ಕರ್ನಾಟಕ

karnataka

ETV Bharat / bharat

ಮಹಾಕುಂಭ ಮೇಳದಲ್ಲಿ ಮತ್ತೊಂದು ಬೆಂಕಿ ಅವಘಡ : ಕಿನ್ನರ್ ಅಖಾಡ ಶಿಬಿರಕ್ಕೆ ಹೊತ್ತಿಕೊಂಡ ಅಗ್ನಿ - MAHA KUMBH

ಮಹಾಕುಂಭ ಮೇಳದಲ್ಲಿ ಮತ್ತೊಂದು ಬೆಂಕಿ ಅವಘಡ ಸಂಭವಿಸಿದೆ. ಕಿನ್ನರ್ ಅಖಾಡ ಶಿಬಿರದಲ್ಲಿ ಅಗ್ನಿ ಕಾಣಿಸಿಕೊಂಡಿದೆ.

ಮಹಾಕುಂಭ ಮೇಳದಲ್ಲಿ ಮತ್ತೊಂದು ಬೆಂಕಿ ಅವಘಡ
ಮಹಾಕುಂಭ ಮೇಳದಲ್ಲಿ ಮತ್ತೊಂದು ಬೆಂಕಿ ಅವಘಡ (ETV Bharat)

By ETV Bharat Entertainment Team

Published : Jan 20, 2025, 5:54 PM IST

ಪ್ರಯಾಗ್​ರಾಜ್​ (ಉತ್ತರಪ್ರದೇಶ) :ಹಿಂದುಗಳ ಮಹಾಸಂಗಮ ಎಂದೇ ಕರೆಯುವ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ. ಕುಂಭ ಸ್ನಾನ ಪ್ರದೇಶದ 16ನೇ ಸೆಕ್ಟರ್​​ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಅಗ್ನಿಯನ್ನು ನಂದಿಸಲಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.

"ಬೆಳಗ್ಗೆ 9.30 ರ ಸುಮಾರಿಗೆ ಕಿನ್ನರ್​ ಅಖಾಡ ಉಳಿದುಕೊಂಡಿರುವ ಶಿಬಿರದ ಬಳಿ ಅಗ್ನಿಯಿಂದ ಹೊಗೆ ಏಳುತ್ತಿರುವುದನ್ನು ಟವರ್​​ನಲ್ಲಿ ವೀಕ್ಷಣೆ ಮಾಡುತ್ತಿದ್ದ ಸಿಬ್ಬಂದಿ ಕಂಡಿದ್ದಾರೆ. ತಕ್ಷಣವೇ ಈ ಬಗ್ಗೆ ಕಂಟ್ರೋಲ್​ ರೂಮಿಗೆ ಮಾಹಿತಿ ನೀಡಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದರು.

ಅಗ್ನಿಶಾಮಕ ದಳದ ವಾಹನಗಳು ಮತ್ತು ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಸಿಬ್ಬಂದಿ ಸ್ಥಳಕ್ಕೆ ತೆರಳುವ ಹೊತ್ತಿಗೆ ಅಲ್ಲಿದ್ದ, ಜನರು ನೀರು ಮತ್ತು ಮರಳನ್ನು ಬಳಸಿ ಬೆಂಕಿಯನ್ನು ನಂದಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.

ಅಗ್ನಿ ಕಾಣಿಸಿಕೊಂಡು ಪ್ರದೇಶವು, ಶ್ರೀ ಹರಿ ದಿವ್ಯ ಸಾಧನಾ ಪೀಠದ ಶಿಬಿರವಾಗಿದ್ದು, ಒಂದು ಸಣ್ಣ ಟೆಂಟ್‌ಗೆ ಬೆಂಕಿ ಹೊತ್ತಿಕೊಂಡಿರುವುದು ತಪಾಸಣೆಯಲ್ಲಿ ತಿಳಿದುಬಂದಿದೆ. ಅದೃಷ್ಟವಶಾತ್, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದರು.

18 ಗುಡಾರಗಳಿಗೆ ಬೆಂಕಿ :ಇನ್ನು, ಭಾನುವಾರ ನಡೆದಿದ್ದ ಅಗ್ನಿ ದುರಂತದಲ್ಲಿ 19ನೇ ಸೆಕ್ಟರ್​​ನಲ್ಲಿ 18 ಟೆಂಟ್​ (ಗುಡಾರ) ಗಳು ಸುಟ್ಟು ಹೋಗಿದ್ದವು. ಗೀತಾ ಪ್ರೆಸ್ ಮತ್ತು ಅಖಿಲ ಭಾರತೀಯ ಧರ್ಮ ಸಂಘ ಕಲ್ಪವಾಸಿಗಳ ಶಿಬಿರದಲ್ಲಿ ಈ ಬೆಂಕಿ ಅವಘಡ ಸಂಭವಿಸಿತ್ತು. ಅದು ವೇಗವಾಗಿ ಹರಡಿ 18 ಟೆಂಟ್‌ಗಳನ್ನು ಆವರಿಸಿತ್ತು. ಈ ಬೆಂಕಿ ಹೊತ್ತಿಕೊಳ್ಳಲು ಎಲ್‌ಪಿಜಿ ಸಿಲಿಂಡರ್‌ಗಳು ಸ್ಫೋಟಗೊಂಡಿದ್ದೇ ಕಾರಣ, ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು.

ಇದನ್ನೂ ಓದಿ:ಮಹಾ ಕುಂಭಮೇಳ ಸಂಗಮದ ಡೇರೆಯಲ್ಲಿ ಭಾರಿ ಬೆಂಕಿ: 20 ರಿಂದ 25 ಡೇರೆ ಬೆಂಕಿಗಾಹುತಿ

ABOUT THE AUTHOR

...view details