ಶಿವಮೊಗ್ಗ: ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಹೊಳೆಹೊನ್ನೂರು ಪೊಲೀಸರು, 5 ಕೆ.ಜಿ 574 ಗ್ರಾಂ ಒಣ ಗಾಂಜಾ ವಶಪಡಿಸಿಕೊಂಡಿದ್ದಾರೆ. ಆಗರದಹಳ್ಳಿ ಕ್ಯಾಂಪ್ನಲ್ಲಿ ಅಕ್ರಮವಾಗಿ ಒಣ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಕ್ಯಾಂಪ್ನ ನಿವಾಸಿ ಸಂಜೀವ ರಾಜು(40) ಹಾಗೂ ಭದ್ರಾವತಿ ತಾಲೂಕು ಸಿದ್ದರ ಕಾಲೋನಿಯ ಗುರುಪ್ರಸಾದ್ (24) ಎಂಬುವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಇವರ ಬಳಿ ಒಣ ಗಾಂಜಾ ಪತ್ತೆಯಾಗಿದೆ.
ಈ ಒಣ ಗಾಂಜಾವು ರೂ 2.80 ಲಕ್ಷ ಮೌಲ್ಯದ್ದು ಎನ್ನಲಾಗಿದೆ. ಗಾಂಜಾ ವಶಪಡಿಸಿಕೊಂಡ ಹೊಳೆಹೊನ್ನೂರು ಪೊಲೀಸರು ತಮ್ಮ ಠಾಣೆಯಲ್ಲಿ 347/2024 ಕಲಂ 20(b)(ii)(B) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಪೊಲೀಸರ ಕಾರ್ಯಾಚರಣೆಗೆ ಎಸ್ಪಿ ಮಿಥುನ್ ಕುಮಾರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.