ಕರ್ನಾಟಕ

karnataka

ದೋಸ್ತಿಯಲ್ಲಿ ಯಾವುದೇ ಕುಸ್ತಿ ಇಲ್ಲ -ಸಚಿವ ಸಾ.ರಾ.ಮಹೇಶ್

By

Published : May 13, 2019, 8:04 PM IST

ವಿಶ್ವನಾಥ್ ಹಾಗೂ ಸಿದ್ದರಾಮಯ್ಯ ಅವ್ರ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ. ಅವರಿಬ್ಬರು ದಶಕಗಳ ಕಾಲ ಒಟ್ಟಿಗೆ ಇದ್ದವರು ಎಂದು ಪ್ರತಿಕ್ರಿಯಿಸಿದ ಸಾ.ರಾ ಮಹೇಶ್

ಸಚಿವ ಸಾ.ರಾ.ಮಹೇಶ್

ಮೈಸೂರು: ದೋಸ್ತಿಯಲ್ಲಿ ಯಾವುದೇ ಕುಸ್ತಿಯಿಲ್ಲ ಆದರೆ ಕೆಲವು ಮಾಧ್ಯಮಗಳು ಇದನ್ನೇ ದೊಡ್ಡದಾಗಿ ತೋರಿಸುತ್ತಿವೆ ಎಂದು ಸಚಿವ ಸಾ.ರಾ. ಮಹೇಶ್ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.

ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಸಾ.ರಾ ಮಹೇಶ್

ಇಂದು ಕೆ.ಆರ್.‌ನಗರದಲ್ಲಿ ಸ್ಥಳೀಯ ಮಾಧ್ಯಮಗಳ ಜೊತೆ ಮಾತನಾಡಿದ ಸಾ.ರಾ.‌ಮಹೇಶ್ ದೋಸ್ತಿಯಲ್ಲಿ ಕುಸ್ತಿ ಜಾಸ್ತಿಯಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ದೋಸ್ತಿಯಲ್ಲಿ ಯಾವುದೇ ಕುಸ್ತಿ ಇಲ್ಲ ಕೇವಲ ಕೆಲವು ಮಾಧ್ಯಮಗಳು ಮಾತ್ರ ಇದನ್ನು ವೈಭವಿಕರಿಸುತ್ತಿದ್ದಾರೆ ಎಂದರು.

ವಿಶ್ವನಾಥ್ ಸಿದ್ದರಾಮಯ್ಯ ವಿರುದ್ಧ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವ್ರು ನಾನು ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ ಅವರಿಬ್ಬರು ದಶಕಗಳ ಕಾಲ ಒಟ್ಟಿಗೆ ಇದ್ದವರು ಎಂದು ತಿಳಿಸಿದರು.

ನಾಲ್ಕು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಸಚಿವ ಸಾ.ರಾಮಹೆಶ್ 23 ರ ನಂತರ ಕೇಂದ್ರದಲ್ಲಿ ಮೋದಿ ಸರ್ಕಾರ ಬರುವುದಿಲ್ಲ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಮುಂದುವರೆಯುತ್ತದೆ. ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೆ ಎಂದರು.

For All Latest Updates

TAGGED:

ABOUT THE AUTHOR

...view details