ಬಳ್ಳಾರಿ ಸೆಂಟ್ರಲ್ ಜೈಲ್​​​​​​ಗೆ ಸ್ಥಳಾಂತರಗೊಳ್ಳಲಿರುವ ದರ್ಶನ್​: ಕಾರಾಗೃಹಕ್ಕೆ ಭೇಟಿ ಕೊಟ್ಟ ಎಸ್ಪಿ - SP Visits Ballary Jail

By ETV Bharat Karnataka Team

Published : Aug 28, 2024, 4:17 PM IST

Updated : Aug 28, 2024, 7:45 PM IST

thumbnail
ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದ ಎಸ್​ಪಿ (Darshan shifting to Ballary Central Jail)

ಬಳ್ಳಾರಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಸೆಂಟ್ರಲ್ ಜೈಲ್​​​​​​ಗೆ ಸ್ಥಳಾಂತರಗೊಳಿಸಲಾಗುತ್ತಿದೆ. ಈ ಹಿನ್ನೆಲೆ ಕಾರಾಗೃಹಕ್ಕೆ ಜಿಲ್ಲಾ ಪೊಲೀಸ್ ‌ವರಿಷ್ಠಾಧಿಕಾರಿ ಡಾ. ಶೋಭರಾಣಿ ದಿಢೀರ್‌ ಭೇಟಿ ನೀಡಿದರು.

ಆರೋಪಿ ದರ್ಶನ್​​ನನ್ನು ಮಧ್ಯಾಹ್ನ ಶಿಫ್ಟ್ ಮಾಡುವ ಸೂಚನೆ ದೊರೆತ ಹಿನ್ನೆಲೆ, ಜೈಲಿಗೆ ಆಗಮಿಸಿ ಇಲ್ಲಿನ ಪರಿಸ್ಥಿತಿ ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಜೈಲಿನ ಸೆಲ್​ಗಳ ಪರಿಸ್ಥಿತಿ, ಆರೋಪಿಗಳ ಸಂಖ್ಯೆ, ವಿವರ ಹಾಗೂ ಹೊರ ಭದ್ರತಾ ವಿಭಾಗದಲ್ಲಿನ ಸೆಲ್​​ಗಳ ಮಾಹಿತಿ ಪಡೆದರು. ಆರೋಪಿ ದರ್ಶನ್​​ನನ್ನು ಶಿಫ್ಟ್ ಮಾಡುವ ಸೆಲ್, ಅಲ್ಲಿನ ಸ್ಥಿತಿಗತಿ, ಸಿಸಿ ಕ್ಯಾಮರಾಗಳ ಕಣ್ಗಾವಲು ಸೇರಿ ಸೂಕ್ತ ಭದ್ರತೆ ಇರುವ ಬಗ್ಗೆ ಪರಿಶೀಲನೆ ನಡೆಸಿದರು.

ನಂತರ ಈ ಬಗ್ಗೆ ಪ್ರತಿಕ್ರಿಯಿಸಿದ ಬಳ್ಳಾರಿ ಎಸ್ಪಿ ಶೋಭರಾಣಿ, ''ಬಳ್ಳಾರಿಗೆ ಬರೋ ಬಗ್ಗೆ ಇನ್ನೂ ಯಾವುದೇ ಡೈರೆಕ್ಷನ್ ಬಂದಿಲ್ಲ. ನಮಗೆ ಈವರೆಗೂ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ವಿಚಾರಣಾಧೀನ ಕೈದಿಗಳ ಬ್ಯಾರಕ್​ನಲ್ಲೇ ದರ್ಶನ್ ಅವರನ್ನೂ ಇರಿಸಲಾಗುತ್ತದೆ. ಆದೇಶ ಬಂದಮೇಲೆ ಏನೇನು ಮಾಡ್ಬೇಕೋ ಅದನ್ನು ಮಾಡುತ್ತೇವೆಂದು ತಿಳಿಸಿದರು.

ನ್ಯಾಯಾಂಗ ಬಂಧನ ಮುಂದುವರಿಕೆ: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 9ರ ವರೆಗೆ ವಿಸ್ತರಿಸಲಾಗಿದೆ. 

ಇದನ್ನೂ ಓದಿ: ದರ್ಶನ್ ನ್ಯಾಯಾಂಗ ಬಂಧನ ವಿಸ್ತರಣೆ: ಬಳ್ಳಾರಿ ಜೈಲಿಗೆ ಸ್ಥಳಾಂತರ ಹಿನ್ನೆಲೆ ಬಿಗಿ ಬಂದೋಬಸ್ತ್ - DARSHAN JUDICIAL CUSTODY

Last Updated : Aug 28, 2024, 7:45 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.