ETV Bharat / snippets

ಕನಸಿನ ಹೋಟೆಲ್ ನಿರ್ಮಾಣದ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಸಾವು

author img

By ETV Bharat Karnataka Team

Published : 9 hours ago

YOUTH DIES IN SHIVAMOGGA
ಸಾಂದರ್ಭಿಕ ಚಿತ್ರ (File)

ಶಿವಮೊಗ್ಗ: ಹೋಟೆಲ್ ನಡೆಸಿ ಉದ್ಯಮಿಯಾಗಬೇಕೆಂಬ ಕನಸು ಕಂಡಿದ್ದ ಯುವಕನೋರ್ವ ಹೋಟೆಲ್ ನಿರ್ಮಾಣದ ವೇಳೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಘಟನೆ ಭದ್ರಾವತಿ ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ರಕ್ಷಿತ್ (22) ಸಾವನ್ನಪ್ಪಿದವರು.

ರಕ್ಷಿತ್‌ಗೆ ಮಿಲ್ಟ್ರಿ ಹೋಟೆಲ್ ನಡೆಸಬೇಕೆಂಬ ಆಸೆ ಇತ್ತು. ಇದಕ್ಕಾಗಿ ತನ್ನ ಸಂಬಂಧಿ ಯುವಕನ ಜೊತೆ ಸೇರಿ ಜಾಗವನ್ನು ಬಾಡಿಗೆಗೆ ಪಡೆದು ಅಲ್ಲಿ ಹೋಟೆಲ್ ನಿರ್ಮಿಸಲು ಮುಂದಾಗಿದ್ದರು.‌ ಕಟ್ಟಡ ನಿರ್ಮಾಣಕ್ಕೆ ತಗಡಿನ ಶೀಟ್ ಹಾಕುವಾಗ 11 ಕೆ.ವಿ ಲೈನ್ ವಿದ್ಯುತ್ ತಂತಿ ತಗುಲಿಗೆ.

ತಕ್ಷಣ ಹೊಳೆಹೊನ್ನೂರು ಆಸ್ಪತ್ರೆಗೆ‌ ಕರೆತರಲಾಗಿತ್ತು. ನಂತರ ಹೆಚ್ಚಿನ‌ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸುತ್ತಿದ್ದಾಗ ಮೃತಪಟ್ಟಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ: ಹೋಟೆಲ್ ನಡೆಸಿ ಉದ್ಯಮಿಯಾಗಬೇಕೆಂಬ ಕನಸು ಕಂಡಿದ್ದ ಯುವಕನೋರ್ವ ಹೋಟೆಲ್ ನಿರ್ಮಾಣದ ವೇಳೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಘಟನೆ ಭದ್ರಾವತಿ ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ರಕ್ಷಿತ್ (22) ಸಾವನ್ನಪ್ಪಿದವರು.

ರಕ್ಷಿತ್‌ಗೆ ಮಿಲ್ಟ್ರಿ ಹೋಟೆಲ್ ನಡೆಸಬೇಕೆಂಬ ಆಸೆ ಇತ್ತು. ಇದಕ್ಕಾಗಿ ತನ್ನ ಸಂಬಂಧಿ ಯುವಕನ ಜೊತೆ ಸೇರಿ ಜಾಗವನ್ನು ಬಾಡಿಗೆಗೆ ಪಡೆದು ಅಲ್ಲಿ ಹೋಟೆಲ್ ನಿರ್ಮಿಸಲು ಮುಂದಾಗಿದ್ದರು.‌ ಕಟ್ಟಡ ನಿರ್ಮಾಣಕ್ಕೆ ತಗಡಿನ ಶೀಟ್ ಹಾಕುವಾಗ 11 ಕೆ.ವಿ ಲೈನ್ ವಿದ್ಯುತ್ ತಂತಿ ತಗುಲಿಗೆ.

ತಕ್ಷಣ ಹೊಳೆಹೊನ್ನೂರು ಆಸ್ಪತ್ರೆಗೆ‌ ಕರೆತರಲಾಗಿತ್ತು. ನಂತರ ಹೆಚ್ಚಿನ‌ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸುತ್ತಿದ್ದಾಗ ಮೃತಪಟ್ಟಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.