ಕರ್ನಾಟಕ

karnataka

ಶಾಸಕ ಸ್ಥಾನವನ್ನು ಮಾರಿಕೊಂಡವರನ್ನು ಗೆಲ್ಲಿಸಬೇಡಿ : ದಿನೇಶ್​ ಗುಂಡೂರಾವ್

By

Published : Nov 30, 2019, 8:55 PM IST

ಹೊಸಪೇಟೆ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಭಾಗವಹಿಸಿದ್ದರು.

Dinesh gundu rao
ದಿನೇಶ್​ ಗುಂಡೂರಾವ್

ಹೊಸಪೇಟೆ : ಅನರ್ಹ ಶಾಸಕರು ತಮ್ಮ ಶಾಸಕ ಸ್ಥಾನವನ್ನು ಮಾರಿಕೊಂಡು ರಾಜ್ಯಕ್ಕೆ ಮೋಸ ಮಾಡಿ, ಮತದಾರರಿಗೆ ಅನ್ಯಾಯವೆಸಗಿದ್ದಾರೆ. ಅಂತಹವರನ್ನು ಗೆಲ್ಲಿಸಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಗುಂಡೂರಾವ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿನೇಶ್​ ಗುಂಡೂರಾವ್

ಹೊಸಪೇಟೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿನೇಶ್​ ಗುಂಡೂರಾವ್​, ಅನರ್ಹ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಮೋಸ ಮಾಡಿದ್ದಾರೆ. ಅವರನ್ನು ಪಕ್ಷ ಯಾವತ್ತು ಕ್ಷಮಿಸಲ್ಲ. ರಾಜ್ಯದಲ್ಲಿ ಉಪಚುನಾವಣೆ ಮಾಡುವಂತಹ ಅವಶ್ಯಕತೆ ಇರಲಿಲ್ಲ ಇವರಿಂದಾಗಿ ಚುನಾವಣೆ ನಡೆಯುತ್ತಿದೆ ಎಂದರು.

ಅನರ್ಹ ಶಾಸಕರಿಗೆ ಜನರು ಮತವನ್ನು ನೀಡಬಾರದು. ಸಂವಿಧಾನ ವಿರೋಧಿ ಪಕ್ಷವನ್ನು ಜನ ಬೆಂಬಲಿಸಬಾರದು. ಶಾಸಕರನ್ನು ದುಡ್ಡು ಕೊಟ್ಟು ಕೊಂಡುಕೊಂಡಿದ್ದಾರೆ ಅಂತವರನ್ನು ರಾಜಕೀಯದಿಂದ ದೂರ ಉಳಿಯುವಂತೆ ಮಾಡಬೇಕೆಂದರು.

ಬಿಜೆಪಿಯು ಕುದುರೆ ವ್ಯಾಪಾರ ಮಾಡುತ್ತಿದೆ. ಅಧಿಕಾರದ ವ್ಯಾಮೋಹದಿಂದ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿದ್ದಾರೆ. ಇವರಿಗೆಲ್ಲ ಚುನಾವಣೆ ಮಾಡುವುದಕ್ಕೆ ದುಡ್ಡು ಎಲ್ಲಿಂದ ಬರುತ್ತದೆ ಎಂದು ಗುಂಡೂರಾವ್​ ಪ್ರಶ್ನಿಸಿದರು.

ABOUT THE AUTHOR

...view details