ಕರ್ನಾಟಕ

karnataka

ETV Bharat / bharat

ಅಂತಾರಾಷ್ಟ್ರೀಯ ಗೀತಾ ಮಹೋತ್ಸವ: ಗಮನ ಸೆಳೆಯುತ್ತಿರುವ ಮಹಿಳೆಯ ಪಂಚಗವ್ಯ ಉತ್ಪನ್ನಗಳ ಮಳಿಗೆ - INTERNATIONAL GITA MAHOTSAV

ಸಂಸ್ಥೆಯೊಂದರ ಮೂಲಕ ಗೋವಿನ ಪಂಚಗವ್ಯದಿಂದ ತಯಾರಿಸಿದ 50 ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ.

gujarat-simran-stall-from-becomes-center-of-attraction-in-international-gita-festival-2024
ಸಿಮ್ರಾನ್​ ಆರ್ಯ (ಈಟಿವಿ ಭಾರತ್​)

By ETV Bharat Karnataka Team

Published : Dec 5, 2024, 11:26 AM IST

ಕುರುಕ್ಷೇತ್ರ (ಹರಿಯಾಣ): ಇಲ್ಲಿನ ಕುರುಕ್ಷೇತ್ರದ ಪವಿತ್ರ ಭೂಮಿಯಲ್ಲಿ ಅಂತಾರಾಷ್ಟ್ರೀಯ ಗೀತಾ ಮಹೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಸಾಗಿದೆ. ನವೆಂಬರ್​ 18 ರಿಂದ ಆರಂಭವಾದ ಈ ಹಬ್ಬ ಡಿಸೆಂಬರ್​ 15ರವರೆಗೆ ನಡೆಯಲಿದೆ. ಡಿಸೆಂಬರ್​ 11ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಹಿನ್ನೆಲೆ ಬ್ರಹ್ಮಸರೋವರದ ಪುರುಷೋತ್ತಮಪುರ ಬಾಗ್‌ನಲ್ಲಿ ಭರದ ಸಿದ್ಧತೆಗಳು ಸಾಗಿದೆ. ಈಗಾಗಲೇ ಗೀತಾ ಮಹೋತ್ಸವ ಮಹತ್ವ ಸಾರುವ ಅನೇಕ ಪುಸ್ತಕಗಳ ಮಳಿಗೆ ಸ್ಥಾಪಿಸಲಾಗಿದೆ. ಇದರಲ್ಲಿ ಗುಜರಾತ್​ ಮೂಲದ ಮಹಿಳೆಯ ಮಳಿಗೆ ಎಲ್ಲರ ಗಮನ ಸೆಳೆದಿದೆ.

50 ಕ್ಕೂ ಹೆಚ್ಚು ಉತ್ಪನ್ನಗಳ ಸಿದ್ಧತೆ: ಗುಜರಾತ್​ನ ಮಹಿಳೆ ಸಿಮ್ರಾನ್​ ಆರ್ಯ ತಮ್ಮ ಮಳಿಗೆ ಮೂಲಕ ಜನರಿಗೆ ಗೋವಿನ ಮಹತ್ವ ಸಾರುತ್ತಿದ್ದಾರೆ. ಗುಜರಾತ್​ನಲ್ಲೂ ಗೋಶಾಲೆ ಹೊಂದಿರುವ ಅವರು ಮುಖ್ಯ ಉದ್ದೇಶ ಜನರಿಗೆ ಗೋವಿನ ಮಹತ್ವವ ಹಾಗೂ ಅವುಗಳ ಮಹತ್ವವನ್ನು ತಿಳಿಸುವುದಾಗಿದೆ. ಗೋವಿನ ಪಂಚಗವ್ಯದಿಂದ ತಯಾರಿಸಿದ 50 ಕ್ಕೂ ಹೆಚ್ಚು ಉತ್ಪನ್ನಗಳನ್ನು ಸಂಸ್ಥೆ ಮೂಲಕ ಅವರು ತಯಾರಿಸುತ್ತಿದ್ದಾರೆ.

ಪಂಚಗವ್ಯದಲ್ಲಿ ಹಸುವಿನ ಹಾಲು, ಮೊಸರು, ತುಪ್ಪ ಮತ್ತು ಗೋಮೂತ್ರ ಸೇರಿವೆ. ಪಂಚಗವ್ಯದಿಂದ ಅಗರಬತ್ತಿ, ಕೆಮ್ಮು ಸಿರಪ್, ಸಾಬೂನು, ದಿಯಾ, ಫೇಸ್ ಪ್ಯಾಕ್, ಎಣ್ಣೆ ಸೇರಿದಂತೆ ಸುಮಾರು 50 ಉತ್ಪನ್ನಗಳನ್ನು ಸಿದ್ಧಪಡಿಸಲಾಗಿದೆ. ಹಸುವಿನ ತ್ಯಾಜ್ಯಗಳ ವಿಲೇವಾರಿ ಸುಲಭ ಹಾಗೂ ಇವು ಪರಿಸರವನ್ನು ಸ್ವಚ್ಛವಾಗಿರಿಸಲು ಸಹಾಯ ಮಾಡುತ್ತಿದೆ ಎಂದರು.

ಅನೇಕರಿಗೆ ಬದುಕು ಕಟ್ಟಿಕೊಟ್ಟ ಪಂಚಗವ್ಯ: ತಮ್ಮ ಈ ಉದ್ಯಮವೂ ಅನೇಕ ಮಂದಿಗೆ ಬದುಕು ರೂಪಿಸಿದೆ. ಅನೇಕ ಮಹಿಳೆಯರು ಪಂಚಗವ್ಯ ಉತ್ಪನ್ನ ತಯಾರಿಸುವ ಕುರಿತು ಮಾಹಿತಿ ಜತೆ ಜತೆಗೆ ಉಚಿತ ತರಬೇತಿ ನೀಡಿದ್ದೇವೆ. ಇದೀಗ ಅವರು ತಮ್ಮದೇ ಆದ ಉದ್ಯೋಗ ಸಂಸ್ಥೆ ಸ್ಥಾಪಿಸಿಕೊಂಡಿದ್ದಾರೆ. ನಮ್ಮ ಸಂಸ್ಥೆ ಮಾತ್ರವಲ್ಲದೇ ನಾಡಿನ ಇತರ ಮಹಿಳೆಯರೂ ಗೋವಿನ ಪಂಚಗವ್ಯದಿಂದ ಉತ್ಪನ್ನಗಳನ್ನು ತಯಾರಿಸಬೇಕು. ಗೋ ಮಾತೆಯನ್ನು ರಕ್ಷಿಸಬೇಕು ಎಂಬುದು ನಮ್ಮ ಗುರಿ ಎಂದರು.

ಆನ್​ಲೈನ್​ನಲ್ಲೂ ಮಾರಾಟ: ಕಳೆದ ಹಲವು ವರ್ಷಗಳಿಂದ ಅಂತಾರಾಷ್ಟ್ರೀಯ ಗೀತಾ ಮಹೋತ್ಸವದ ವೇಳೆ ಸಿಮ್ರಾನ್ ಕುರುಕ್ಷೇತ್ರಕ್ಕೆ ತಪ್ಪದೇ ಆಗಮಿಸುತ್ತಿದ್ದು, ಅವರ ಸಂಸ್ಥೆ ಉತ್ಪನ್ನಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಉತ್ಪನ್ನಗಳನ್ನು ಆನ್​ಲೈನ್​ನಲ್ಲೂ ಮಾರಾಟ ಮಾಡುತ್ತಿದ್ದಾರೆ.

ಗೋವುಗಳ ರಕ್ಷಣೆಯ ಗುರಿಯಾಗಿದೆ. ಜನರು ಹಸುಗಳನ್ನು ಬೀದಿಗೆ ಬಿಡದೇ ಮನೆಯಲ್ಲಿ ಸಾಕಬೇಕು. ಇದರಿಂದ ಗೋವುಗಳ ರಕ್ಷಣೆ ಮಾತ್ರವಲ್ಲದೇ ಜನರು ಆರೋಗ್ಯವಂತರಾಗಿರಲು ಸಾಧ್ಯ ಎನ್ನುತ್ತಾರೆ ಸಿಮ್ರಾನ್​.

ಇದನ್ನೂ ಓದಿ: ವೈಷ್ಣೋದೇವಿ ದೇಗುಲದ ಸುತ್ತಮುತ್ತ ಮದ್ಯ, ಮಾಂಸಾಹಾರ ನಿಷೇಧ: ಯಾವ ಯಾವ ಪ್ರದೇಶದಲ್ಲಿ ಈ ಆದೇಶ ಜಾರಿ?

ABOUT THE AUTHOR

...view details