ಚಿನ್ನ, ಬೆಳ್ಳಿ, ವಜ್ರದ ರಾಖಿ ಖರೀದಿಸಿದ ಸಹೋದರಿಯರು

ABOUT THE AUTHOR

...view details