ಹಾವೇರಿ ರೈಲು ನಿಲ್ದಾಣದ ಬಳಿ ಇರುವ ಆಂಜನೇಯ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಮ ಭಕ್ತನಿಗೆ ಗೋಡಂಬಿ ಮತ್ತು ಬಾದಾಮಿಯ ವಿಶೇಷ ಆಲಂಕಾರ ಮಾಡಲಾಗಿತ್ತು. ಹಯಗ್ರೀವ ಆಕಾರದಲ್ಲಿ ಪವನಸುತನನ್ನನ್ನು ಸಿಂಗರಿಸಲಾಗಿತ್ತು. ಸುಮಾರು ನಾಲ್ಕು ಕೆಜಿ ಗೋಡಂಬಿ ಮತ್ತು 1 ಕೆಜಿ ಬಾದಾಮಿಯಿಂದ ಪವನಸುತನನ್ನು ಅಲಂಕರಿಸಲಾಗಿತ್ತು. ಸಂಜೆಯಾಗುತ್ತಿದ್ದಂತೆ ಭಕ್ತರು ದೀಪಗಳನ್ನು ಹಚ್ಚಿ ಸಂಭ್ರಮಿಸಿದರು. ಮುಂಜಾನೆಯಿಂದ ಸಂಜೆವರೆಗೆ ಭಕ್ತರ ದಂಡು ಹರಿದುಬಂತು. ಕಾರ್ತಿಕೋತ್ಸವದ ಅಂಗವಾಗಿ ರಾಮಭಕ್ತ ಹನುಮನಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
TAGGED:
ಹಾವೇರಿ ಕಾರ್ತಿಕೋತ್ಸವ ಆಚರಣೆ