ಕರ್ನಾಟಕ

karnataka

ಆಯ ತಪ್ಪಿ ಬಿದ್ದು ವಿದ್ಯಾರ್ಥಿನಿ ಹಣೆಗೆ ಗಾಯ... ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ

By

Published : Jun 25, 2020, 3:46 PM IST

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೇಂದ್ರದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲು ಮಾರುದ್ದ ಸಾಲುಗಟ್ಟಿ ನಿಂತಿದ್ದ ವಿದ್ಯಾರ್ಥಿಗಳನ್ನು ಕಂಡ ಜಿಲ್ಲಾಧಿಕಾರಿ‌ ಡಾ. ಎಂ.ಆರ್.ರವಿ ಸ್ಥಳದಲ್ಲಿದ್ದ ಡಿಡಿಪಿಐ ಜವರೇಗೌಡರನ್ನು ತರಾಟೆಗೆ ತೆಗೆದುಕೊಂಡರು.

student injured by fall in chamarajanagar
ಆಯತಪ್ಪಿ ಬಿದ್ದು ಹಣೆಗೆ ಗಾಯ ಮಾಡಿಕೊಂಡ ವಿದ್ಯಾರ್ಥಿನಿ

ಚಾಮರಾಜನಗರ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಭರದಲ್ಲಿ ನಗರದ ವಿದ್ಯಾರ್ಥಿನಿಯೊಬ್ಬಳು ಬಿದ್ದು ಹಣೆಗೆ ಗಾಯ ಮಾಡಿಕೊಂಡಿರುವ ಘಟನೆ ನಡೆದಿದೆ‌.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕಿದ್ದ ಬೀಬಿ ಹಾಜೀರ ಎಂಬ ವಿದ್ಯಾರ್ಥಿನಿ ಬಿದ್ದು ಗಾಯ ಮಾಡಿಕೊಂಡಿದ್ದಾಳೆ. ಪರೀಕ್ಷೆ ಬರೆಯಲು ಬರುವ ಭರದಲ್ಲಿ ಮನೆಯ ಬಳಿ ಆಯ ತಪ್ಪಿ ಬಿದ್ದು ಹಣೆಗೆ ಗಾಯ ಮಾಡಿಕೊಂಡಿದ್ದಳು. ನಂತರ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಪೋಷಕರೊಂದಿಗೆ ಕೇಂದ್ರಕ್ಕೆ ಬಂದ ವಿದ್ಯಾರ್ಥಿನಿ, ಥರ್ಮಲ್ ಸ್ಕ್ರೀನಿಂಗ್​​ಗೆ ಒಳಾಗುವ ವೇಳೆ ಮತ್ತೆ ಅಸ್ವಸ್ಥಗೊಂಡಿದ್ದಾಳೆ.

ಆಯ ತಪ್ಪಿ ಬಿದ್ದು ಹಣೆಗೆ ಗಾಯ ಮಾಡಿಕೊಂಡ ವಿದ್ಯಾರ್ಥಿನಿ
ವಿದ್ಯಾರ್ಥಿನಿಗೆ ಸ್ಥಳದಲ್ಲೇ ಇದ್ದ ಆರೋಗ್ಯ ಸಹಾಯಕಿ ಚಿಕಿತ್ಸೆ ನೀಡಿದರು. ಪರಿಶೀಲನೆಗೆಂದು ಈ ವೇಳೆ ಕೇಂದ್ರಕ್ಕೆ ಬಂದ ಡಿಸಿ ರವಿ, ಎಸ್ಪಿ ಆನಂದ್ ಕುಮಾರ್, ಅಸ್ವಸ್ಥಗೊಂಡ ವಿದ್ಯಾರ್ಥಿನಿಗೆ ಧೈರ್ಯ ಹೇಳಿ ಭಯವಾದರೆ ಮುಂದಿನ ಬಾರಿ ಪರೀಕ್ಷೆ ಬರಿ. ಈಗ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ತೆಗೆದುಕೋ ಎಂದು ಸಲಹೆ ನೀಡಿದರು. ಇದಕ್ಕೆ ಒಪ್ಪದ ವಿದ್ಯಾರ್ಥಿನಿ ಪರೀಕ್ಷೆ ಬರೆಯಲೇಬೇಕೆಂದು ಜಿಲ್ಲಾಧಿಕಾರಿಗೆ ತಿಳಿಸಿದಾಗ, ಚಿಕಿತ್ಸೆ ಪಡೆದು ಚೇತರಿಕೆ ಕಂಡರೆ ಪರೀಕ್ಷೆ ಬರೆಯಲು ತಿಳಿಸಿ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ‌.ಡಿಡಿಪಿಐಗೆ ತರಾಟೆ:ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೇಂದ್ರದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲು ಮಾರುದ್ದ ಸಾಲುಗಟ್ಟಿ ನಿಂತಿದ್ದ ವಿದ್ಯಾರ್ಥಿಗಳನ್ನು ಕಂಡ ಡಿಸಿ‌ ಡಾ. ಎಂ.ಆರ್.ರವಿ ಸ್ಥಳದಲ್ಲಿದ್ದ ಡಿಡಿಪಿಐ ಜವರೇಗೌಡರನ್ನು ತರಾಟೆಗೆ ತೆಗೆದುಕೊಂಡರು. ವಿದ್ಯಾರ್ಥಿಗಳ ಹೆಸರು, ಪೋನ್ ನಂಬರ್‌‌ ನಮೂದಿಸಿಕೊಂಡು, ಸ್ಯಾನಿಟೈಸರ್​​ ಮತ್ತು ಮಾಸ್ಕ್ ವಿತರಿಸಿ ಕೇಂದ್ರಕ್ಕೆ ಕಳುಹಿಸುವುದು ತಡವಾಗುತ್ತಿತ್ತು. ಸರತಿ ಸಾಲಿನಲ್ಲಿ ವಿದ್ಯಾರ್ಥಿಗಳು ಕಾದು ನಿಂತಿದ್ದನ್ನು ನೋಡಿದ ಜಿಲ್ಲಾಧಿಕಾರಿ, ಡಿಡಿಪಿಐ ಜವರೇಗೌಡಗೆ ವಿದ್ಯಾರ್ಥಿಗಳನ್ನು ಬೇಗ ಒಳಗೆ ಕಳುಹಿಸಿ. ಕಥೆ ಹೇಳಬೇಡಿ,‌ ಕೆಲ್ಸ ಮಾಡಿ ಎಂದು ರೇಗಿದ ಘಟನೆ ನಡೆಯಿತು.

ABOUT THE AUTHOR

...view details