ETV Bharat / entertainment

ಧನುಷ್​ಗೆ ಸಂಬಂಧಿಸಿದಂತೆ ಟಿಎಫ್​ಪಿಸಿ ನಿರ್ಧಾರ ಸ್ವೀಕಾರಾರ್ಹವಲ್ಲ: ನಾಡಿಗರ್ ಸಂಗಮ್, ಕಾರ್ತಿ ಅಸಮಾಧಾನ - TFPC Decision On Dhanush

author img

By ETV Bharat Entertainment Team

Published : Jul 30, 2024, 7:13 PM IST

Updated : Jul 30, 2024, 7:49 PM IST

ಹಲವು ಚಲನಚಿತ್ರ ನಿರ್ಮಾಪಕರಿಂದ ಅಡ್ವಾನ್ಸ್ ಪಡೆದಿದ್ದರೂ, ಸಿನಿಮಾ ಪ್ರಾರಂಭಿಸಲು ವಿಫಲವಾದ ಕಾರಣ ಸೌತ್ ಸೂಪರ್ ಸ್ಟಾರ್ ಧನುಷ್ ಅವರ ಮೇಲೆ ನಿಷೇಧ ಹೇರಲು ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ (ಟಿಎಫ್​ಪಿಸಿ) ನಿರ್ಧರಿಸಿದೆ. ಟಿಎಫ್​ಪಿಸಿ ಕ್ರಮಗಳಿಗೆ ನಟರ ಸಂಘ 'ನಾಡಿಗರ್ ಸಂಗಮ್​​', ಕಾರ್ತಿ ಅಸಮಾಧಾನ ಹೊರಹಾಕಿದ್ದಾರೆ.

Actors Karthi and Dhanush
ಕಾರ್ತಿ - ಧನುಷ್​​ (ETV Bharat)

ನವೆಂಬರ್ 1ರಿಂದ ಎಲ್ಲ ಸಿನಿಮಾ ನಿರ್ಮಾಣ ಕೆಲಸಗಳನ್ನು ಸ್ಥಗಿತಗೊಳಿಸುವಂತೆ ತಮಿಳು ಚಲನಚಿತ್ರ ಸಂಘಗಳಿಗೆ ಒತ್ತಾಯಿಸಿ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ (ಟಿಎಫ್​ಪಿಸಿ) ಸೋಮವಾರ ನೋಟಿಸ್ ಜಾರಿ ಮಾಡಿದೆ. ಚಲನಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದ ಮೂಲ ವೆಚ್ಚಗಳ ಬಗ್ಗೆ ಸ್ಪಷ್ಟ ತಿಳಿವಳಿಕೆ ನೀಡಲು ಈ ಕ್ರಮವನ್ನು ಕೈಗೊಳ್ಳಲಾಗಿದೆ. ಈ ನಿರ್ಧಾರದ ಜೊತೆಗೆ, ಹಲವಾರು ನಿರ್ಮಾಪಕರಿಂದ ಮುಂಗಡ ಪಾವತಿ ಪಡೆದಿದ್ದರೂ ಕೂಡಾ, ಸಿನಿಮಾ ಪ್ರಾರಂಭಿಸಲು ವಿಫಲವಾದ ಹಿನ್ನೆಲೆ ಸೂಪರ್ ಸ್ಟಾರ್ ಧನುಷ್ ಮೇಲೆ ನಿಷೇಧ ಹೇರಲು ಟಿಎಫ್​ಪಿಸಿ ನಿರ್ಧರಿಸಿದೆ.

ಟಿಎಫ್​ಪಿಸಿ ಕ್ರಮಗಳಿಗೆ ನಟರ ಸಂಘ 'ನಾಡಿಗರ್ ಸಂಗಮ್​​' (Nadigar Sangam) ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಕಾರ್ತಿ, ಕರುಣಾಸ್, ಪೂಚಿ ಮುರುಗನ್ ಸೇರಿದಂತೆ ನಾಡಿಗರ್​ ಸಂಗಮ್​​ನ ಪ್ರಮುಖರು ಸಂಘದ ಪರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ನಿರ್ಧಾರಕ್ಕೆ ಬರುವ ಮೊದಲು 'ಟಿಎಫ್‌ಪಿಸಿ'ಯು ನಾಡಿಗರ್ ಸಂಗಮ್​​ ಅಥವಾ ಸದಸ್ಯರನ್ನು ಸಂಪರ್ಕಿಸಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ನಟ ಕಾರ್ತಿ, ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ ಮತ್ತು ತಮಿಳು ಚಲನಚಿತ್ರ ನಿರ್ಮಾಪಕರ ಸಂಘದ ನಡುವಿನ ಸಹಯೋಗದ ಸಂಬಂಧವನ್ನು ಒತ್ತಿ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಾಮಾನ್ಯವಾಗಿ, ನಟ ಅಥವಾ ನಿರ್ಮಾಪಕರ ವಿರುದ್ಧ ದೂರು ನೀಡುವಾಗ ಟಿಎಫ್‌ಪಿಸಿ ಮತ್ತು ನಾಡಿಗರ್​​ ಸಂಗಮ್ ಪರಸ್ಪರ ಒಪ್ಪಂದಕ್ಕೆ ಬರುತ್ತವೆ. ಆದರೆ, ಧನುಷ್ ಬಗ್ಗೆ ನಮಗೆ ಯಾವುದೇ ದೂರು ಬಂದಿಲ್ಲ. ಅವರನ್ನು ನಿಷೇಧಿಸುವಂತಹ ಹಠಾತ್ ನಿರ್ಧಾರ ಸ್ವೀಕಾರಾರ್ಹವಲ್ಲ. ನಾವು ಟಿಎಫ್​ಪಿಸಿಯ ಹೇಳಿಕೆಯನ್ನು ಖಂಡಿಸುತ್ತೇವೆ. ಎಲ್ಲ ತಮಿಳು ಚಲನಚಿತ್ರ ಸಂಘಗಳು ಭೇಟಿಯಾಗಿ, ಪರಸ್ಪರ ಒಪ್ಪಂದಕ್ಕೆ ಬರಬೇಕು ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ, ನಟರು ಅಥವಾ ನಿರ್ಮಾಪಕರಿಗೆ ಸಂಬಂಧಿಸಿದ ದೂರುಗಳನ್ನು ಟಿಎಫ್​ಪಿಸಿ ಮತ್ತು ನಾಡಿಗರ ಸಂಗಮ್ ಸೇರಿ ಪರಿಹರಿಸಲಾಗುತ್ತದೆ. ಅದಾಗ್ಯೂ, ಟಿಎಫ್​ಪಿಸಿ ನಟನ ವಿರುದ್ಧ ದೂರು ನೀಡಿದ ಮೊದಲ ನಿದರ್ಶನ ಇದಾಗಿದ್ದು, ಕಾರ್ತಿ ಈ ಕ್ರಮವನ್ನು ಸಂಪೂರ್ಣವಾಗಿ ಅಸಮಂಜಸವೆಂದು ಪರಿಗಣಿಸಿದ್ದಾರೆ. ಟಿಎಫ್‌ಪಿಸಿಯ ಹಠಾತ್ ಘೋಷಣೆಯನ್ನು ನಾಡಿಗರ್​ ಸಂಗಮ್​​ ಸದಸ್ಯರು ತೀವ್ರವಾಗಿ ಖಂಡಿಸಿದ್ದಾರೆ. ಇಂಥ ನಿರ್ಧಾರ ಚಿತ್ರರಂಗದ ವಿವಿಧ ಕ್ಷೇತ್ರಗಳ ತಾರೆಯರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಈ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಲು ನಟ ಎಲ್ಲಾ ತಮಿಳು ಚಲನಚಿತ್ರ ಸಂಘಗಳ ಸಾಮೂಹಿಕ ಸಭೆಗೆ ಕರೆ ನೀಡಿದರು.

ಇದನ್ನೂ ಓದಿ: ಕೋಟಿ ಕೋಟಿ ಕಲೆಕ್ಷನ್‌ ಮಾಡಿದ್ದ 'ಮುಂಗಾರು ಮಳೆ': ಗಣೇಶ್​ಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ? - Ganesh Mungaru Male

ಟಿಎಫ್​ಪಿಸಿ ತನ್ನ ಇತ್ತೀಚಿನ ಹೇಳಿಕೆಯಲ್ಲಿ, ಆಗಸ್ಟ್ 15ರ ನಂತರ ಯಾವುದೇ ಹೊಸ ತಮಿಳು ಚಲನಚಿತ್ರಗಳ ನಿರ್ಮಾಣವನ್ನು ಪ್ರಾರಂಭಿಸಬಾರದು ಎಂದು ತಿಳಿಸಿದೆ. ಸದ್ಯ ನಡೆಯುತ್ತಿರುವ ಚಿತ್ರೀಕರಣಗಳು ನವೆಂಬರ್ 1ರೊಳಗೆ ಮುಕ್ತಾಯಗೊಳ್ಳಬೇಕು ಎಂದು ತಿಳಿಸಿದೆ.

ಇದನ್ನೂ ಓದಿ: ದುನಿಯಾ ವಿಜಯ್​​​ ಮುಖ್ಯಭೂಮಿಕೆಯ 'ಭೀಮ' ಟ್ರೇಲರ್​ ಅನಾವರಣಕ್ಕೆ ಮುಹೂರ್ತ ಫಿಕ್ಸ್ - Bheema Trailer

ನವೆಂಬರ್ 1ರಿಂದ ಎಲ್ಲ ಸಿನಿಮಾ ನಿರ್ಮಾಣ ಕೆಲಸಗಳನ್ನು ಸ್ಥಗಿತಗೊಳಿಸುವಂತೆ ತಮಿಳು ಚಲನಚಿತ್ರ ಸಂಘಗಳಿಗೆ ಒತ್ತಾಯಿಸಿ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ (ಟಿಎಫ್​ಪಿಸಿ) ಸೋಮವಾರ ನೋಟಿಸ್ ಜಾರಿ ಮಾಡಿದೆ. ಚಲನಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದ ಮೂಲ ವೆಚ್ಚಗಳ ಬಗ್ಗೆ ಸ್ಪಷ್ಟ ತಿಳಿವಳಿಕೆ ನೀಡಲು ಈ ಕ್ರಮವನ್ನು ಕೈಗೊಳ್ಳಲಾಗಿದೆ. ಈ ನಿರ್ಧಾರದ ಜೊತೆಗೆ, ಹಲವಾರು ನಿರ್ಮಾಪಕರಿಂದ ಮುಂಗಡ ಪಾವತಿ ಪಡೆದಿದ್ದರೂ ಕೂಡಾ, ಸಿನಿಮಾ ಪ್ರಾರಂಭಿಸಲು ವಿಫಲವಾದ ಹಿನ್ನೆಲೆ ಸೂಪರ್ ಸ್ಟಾರ್ ಧನುಷ್ ಮೇಲೆ ನಿಷೇಧ ಹೇರಲು ಟಿಎಫ್​ಪಿಸಿ ನಿರ್ಧರಿಸಿದೆ.

ಟಿಎಫ್​ಪಿಸಿ ಕ್ರಮಗಳಿಗೆ ನಟರ ಸಂಘ 'ನಾಡಿಗರ್ ಸಂಗಮ್​​' (Nadigar Sangam) ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಕಾರ್ತಿ, ಕರುಣಾಸ್, ಪೂಚಿ ಮುರುಗನ್ ಸೇರಿದಂತೆ ನಾಡಿಗರ್​ ಸಂಗಮ್​​ನ ಪ್ರಮುಖರು ಸಂಘದ ಪರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ನಿರ್ಧಾರಕ್ಕೆ ಬರುವ ಮೊದಲು 'ಟಿಎಫ್‌ಪಿಸಿ'ಯು ನಾಡಿಗರ್ ಸಂಗಮ್​​ ಅಥವಾ ಸದಸ್ಯರನ್ನು ಸಂಪರ್ಕಿಸಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ನಟ ಕಾರ್ತಿ, ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ ಮತ್ತು ತಮಿಳು ಚಲನಚಿತ್ರ ನಿರ್ಮಾಪಕರ ಸಂಘದ ನಡುವಿನ ಸಹಯೋಗದ ಸಂಬಂಧವನ್ನು ಒತ್ತಿ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಾಮಾನ್ಯವಾಗಿ, ನಟ ಅಥವಾ ನಿರ್ಮಾಪಕರ ವಿರುದ್ಧ ದೂರು ನೀಡುವಾಗ ಟಿಎಫ್‌ಪಿಸಿ ಮತ್ತು ನಾಡಿಗರ್​​ ಸಂಗಮ್ ಪರಸ್ಪರ ಒಪ್ಪಂದಕ್ಕೆ ಬರುತ್ತವೆ. ಆದರೆ, ಧನುಷ್ ಬಗ್ಗೆ ನಮಗೆ ಯಾವುದೇ ದೂರು ಬಂದಿಲ್ಲ. ಅವರನ್ನು ನಿಷೇಧಿಸುವಂತಹ ಹಠಾತ್ ನಿರ್ಧಾರ ಸ್ವೀಕಾರಾರ್ಹವಲ್ಲ. ನಾವು ಟಿಎಫ್​ಪಿಸಿಯ ಹೇಳಿಕೆಯನ್ನು ಖಂಡಿಸುತ್ತೇವೆ. ಎಲ್ಲ ತಮಿಳು ಚಲನಚಿತ್ರ ಸಂಘಗಳು ಭೇಟಿಯಾಗಿ, ಪರಸ್ಪರ ಒಪ್ಪಂದಕ್ಕೆ ಬರಬೇಕು ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ, ನಟರು ಅಥವಾ ನಿರ್ಮಾಪಕರಿಗೆ ಸಂಬಂಧಿಸಿದ ದೂರುಗಳನ್ನು ಟಿಎಫ್​ಪಿಸಿ ಮತ್ತು ನಾಡಿಗರ ಸಂಗಮ್ ಸೇರಿ ಪರಿಹರಿಸಲಾಗುತ್ತದೆ. ಅದಾಗ್ಯೂ, ಟಿಎಫ್​ಪಿಸಿ ನಟನ ವಿರುದ್ಧ ದೂರು ನೀಡಿದ ಮೊದಲ ನಿದರ್ಶನ ಇದಾಗಿದ್ದು, ಕಾರ್ತಿ ಈ ಕ್ರಮವನ್ನು ಸಂಪೂರ್ಣವಾಗಿ ಅಸಮಂಜಸವೆಂದು ಪರಿಗಣಿಸಿದ್ದಾರೆ. ಟಿಎಫ್‌ಪಿಸಿಯ ಹಠಾತ್ ಘೋಷಣೆಯನ್ನು ನಾಡಿಗರ್​ ಸಂಗಮ್​​ ಸದಸ್ಯರು ತೀವ್ರವಾಗಿ ಖಂಡಿಸಿದ್ದಾರೆ. ಇಂಥ ನಿರ್ಧಾರ ಚಿತ್ರರಂಗದ ವಿವಿಧ ಕ್ಷೇತ್ರಗಳ ತಾರೆಯರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಈ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಲು ನಟ ಎಲ್ಲಾ ತಮಿಳು ಚಲನಚಿತ್ರ ಸಂಘಗಳ ಸಾಮೂಹಿಕ ಸಭೆಗೆ ಕರೆ ನೀಡಿದರು.

ಇದನ್ನೂ ಓದಿ: ಕೋಟಿ ಕೋಟಿ ಕಲೆಕ್ಷನ್‌ ಮಾಡಿದ್ದ 'ಮುಂಗಾರು ಮಳೆ': ಗಣೇಶ್​ಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ? - Ganesh Mungaru Male

ಟಿಎಫ್​ಪಿಸಿ ತನ್ನ ಇತ್ತೀಚಿನ ಹೇಳಿಕೆಯಲ್ಲಿ, ಆಗಸ್ಟ್ 15ರ ನಂತರ ಯಾವುದೇ ಹೊಸ ತಮಿಳು ಚಲನಚಿತ್ರಗಳ ನಿರ್ಮಾಣವನ್ನು ಪ್ರಾರಂಭಿಸಬಾರದು ಎಂದು ತಿಳಿಸಿದೆ. ಸದ್ಯ ನಡೆಯುತ್ತಿರುವ ಚಿತ್ರೀಕರಣಗಳು ನವೆಂಬರ್ 1ರೊಳಗೆ ಮುಕ್ತಾಯಗೊಳ್ಳಬೇಕು ಎಂದು ತಿಳಿಸಿದೆ.

ಇದನ್ನೂ ಓದಿ: ದುನಿಯಾ ವಿಜಯ್​​​ ಮುಖ್ಯಭೂಮಿಕೆಯ 'ಭೀಮ' ಟ್ರೇಲರ್​ ಅನಾವರಣಕ್ಕೆ ಮುಹೂರ್ತ ಫಿಕ್ಸ್ - Bheema Trailer

Last Updated : Jul 30, 2024, 7:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.