'ಯುವ' ಸಕ್ಸಸ್​: ಪ್ರೇಕ್ಷಕರಿಗೆ ಹೋಳಿಗೆ ತುಪ್ಪ ವಿತರಣೆ ಮಾಡಿ ಅಭಿಮಾನಿಗಳ ಸಂಭ್ರಮ - sweet distributed

By ETV Bharat Karnataka Team

Published : Mar 29, 2024, 7:18 PM IST

thumbnail

ದೊಡ್ಡಬಳ್ಳಾಪುರ: ರಾಜ್​ ವಂಶದ ಕುಡಿ ಯುವರಾಜ್ ಕುಮಾರ್ ಅಭಿನಯದ 'ಯುವ' ಸಿನಿಮಾ ಇಂದು ರಾಜ್ಯಾದ್ಯಂತ ತೆರೆಕಂಡಿದೆ. ಇದೇ ಖುಷಿಗೆ ಅಭಿಮಾನಿಗಳು ಮೊದಲ ಶೋ ನೋಡಲು ಬಂದ ಪೇಕ್ಷಕರಿಗೆ ಹೋಳಿಗೆ ತುಪ್ಪ ವಿತರಣೆ ಮಾಡಿದರು. 

ದೊಡ್ಡಬಳ್ಳಾಪುರ ನಗರ ಭಾಗದ ವೈಭವ ಚಿತ್ರಮಂದಿರದಲ್ಲಿ ಅಭಿಮಾನಿಗಳು ಯುವ ರಾಜ್​​ಕುಮಾರ್​​​​​ ಕಟೌಟ್​ಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಸಿನಿಮಾವನ್ನು ಭರ್ಜರಿಯಾಗಿ ಸ್ವಾಗತಿಸಿದರು. ಕಲ್ಲುದೇವನಹಳ್ಳಿ ನಾಗರಾಜ್​ ಮತ್ತು ಸಂಗಡಿಗರು ಚಿತ್ರಮಂದಿರಕ್ಕೆ ಬರುವ ಸಿನಿ ಪ್ರೇಕ್ಷಕರಿಗೆ ಹೋಳಿಗೆ ಮತ್ತು ತುಪ್ಪ ನೀಡುವ ಮೂಲಕ ಸಂಭ್ರಮಿಸಿದರು.

ಈ ಕುರಿತು ಕಲ್ಲುದೇವನಹಳ್ಳಿ ನಾಗರಾಜ್ ಮಾತನಾಡಿ, 'ಅಪ್ಪು ಅಭಿಮಾನಿಗಳು ಹಾಗೂ ರಾಜ್ ಕುಟುಂಬದ ಅಭಿಮಾನಿಗಳಿಗೆ ಇಂದು ಹಬ್ಬದ ವಾತಾವರಣ. ಕಾರಣ ನಮ್ಮ ಯುವ ರಾಜ್​ಕುಮಾರ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ರಾಜ್ ಕುಟುಂಬದ ಅಭಿಮಾನಿಗಳಿಗೆ ಯುಗಾದಿ ಹಬ್ಬವು ಇಂದೇ ಪ್ರಾರಂಭವಾಗಿದ್ದು, ಸಿನಿ ಪ್ರೇಕ್ಷಕರಿಗೆ ಒಬ್ಬಟ್ಟು ನೀಡಿ ಸ್ವಾಗತಿಸುತ್ತಿದ್ದೇವೆ' ಎಂದರು.

ಈ ಸಂದರ್ಭದಲ್ಲಿ ಕೆಂಪರಾಜು, ಚೌಡರಾಜು, ಚಂದ್ರಶೇಖರ್, ಸೀನಪ್ಪ, ನಿತಿನ್​ಕುಮಾರ್, ದೇವರಾಜ್, ವಿಕ್ಕಿ ಸೇರಿದಂತೆ ಎಲ್ಲಾ ರಾಜ್ ಕುಟುಂಬದ ಅಭಿಮಾನಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: 'ಯುವ'ನಲ್ಲಿ ನೆನಪಾದ ಅಪ್ಪು: ತಂದೆ ಮಗನ ಬಾಂಧವ್ಯಕ್ಕೆ ಮನಸೋತ ಅಭಿಮಾನಿಗಳು - YUVA CINEMA

ಇದನ್ನೂ ಓದಿ: ನನಗೆ ಆ್ಯಕ್ಟಿಂಗ್ ಬರುತ್ತೆ ಎಂಬ ಆತ್ಮವಿಶ್ವಾಸ ಮೂಡಿದ್ದು ಅಚ್ಯುತ್ ಕುಮಾರ್ ಸರ್​​ ಜೊತೆ ನಟಿಸಿದಾಗ: ಯುವ ರಾಜ್​ಕುಮಾರ್​ ಸಂದರ್ಶನ - Yuvrajkumar Interview 

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.