ನವದೆಹಲಿ: ಬೆಳೆಕಾಳು, ವನಸ್ಪತಿ, ಅಡುಗೆ ಎಣ್ಣೆ ಬೆಲೆ ಗಗನಕ್ಕೇರಿದೆ. ಇವುಗಳ ಬೆಲೆ ಕೇಳುವಂತೆಯೂ ಇಲ್ಲ. ಇನ್ನು ತರಕಾರಿ, ಹಣ್ಣುಗಳ ಬೆಲೆ ಕೈಗೆಟುಕದ ದರಕ್ಕೆ ಹೊರಟು ಹೋಗಿವೆ. ಈ ಎಲ್ಲಾ ಕಾರಣಗಳಿಂದ ಬಡ ಮತ್ತು ಮಧ್ಯಮ ವರ್ಗದ ಜನ ಹೈರಾಣಾಗಿದ್ದಾರೆ.
ಒಂದೆಡೆ ಬೆಲೆ ಏರಿಕೆ ಬಿಸಿ, ಮತ್ತೊಂದೆಡೆ ಸಾಂಕ್ರಮಿಕದಿಂದಾಗಿ ಆರ್ಥಿಕತೆಗೆ ಬಿದ್ದಿರುವ ಪೆಟ್ಟು, ಜನ ನೌಕರಿ ಇಲ್ಲದೇ ಕೊಳ್ಳುವ ಸಾಮರ್ಥ್ಯವನ್ನೇ ಕಳೆದುಕೊಂಡಿದ್ದಾರೆ. ಅಡುಗೆ ಎಣ್ಣೆ ಕೈಗೆ ಸಿಗದಂತೆ ಮೇಲೇರುತ್ತಿದೆ. ಜತೆ ಜತೆಗೆ ಪೆಟ್ರೋಲ್ - ಡೀಸೆಲ್ ಬೆಲೆ 100ರ ಆಸುಪಾಸಿಗೆ ಬಂದು ನಿಂತಿದೆ.