ಮೈಸೂರು: ಆನೆ ತುಳಿತದಿಂದ ಮಾವುತ ಸಾವನ್ನಪ್ಪಿರುವ ರ್ದುಘಟನೆ ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ನಡೆದಿದೆ.
ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಇದ್ದ ಅಭಿ ಎಂಬ ಆನೆ ಇಂದು ಸಂಜೆ ಅದನ್ನು ನೋಡಿಕೊಳ್ಳುತ್ತಿದ್ದ ಹರೀಶ ಎಂಬ ಮಾವುತನನ್ನು ತುಳಿದು ಹಾಕಿದ್ದು, ತಕ್ಷಣ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾವುತ ಮೃತಪಟ್ಟಿದ್ದಾನೆ. ಆಸ್ಪತ್ರೆಗೆ ಮೃಗಾಲಯದ ಅಧಿಕಾರಿಗಳು ಧಾವಿಸಿದ್ದಾರೆ. ಆನೆಗೆ ಮೇವು ಹಾಕಲು ಹೋಗಿದ್ದಾಗ ಮದವೇರಿದ ಆನೆ ಮಾವುತನನ್ನು ತುಳಿದು ಹಾಕಿದೆ.
ಈ ಕುರಿತಂತೆ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Aug 7, 2020, 10:54 PM IST