ಕರ್ನಾಟಕ

karnataka

ರಾಜೀವ್ ಗಾಂಧಿ ಫೌಂಡೇಶನ್, ಸಿಡಬ್ಲ್ಯೂಸಿಯಲ್ಲಿ ಎಷ್ಟು ಒಬಿಸಿಗಳಿದ್ದಾರೆ: ರಾಹುಲ್​ ಗಾಂಧಿಗೆ ಜೆಪಿ ನಡ್ಡಾ ಪ್ರಶ್ನೆ - Nadda hits back rahul gandhi

By PTI

Published : Jul 30, 2024, 10:53 PM IST

ಜಾತಿಗಣತಿ, ಎಂಎಸ್​ಪಿ, ಅಗ್ನಿವೀರ್​ ಯೋಜನೆ ಟೀಕಿಸಿದ್ದ ವಿಪಕ್ಷ ನಾಯಕ ರಾಹುಲ್​ ಗಾಂಧಿ ಅವರಿಗೆ ರಾಜ್ಯಸಭಾ ನಾಯಕ, ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ರಾಹುಲ್​ ಗಾಂಧಿಗೆ ಜೆಪಿ ನಡ್ಡಾ ಪ್ರಶ್ನೆ
ರಾಹುಲ್​ ಗಾಂಧಿಗೆ ಜೆಪಿ ನಡ್ಡಾ ಪ್ರಶ್ನೆ (ETV Bharat)

ನವದೆಹಲಿ:ಬಜೆಟ್​ಗೂ ಮುನ್ನ ಹಲ್ವಾ ತಯಾರಿಕೆಯಲ್ಲಿ ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಅಧಿಕಾರಿಗಳು ಯಾರೂ ಇರಲಿಲ್ಲ ಎಂಬ ಪ್ರತಿಪಕ್ಷ ನಾಯಕ ರಾಹುಲ್​ ಗಾಂಧಿ ಅವರ ಹೇಳಿಕೆಯ ವಿರುದ್ಧ ಬಿಜೆಪಿ ತಿರುಗಿ ಬಿದ್ದಿದೆ. ರಾಜ್ಯಸಭಾ ನಾಯಕ, ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಈ ಬಗ್ಗೆ ಕಿಡಿಕಾರಿದ್ದು, ಕಾಂಗ್ರೆಸ್​ ಕಾರ್ಯಕಾರಿ ಸಮಿತಿ, ರಾಜೀವ್ ಗಾಂಧಿ ಪ್ರತಿಷ್ಠಾನದ ಮಂಡಳಿಯಲ್ಲಿ ಎಷ್ಟು ಜನ ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ನಾಯಕರಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯಸಭೆಯಲ್ಲಿ ಕೇಂದ್ರ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಮೇಲ್ಮನೆಯ ನಾಯಕ ಜೆಪಿ ನಡ್ಡಾ ಅವರು, ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯಲ್ಲಿ ಎಷ್ಟು ಒಬಿಸಿಗಳಿದ್ದಾರೆ? ರಾಜೀವ್ ಗಾಂಧಿ ಫೌಂಡೇಶನ್‌ನ ಮಂಡಳಿಯಲ್ಲಿ ಎಷ್ಟು ಒಬಿಸಿ, ಎಸ್‌ಸಿ, ಎಸ್‌ಟಿಗಳಿದ್ದಾರೆ? ಯುಪಿಎ ಆಡಳಿತದಲ್ಲಿ ರಾಷ್ಟ್ರೀಯ ಸಲಹಾ ಸಮಿತಿಯಲ್ಲಿ ಎಷ್ಟು ಜನ ಒಬಿಸಿ, ಎಸ್‌ಸಿ, ಮತ್ತು ಎಸ್‌ಟಿಗಳಿದ್ದರು ಎಂಬುದನ್ನು ರಾಹುಲ್​ ಗಾಂಧಿ ವಿವರಿಸಬೇಕು ಎಂದು ಸವಾಲು ಹಾಕಿದರು.

ಒಬಿಸಿ ಪರ ಮೊಸಳೆ ಕಣ್ಣೀರು:ಒಬಿಸಿ ಪರವಾಗಿದ್ದೇವೆ ಎಂದು ಬರಿ ಬಾಯಲ್ಲಿ ಹೇಳಿ, ಮೊಸಳೆ ಕಣ್ಣೀರು ಸುರಿಸುವುದರಿಂದ ಪ್ರಯೋಜನವಾಗದು. ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಸಚಿವ ಸಂಪುಟದಲ್ಲಿ ಗರಿಷ್ಠ ಸಂಖ್ಯೆಯ ಒಬಿಸಿ ಮತ್ತು ಎಸ್ಸಿ / ಎಸ್ಟಿ ಸದಸ್ಯರು ಇದ್ದಾರೆ. ಮತಕ್ಕಾಗಿ ಕಾಂಗ್ರೆಸ್ ಒಬಿಸಿ (ಇತರ ಹಿಂದುಳಿದ ವರ್ಗಗಳ) ಚಾಂಪಿಯನ್ ಎಂದು ಬಿಂಬಿಸಿಕೊಳ್ಳಲು ಆರಂಭಿಸಿದೆ. ಮಂಡಲ್ ಆಯೋಗದ ವರದಿ ಬಗ್ಗೆ ರಾಜೀವ್ ಗಾಂಧಿ ಹೇಳಿದ್ದೇನು? ಆ ವ್ಯಕ್ತಿ ಅಂದು ಏಕೆ ಹಠಮಾರಿತನ ತೋರಿದರು ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಂಎಸ್​ಪಿ ಮತ್ತು ಮೀಸಲಾತಿ ವಿಚಾರವಾಗಿ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ವಿರೋಧಿಸಿದ್ದರು. ಆದರೆ, ಈಗ ಅದನ್ನು ಜಾರಿಗೆ ತರಬೇಕು ಎಂದು ಆಗ್ರಹಿಸುತ್ತಿದ್ದಾರೆ. ಒಬಿಸಿಗಳು ಮತ್ತು ರೈತರ ಚಾಂಪಿಯನ್ ಎಂದು ಹೇಳಿಕೊಳ್ಳುವ ಪಕ್ಷ ಅಂದು ಏಕೆ ಜಾರಿ ಮಾಡಲಿಲ್ಲ. ಇದು ಬರಿ ಮೊಸಳೆ ಕಣ್ಣೀರಿನ ನಾಟಕ ಎಂದು ಜರಿದರು.

ಎಂಎಸ್​ಸಿ ವಿರೋಧಿಸಿದ್ದ ಕಾಂಗ್ರೆಸ್​:ಕಾಂಗ್ರೆಸ್ ಸೇನೆಯ ಪರವಾಗಿದ್ದರೆ, ರಾಷ್ಟ್ರೀಯ ವಿಷಯಗಳಲ್ಲಿ ರಾಜಕೀಯ ಮಾಡಬಾರದು. ಸೇನೆಯನ್ನು ರಾಜಕೀಯದಿಂದ ದೂರವಿಡಬೇಕು. ಅಗ್ನಿಪಥ ಯೋಜನೆ ನಿರ್ಧಾರವನ್ನು ಹಲವು ಸಮಾಲೋಚನೆಗಳ ನಂತರ ತೆಗೆದುಕೊಂಡ ನಿರ್ಧಾರವಾಗಿದೆ. 1971-72ರ ನಂತರ ‘ಒಂದು ಶ್ರೇಣಿ ಒಂದು ಪಿಂಚಣಿ’ ಎಂಬ ವಿಷಯ ಪ್ರಸ್ತಾಪವಾದಾಗ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ವಿರೋಧಿಸಿದ್ದವು ಎಂದರು.

ಯುಪಿಎ ಸರ್ಕಾರದ ಮಾಜಿ ಕೃಷಿ ಸಚಿವ ಕೆವಿ ಥಾಮಸ್ ಅವರು ಸ್ವಾಮಿನಾಥನ್ ಆಯೋಗದ ಶಿಫಾರಸ್ಸು ಮಾಡಿದ್ದ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಜಾರಿಯನ್ನು ವಿರೋಧಿಸಿದ್ದರು. ಇಂದು ನೀವು ಎಂಎಸ್‌ಪಿಯ ಪರ ಎಂದು ಕೂಗುತ್ತಿದ್ದೀರಿ. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಶೇಕಡಾ 50 ರಷ್ಟು ಉತ್ಪಾದನಾ ವೆಚ್ಚವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿದೆ ಎಂದು ಹೇಳಿದರು.

ಇದನ್ನೂ ಓದಿ:'ಚಕ್ರವ್ಯೂಹ'ದಲ್ಲಿ ಅಭಿಮನ್ಯುವಿನಂತೆ ಯುವಕರು, ಮಹಿಳೆಯರನ್ನು ಸಿಲುಕಿಸಿ ಭಯದ ವಾತಾವರಣ ಸೃಷ್ಟಿ: ರಾಹುಲ್​ - Rahul Gandhi

ABOUT THE AUTHOR

...view details