ETV Bharat / technology

ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಬೇಕಿದೆ ಇನ್ನಷ್ಟು ಉತ್ತೇಜನ

ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ನೀಡಲಾಗುವ ಹಣಕಾಸಿನ ಬಗ್ಗೆ ಪೊಟ್ಲೂರಿ ವೆಂಕಟೇಶ್ವರ ರಾವ್ ಅವರು ಬರೆದ ಲೇಖನ ಇಲ್ಲಿದೆ.

author img

By ETV Bharat Karnataka Team

Published : Feb 9, 2024, 7:00 PM IST

Need for further boost to R&D in India
Need for further boost to R&D in India

ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಭಾರಿ ಉತ್ತೇಜನ ನೀಡುವ ನಿಟ್ಟಿನಲ್ಲಿ ಫೆಬ್ರವರಿ 1 ರಂದು ಮಂಡಿಸಲಾದ ಕೇಂದ್ರ ಬಜೆಟ್​ನಲ್ಲಿ ಕೇಂದ್ರ ಸರ್ಕಾರ 1 ಲಕ್ಷ ಕೋಟಿ ರೂ. ಅನುದಾನ ಮೀಸಲಿಟ್ಟಿರುವುದು ಗಮನಾರ್ಹವಾಗಿದೆ. ಉದಯೋನ್ಮುಖ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಈ ಅನುದಾನ ಬಳಕೆಯಾಗಲಿದೆ ಹಾಗೂ ಈ ಕ್ಷೇತ್ರದಲ್ಲಿ ಖಾಸಗಿ ವಲಯವನ್ನು ಪ್ರೋತ್ಸಾಹಿಸಲು ಕನಿಷ್ಠ ಅಥವಾ ಶೂನ್ಯ ಬಡ್ಡಿದರಗಳಲ್ಲಿ ಈ ನಿಧಿ ಲಭ್ಯವಾಗಲಿದೆ.

ಇದೊಂದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು, ಯೋಜನೆಯನ್ನು ಯಾವ ರೀತಿಯಲ್ಲಿ ಕಾರ್ಯಗತಗೊಳಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ಹಂತದಲ್ಲಿ ಅನೇಕ ಸಾಧ್ಯತೆಗಳು ಕಾಣಿಸುತ್ತಿದ್ದರು, ಫಲಾನುಭವಿಗಳು ಮತ್ತು ಅನುಷ್ಠಾನದ ಬಗ್ಗೆ ಯಾವುದೇ ನಿರ್ದಿಷ್ಟ ಚರ್ಚೆಗಳು ನಡೆದ ಬಗ್ಗೆ ಮತ್ತು ಈ ಯೋಜನೆಯಲ್ಲಿ ಒಳಗೊಂಡಿರುವ ಸಚಿವಾಲಯಗಳ ಬಗ್ಗೆ ತಿಳಿದಿಲ್ಲ. ಆದಾಗ್ಯೂ ಇದು ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆಗಳನ್ನು ಹೆಚ್ಚಿಸುವುದರಿಂದ ಇದೊಂದು ತುಂಬಾ ಒಳ್ಳೆಯ ಬೆಳವಣಿಗೆಯಾಗಿದೆ.

ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಒಟ್ಟಾರೆ ಜಿಡಿಪಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಭಾರತದ ಪಾಲು ತುಂಬಾ ಕಡಿಮೆಯಾಗಿದೆ ಮತ್ತು ಈ ಬಗ್ಗೆ ಗಮನ ಹರಿಸುವಂತೆ ಕೈಗಾರಿಕಾ ಸಂಸ್ಥೆ ನಾಸ್​ಕಾಮ್ ದೀರ್ಘಕಾಲದಿಂದ ಒತ್ತಾಯಿಸುತ್ತಿದೆ. ನೀತಿ ಆಯೋಗ ಮತ್ತು ಇನ್​ಸ್ಟಿಟ್ಯೂಟ್​ ಫಾರ್ ಕಾಂಪಿಟಿಟಿವ್​ನೆಸ್ ನಡೆಸಿದ ಅಧ್ಯಯನದ ಪ್ರಕಾರ, ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಭಾರತದ ವೆಚ್ಚವು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ವಾಸ್ತವವಾಗಿ, ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ವಲಯದಲ್ಲಿನ ಹೂಡಿಕೆಯು 2008-09 ರಲ್ಲಿ ಜಿಡಿಪಿಯ 0.8% ರಿಂದ 2017-18 ರಲ್ಲಿ 0.7% ಕ್ಕೆ ಇಳಿಕೆಯಾಗಿದೆ.

ಭಾರತದ ಜಿಇಆರ್​ಡಿ (ಸಂಶೋಧನೆ ಮತ್ತು ಅಭಿವೃದ್ಧಿಯ ಒಟ್ಟು ವೆಚ್ಚ) ಇತರ ಬ್ರಿಕ್ಸ್ ರಾಷ್ಟ್ರಗಳಿಗಿಂತ ಕಡಿಮೆಯಾಗಿದೆ ಎಂದು ಅಂಕಿಅಂಶಗಳು ಹೇಳಿವೆ. ಇದಕ್ಕಾಗಿ ಬ್ರೆಜಿಲ್, ರಷ್ಯಾ, ಚೀನಾ ಮತ್ತು ದಕ್ಷಿಣ ಅಮೆರಿಕ ಕ್ರಮವಾಗಿ 1.2%, 1.1%, 2% ಮತ್ತು 0.8% ಕ್ಕಿಂತ ಹೆಚ್ಚು ಖರ್ಚು ಮಾಡುತ್ತವೆ. ಈ ವಿಷಯದಲ್ಲಿ ವಿಶ್ವದ ಸರಾಸರಿ ವೆಚ್ಚ ಸುಮಾರು 1.8% ರಷ್ಟಿದೆ.

ಭಾರತದ ಜನಸಂಖ್ಯೆಯ ಅರ್ಧದಷ್ಟು ಜನ 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಇವರ ಸರಾಸರಿ ವಯಸ್ಸು 28 ವರ್ಷಗಲಾಗಿದೆ. ಅಂದರೆ ದೇಶದಲ್ಲಿನ ಪ್ರತಿಭಾವಂತರ ಸಂಖ್ಯೆ ಅತ್ಯುತ್ತಮವಾಗಿದೆ. ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್ 2019 ರ ಪ್ರಕಾರ, ಹೊಸತನ್ನು ಆವಿಷ್ಕರಿಸುವ ಸಾಮರ್ಥ್ಯ ಮತ್ತು ಯಶಸ್ಸಿನ ವಿಚಾರದಲ್ಲಿ 129 ದೇಶಗಳ ಪೈಕಿ ಭಾರತವು 52 ನೇ ಸ್ಥಾನದಲ್ಲಿದೆ. ಜಾಗತಿಕವಾಗಿ ಐದನೇ ಅತ್ಯಂತ ಸ್ಟಾರ್ಟ್ ಅಪ್ ಸ್ನೇಹಿ ಆರ್ಥಿಕತೆ ಎಂದು ಹೇಳಿಕೊಳ್ಳುವ ಭಾರತಕ್ಕೆ ಈ ಶ್ರೇಯಾಂಕ ಕಳಪೆಯಾಗಿದೆ ಮತ್ತು ಪಕ್ವವಾದ ಗ್ರಾಹಕ ಮಾರುಕಟ್ಟೆಯ ಹೊರತಾಗಿಯೂ ಟೆಕ್ ಆರ್ಥಿಕತೆಯ ನಿಧಾನಗತಿಯ ಬೆಳವಣಿಗೆಯ ದರವನ್ನು ಎತ್ತಿ ತೋರಿಸುತ್ತದೆ. ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಭಾರತದ ತುಲನಾತ್ಮಕವಾಗಿ ಕಡಿಮೆ ವೆಚ್ಚವು ಈ ನಾವೀನ್ಯತೆಯ ಕೊರತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಪೇಟಿಎಂ, ಓಲಾ, ಫ್ಲಿಪ್ ಕಾರ್ಟ್, ಜೊಹೋ ಮತ್ತು ಕಾರ್ ದೆಖೋ, ಎಂಎಸ್ ವೈಪ್, ಲೆನ್ಸ್ ಕಾರ್ಟ್ ಮತ್ತು ಇತರ ಭಾರತೀಯ ಯುನಿಕಾರ್ನ್ ಸ್ಟಾರ್ಟ್ ಅಪ್ ಗಳು ಮೂಲದಲ್ಲಿ ಜಾಗತಿಕ ಕಲ್ಪನೆಗಳಾಗಿದ್ದು, ಇವನ್ನೇ ಸ್ಥಳೀಯ ಅಗತ್ಯಗಳನ್ನು ಪೂರೈಸಲು ಅನುಕರಿಸಲಾಗಿದೆ ಎಂಬ ಅಂಶವು ಗುಣಮಟ್ಟದ ಆರ್ &ಡಿ ಕೊರತೆಗೆ ಸಾಕ್ಷಿಯಾಗಿದೆ.

ಕೆಲ ವರ್ಷಗಳ ಹಿಂದೆ ತಮ್ಮ ಭಾರತೀಯ ಸಹವರ್ತಿಗಳಿಗಿಂತ ಮೊದಲೇ ಸ್ಥಾಪಿಸಲಾದ ಯಶಸ್ವಿ ವಿದೇಶಿ ಸ್ಟಾರ್ಟ್ ಅಪ್ ಗಳು ಭಾರತೀಯ ಸ್ಟಾರ್ಟ್ ಅಪ್ ಗಳಿಗೆ ನೀಲನಕ್ಷೆಗಳಾಗಿವೆ. ದೇಶದ 763 ಜಿಲ್ಲೆಗಳಲ್ಲಿ 1,12,718 ಕ್ಕೂ ಹೆಚ್ಚು ಮಾನ್ಯತೆ ಪಡೆದ ಸ್ಟಾರ್ಟ್ ಅಪ್ ಗಳೊಂದಿಗೆ ಭಾರತವು ಜಾಗತಿಕವಾಗಿ ಸ್ಟಾರ್ಟ್ ಅಪ್ ಗಳಿಗೆ 3 ನೇ ಅತಿದೊಡ್ಡ ಪರಿಸರ ವ್ಯವಸ್ಥೆಯಾಗಿ ಸ್ಟಾರ್ಟ್ ಅಪ್ ಕೇಂದ್ರವಾಗಿ ಮಾರ್ಪಟ್ಟಿದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಮೂಲಸೌಕರ್ಯದಲ್ಲಿನ ಈ ಮಿತಿಗಳು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ರಂಗದಲ್ಲಿ ಸರ್ಕಾರದ ನಿಷ್ಕ್ರಿಯತೆಯನ್ನು ದಾಟುವುದು ಭಾರತೀಯ ನವೋದ್ಯಮ ಪರಿಸರ ವ್ಯವಸ್ಥೆಗೆ ಸವಾಲಾಗಿದೆ.

ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಅಭಿವೃದ್ಧಿ ಹೊಂದಿದ ದೇಶಗಳಾದ ಯುಎಸ್ಎ, ಸ್ವೀಡನ್ ಮತ್ತು ಸ್ವಿಟ್ಜರ್ಲೆಂಡ್ ಕ್ರಮವಾಗಿ 2.9%, 3.2% ಮತ್ತು 3.4% ಖರ್ಚು ಮಾಡುತ್ತವೆ. ಇಸ್ರೇಲ್ ತನ್ನ ಜಿಡಿಪಿಯ ಸುಮಾರು 4.5% ಅನ್ನು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಖರ್ಚು ಮಾಡುತ್ತದೆ. ಇದು ವಿಶ್ವದಲ್ಲೇ ಅತಿ ಹೆಚ್ಚು.

ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿನ ಹೂಡಿಕೆಗಳು ಫಲಿತಾಂಶ ನೀಡಲು ತುಂಬಾ ಸಮಯ ತೆಗೆದುಕೊಳ್ಳುತ್ತವೆ ಎಂಬುದು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಸಂಶೋಧನೆ ಮತ್ತು ಅಭಿವೃದ್ಧಿಗೆ ಕಡಿಮೆ ವೆಚ್ಚ ಮಾಡುವುದಕ್ಕೆ ಮುಖ್ಯ ಕಾರಣವಾಗಿದೆ. ಭಾರತದಂತಹ ದೇಶಗಳು ಹಸಿವು ಸೂಚ್ಯಂಕ, ರೋಗ ನಿಯಂತ್ರಣ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸುವಂತಹ ದೊಡ್ಡ ವಿಷಯಗಳ ಮೇಲೆ ಗಮನ ಹರಿಸುತ್ತವೆ ಮತ್ತು ಅಧಿಕಾರಿಗಳು ಅವುಗಳನ್ನು ನಿಭಾಯಿಸಲು ಸಂಪನ್ಮೂಲಗಳನ್ನು ಬೇರೆಡೆಗೆ ತಿರುಗಿಸುತ್ತಾರೆ. ಆದಾಗ್ಯೂ, ಈ ಕಾಳಜಿಗಳನ್ನು ಅಡಚಣೆಯಾಗಿ ನೋಡದೆ, ಆರ್ &ಡಿ ವ್ಯಾಪ್ತಿಯನ್ನು ವಿಸ್ತರಿಸುವ ಅವಕಾಶವಾಗಿ ನೋಡಬೇಕು ಎಂದು ವಾದಿಸಬಹುದು.

ಜಿಇಆರ್​ಡಿಗೆ ಕಡಿಮೆ ಖರ್ಚು ಮಾಡುವ ದೇಶಗಳು ದೀರ್ಘಾವಧಿಯಲ್ಲಿ ತಮ್ಮ ಮಾನವ ಬಂಡವಾಳವನ್ನು ಉಳಿಸಿಕೊಳ್ಳಲು ವಿಫಲವಾಗುತ್ತವೆ ಎಂಬುದನ್ನು ಅಂಕಿ ಅಂಶಗಳು ತೋರಿಸಿವೆ. ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲಿನ ಕಡಿಮೆ ವೆಚ್ಚ ಮತ್ತು ಕಡಿಮೆ ನವೀನ ಅವಕಾಶಗಳು ಜನರು ಉತ್ತಮ ಅವಕಾಶಗಳಿಗಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶ / ರಾಜ್ಯ / ದೇಶಕ್ಕೆ ಹೋಗಲು ಕಾರಣವಾಗಬಹುದು. ಈ ವಿದ್ಯಮಾನವನ್ನು ಬ್ರೇನ್ ಡ್ರೇನ್ ಅಥವಾ ಪ್ರತಿಭಾ ಪಲಾಯನ ಎಂದು ಕರೆಯಲಾಗುತ್ತದೆ. ಇದು ರಾಜ್ಯದ ಸ್ಪರ್ಧಾತ್ಮಕತೆಯನ್ನು ಕಡಿಮೆ ಮಾಡುತ್ತದೆ ಹಾಗೂ ದೇಶದ ಒಟ್ಟಾರೆ ಆರ್ಥಿಕತೆಯ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ. ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸಲು, ಭಾರತದ ಜಿಇಆರ್​ಡಿ ಕನಿಷ್ಠ 2% ಅನ್ನು ಮುಟ್ಟಲು ಗಣನೀಯ ಸುಧಾರಣೆಯ ಅಗತ್ಯವಿದೆ.

ಭಾರತದ ಜಿಇಆರ್​ಡಿ ತಲಾ 43 ಡಾಲರ್ ಆಗಿದ್ದು, ಇದು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ಭಾರತದ ಬ್ರಿಕ್ಸ್ ಮತ್ತು ಏಷ್ಯಾದ ಸಹವರ್ತಿಗಳಾದ ರಷ್ಯಾ (285), ಬ್ರೆಜಿಲ್ (173) ಮತ್ತು ಮಲೇಷ್ಯಾ (293) ಅಂತಹ ಕಡಿಮೆ ಕೊಡುಗೆಯೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.

ತೀರಾ ಇತ್ತೀಚೆಗೆ, ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಅವರು ಖಾಸಗಿ ಕಂಪನಿಗಳು ಮತ್ತು ಸಂಸ್ಥೆಗಳಿಂದ ಹೆಚ್ಚಿನ ಕೊಡುಗೆಯೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಖರ್ಚು ಮಾಡುವ ಅಗತ್ಯವನ್ನು ಪ್ರತಿಪಾದಿಸಿದ್ದರು. "ನಾವು ಸಂಶೋಧನೆಯಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡಬೇಕಾಗಿದೆ. ಸಂಶೋಧನಾ ವೆಚ್ಚವು ಭಾರತದ ಜಿಡಿಪಿಯ ಶೇ 0.7 ರಿಂದ ಶೇ 3ಕ್ಕೆ ತಲುಪಬೇಕು. ಇದರಲ್ಲಿ, ಖಾಸಗಿ ಕೊಡುಗೆ ಪ್ರಸ್ತುತ 0.1% ರಿಂದ ಕನಿಷ್ಠ 1.5% ಕ್ಕೆ ಏರಬೇಕು." ಎಂದು ಅವರು ಹೇಳಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ)ಯು 2020 ರಲ್ಲಿ ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ವೆಚ್ಚದ ಬಗ್ಗೆ ಈ ಹಿಂದೆ ಕೊನೆಯದಾಗಿ ಸಮಗ್ರ ವರದಿಯನ್ನು ಪ್ರಕಟಿಸಿತ್ತು. ಸಂಶೋಧನೆ ಮತ್ತು ಅಭಿವೃದ್ಧಿಗಾಗಿ 2017-18ರಲ್ಲಿ ಹಂಚಿಕೆಯಾದ ನಿಧಿಯಲ್ಲಿ, ಶೇಕಡಾ 61.4 ರಷ್ಟು ಮೊತ್ತವು ಡಿಆರ್​ಡಿಒ (31.6 ಶೇಕಡಾ), ಬಾಹ್ಯಾಕಾಶ ಇಲಾಖೆಗಳು (19 ಶೇಕಡಾ) ಮತ್ತು ಪರಮಾಣು ಶಕ್ತಿ (10.8 ಶೇಕಡಾ) ಗೆ ಹಂಚಿಕೆಯಾಗಿದೆ.

2011-12 ಮತ್ತು 2017-18ರ ನಡುವೆ ವಿಶ್ವವಿದ್ಯಾಲಯಗಳು ಅಥವಾ ಸಂಸ್ಥೆಗಳ ಸಂಖ್ಯೆ 752 ರಿಂದ 1,016 ಕ್ಕೆ ಮತ್ತು ವಾರ್ಷಿಕವಾಗಿ ನೀಡಲಾಗುವ ಡಾಕ್ಟರೇಟ್ ಪದವಿಗಳು 10,011 ರಿಂದ 24,474 ಕ್ಕೆ ಏರಿದೆ. ವಿಶ್ವವಿದ್ಯಾಲಯಗಳು ಅಥವಾ ಸಂಸ್ಥೆಗಳ ಸಂಖ್ಯೆ ಮತ್ತು ಡಾಕ್ಟರೇಟ್ ವಿದ್ಯಾರ್ಥಿಗಳ ಸಂಖ್ಯೆಯಲ್ಲಿನ ಹೆಚ್ಚಳವು ಧನಸಹಾಯದಲ್ಲಿನ ಅಲ್ಪ ಹೆಚ್ಚಳಕ್ಕೆ ಅನುಗುಣವಾಗಿಲ್ಲ. ಇದು ಡಾಕ್ಟರೇಟ್ ಮಟ್ಟದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸದ ಗುಣಮಟ್ಟ ಹದಗೆಡಲು ಕಾರಣವಾಗುತ್ತದೆ. ಡಿಎಸ್​ಟಿ, ಡಿಬಿಟಿ, ಐಸಿಎಂಆರ್ ಮತ್ತು ಸಿಎಸ್ಐಆರ್ ಅನ್ನು ತಮ್ಮ ಬಾಹ್ಯ ಬೆಂಬಲ ವ್ಯವಸ್ಥೆಯಡಿ ಅವಲಂಬಿಸಿರುವ ವಿಶ್ವವಿದ್ಯಾಲಯಗಳಲ್ಲಿ ಪರಿಸ್ಥಿತಿ ವಿಶೇಷವಾಗಿ ಕಳವಳಕಾರಿಯಾಗಿದೆ.

ಭಾರತದ ಶಿಕ್ಷಣ ಸಂಸ್ಥೆಗಳಲ್ಲಿ, ವಿಶೇಷವಾಗಿ ಉನ್ನತ ಶಿಕ್ಷಣದಲ್ಲಿ ತೊಡಗಿರುವ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆ ನಿರ್ಣಾಯಕವಾಗಿದೆ. ಇತಿಹಾಸದುದ್ದಕ್ಕೂ ಉನ್ನತ ಶಿಕ್ಷಣ ಮಟ್ಟದಲ್ಲಿ ಉತ್ತಮ ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಯಗಳು ಸಂಶೋಧನೆ ಮತ್ತು ಜ್ಞಾನ ಸೃಷ್ಟಿಯ ಬಲವಾದ ಸಂಸ್ಕೃತಿ ಇರುವ ಪರಿಸರದಲ್ಲಿ ಸಂಭವಿಸುತ್ತದೆ ಎಂಬುದನ್ನು ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಪುರಾವೆಗಳು ತೋರಿಸುತ್ತವೆ.

ನವೀನ ಪರಿಹಾರಗಳ ಭಾರಿ ಅಗತ್ಯವಿದ್ದರೂ, ವಿಶೇಷವಾಗಿ ಬಡತನವನ್ನು ನಿವಾರಿಸುವ ಮತ್ತು ಒಳಗೊಳ್ಳುವಿಕೆಯ ಮಾನದಂಡಗಳನ್ನು ಸುಧಾರಿಸುವ ಆವಿಷ್ಕಾರಗಳು ಪ್ರವರ್ಧಮಾನಕ್ಕೆ ಬರಲು ಭಾರತವು ಮೂಲಸೌಕರ್ಯ-ಸಿದ್ಧವಾಗಿರಬೇಕು. ಭಾರತೀಯ ಮಾರುಕಟ್ಟೆಯ ಪ್ರಮಾಣ ಮತ್ತು ಅದರ ಸಂಪನ್ಮೂಲ ನಿರ್ಬಂಧಗಳನ್ನು ಗಮನಿಸಿದರೆ, ಕಡಿಮೆ ವೆಚ್ಚದ, ಹೆಚ್ಚಿನ ಪರಿಣಾಮ ಬೀರುವ ಪರಿಹಾರಗಳು ಸಮಯದ ಅಗತ್ಯವಾಗಿದೆ. ಭಾರತೀಯ ಆರ್ಥಿಕತೆಯನ್ನು ತನ್ನ ಮಾರುಕಟ್ಟೆ ಪೂರ್ಣ ಸಾಮರ್ಥ್ಯವನ್ನು ತಲುಪಲು ಸಿದ್ಧಗೊಳಿಸುವಲ್ಲಿ ಸರ್ಕಾರದಿಂದ ಭಾರಿ ಉತ್ತೇಜನದ ಅಗತ್ಯವಿದೆ.

(ಲೇಖನ: ಪೊಟ್ಲೂರಿ ವೆಂಕಟೇಶ್ವರ ರಾವ್)

ಇದನ್ನೂ ಓದಿ: ಚಂದ್ರನತ್ತ ಮತ್ತೆ ನಾಸಾ ಚಿತ್ತ: ವ್ಯಾಲೆಂಟೈನ್ಸ್​ ದಿನ ನಭಕ್ಕೆ ಚಿಮ್ಮಲಿದೆ ಐಎಂ-1 ಲ್ಯಾಂಡರ್

ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಭಾರಿ ಉತ್ತೇಜನ ನೀಡುವ ನಿಟ್ಟಿನಲ್ಲಿ ಫೆಬ್ರವರಿ 1 ರಂದು ಮಂಡಿಸಲಾದ ಕೇಂದ್ರ ಬಜೆಟ್​ನಲ್ಲಿ ಕೇಂದ್ರ ಸರ್ಕಾರ 1 ಲಕ್ಷ ಕೋಟಿ ರೂ. ಅನುದಾನ ಮೀಸಲಿಟ್ಟಿರುವುದು ಗಮನಾರ್ಹವಾಗಿದೆ. ಉದಯೋನ್ಮುಖ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಈ ಅನುದಾನ ಬಳಕೆಯಾಗಲಿದೆ ಹಾಗೂ ಈ ಕ್ಷೇತ್ರದಲ್ಲಿ ಖಾಸಗಿ ವಲಯವನ್ನು ಪ್ರೋತ್ಸಾಹಿಸಲು ಕನಿಷ್ಠ ಅಥವಾ ಶೂನ್ಯ ಬಡ್ಡಿದರಗಳಲ್ಲಿ ಈ ನಿಧಿ ಲಭ್ಯವಾಗಲಿದೆ.

ಇದೊಂದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು, ಯೋಜನೆಯನ್ನು ಯಾವ ರೀತಿಯಲ್ಲಿ ಕಾರ್ಯಗತಗೊಳಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ಹಂತದಲ್ಲಿ ಅನೇಕ ಸಾಧ್ಯತೆಗಳು ಕಾಣಿಸುತ್ತಿದ್ದರು, ಫಲಾನುಭವಿಗಳು ಮತ್ತು ಅನುಷ್ಠಾನದ ಬಗ್ಗೆ ಯಾವುದೇ ನಿರ್ದಿಷ್ಟ ಚರ್ಚೆಗಳು ನಡೆದ ಬಗ್ಗೆ ಮತ್ತು ಈ ಯೋಜನೆಯಲ್ಲಿ ಒಳಗೊಂಡಿರುವ ಸಚಿವಾಲಯಗಳ ಬಗ್ಗೆ ತಿಳಿದಿಲ್ಲ. ಆದಾಗ್ಯೂ ಇದು ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆಗಳನ್ನು ಹೆಚ್ಚಿಸುವುದರಿಂದ ಇದೊಂದು ತುಂಬಾ ಒಳ್ಳೆಯ ಬೆಳವಣಿಗೆಯಾಗಿದೆ.

ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಒಟ್ಟಾರೆ ಜಿಡಿಪಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಭಾರತದ ಪಾಲು ತುಂಬಾ ಕಡಿಮೆಯಾಗಿದೆ ಮತ್ತು ಈ ಬಗ್ಗೆ ಗಮನ ಹರಿಸುವಂತೆ ಕೈಗಾರಿಕಾ ಸಂಸ್ಥೆ ನಾಸ್​ಕಾಮ್ ದೀರ್ಘಕಾಲದಿಂದ ಒತ್ತಾಯಿಸುತ್ತಿದೆ. ನೀತಿ ಆಯೋಗ ಮತ್ತು ಇನ್​ಸ್ಟಿಟ್ಯೂಟ್​ ಫಾರ್ ಕಾಂಪಿಟಿಟಿವ್​ನೆಸ್ ನಡೆಸಿದ ಅಧ್ಯಯನದ ಪ್ರಕಾರ, ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಭಾರತದ ವೆಚ್ಚವು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ವಾಸ್ತವವಾಗಿ, ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ವಲಯದಲ್ಲಿನ ಹೂಡಿಕೆಯು 2008-09 ರಲ್ಲಿ ಜಿಡಿಪಿಯ 0.8% ರಿಂದ 2017-18 ರಲ್ಲಿ 0.7% ಕ್ಕೆ ಇಳಿಕೆಯಾಗಿದೆ.

ಭಾರತದ ಜಿಇಆರ್​ಡಿ (ಸಂಶೋಧನೆ ಮತ್ತು ಅಭಿವೃದ್ಧಿಯ ಒಟ್ಟು ವೆಚ್ಚ) ಇತರ ಬ್ರಿಕ್ಸ್ ರಾಷ್ಟ್ರಗಳಿಗಿಂತ ಕಡಿಮೆಯಾಗಿದೆ ಎಂದು ಅಂಕಿಅಂಶಗಳು ಹೇಳಿವೆ. ಇದಕ್ಕಾಗಿ ಬ್ರೆಜಿಲ್, ರಷ್ಯಾ, ಚೀನಾ ಮತ್ತು ದಕ್ಷಿಣ ಅಮೆರಿಕ ಕ್ರಮವಾಗಿ 1.2%, 1.1%, 2% ಮತ್ತು 0.8% ಕ್ಕಿಂತ ಹೆಚ್ಚು ಖರ್ಚು ಮಾಡುತ್ತವೆ. ಈ ವಿಷಯದಲ್ಲಿ ವಿಶ್ವದ ಸರಾಸರಿ ವೆಚ್ಚ ಸುಮಾರು 1.8% ರಷ್ಟಿದೆ.

ಭಾರತದ ಜನಸಂಖ್ಯೆಯ ಅರ್ಧದಷ್ಟು ಜನ 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಇವರ ಸರಾಸರಿ ವಯಸ್ಸು 28 ವರ್ಷಗಲಾಗಿದೆ. ಅಂದರೆ ದೇಶದಲ್ಲಿನ ಪ್ರತಿಭಾವಂತರ ಸಂಖ್ಯೆ ಅತ್ಯುತ್ತಮವಾಗಿದೆ. ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್ 2019 ರ ಪ್ರಕಾರ, ಹೊಸತನ್ನು ಆವಿಷ್ಕರಿಸುವ ಸಾಮರ್ಥ್ಯ ಮತ್ತು ಯಶಸ್ಸಿನ ವಿಚಾರದಲ್ಲಿ 129 ದೇಶಗಳ ಪೈಕಿ ಭಾರತವು 52 ನೇ ಸ್ಥಾನದಲ್ಲಿದೆ. ಜಾಗತಿಕವಾಗಿ ಐದನೇ ಅತ್ಯಂತ ಸ್ಟಾರ್ಟ್ ಅಪ್ ಸ್ನೇಹಿ ಆರ್ಥಿಕತೆ ಎಂದು ಹೇಳಿಕೊಳ್ಳುವ ಭಾರತಕ್ಕೆ ಈ ಶ್ರೇಯಾಂಕ ಕಳಪೆಯಾಗಿದೆ ಮತ್ತು ಪಕ್ವವಾದ ಗ್ರಾಹಕ ಮಾರುಕಟ್ಟೆಯ ಹೊರತಾಗಿಯೂ ಟೆಕ್ ಆರ್ಥಿಕತೆಯ ನಿಧಾನಗತಿಯ ಬೆಳವಣಿಗೆಯ ದರವನ್ನು ಎತ್ತಿ ತೋರಿಸುತ್ತದೆ. ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಭಾರತದ ತುಲನಾತ್ಮಕವಾಗಿ ಕಡಿಮೆ ವೆಚ್ಚವು ಈ ನಾವೀನ್ಯತೆಯ ಕೊರತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಪೇಟಿಎಂ, ಓಲಾ, ಫ್ಲಿಪ್ ಕಾರ್ಟ್, ಜೊಹೋ ಮತ್ತು ಕಾರ್ ದೆಖೋ, ಎಂಎಸ್ ವೈಪ್, ಲೆನ್ಸ್ ಕಾರ್ಟ್ ಮತ್ತು ಇತರ ಭಾರತೀಯ ಯುನಿಕಾರ್ನ್ ಸ್ಟಾರ್ಟ್ ಅಪ್ ಗಳು ಮೂಲದಲ್ಲಿ ಜಾಗತಿಕ ಕಲ್ಪನೆಗಳಾಗಿದ್ದು, ಇವನ್ನೇ ಸ್ಥಳೀಯ ಅಗತ್ಯಗಳನ್ನು ಪೂರೈಸಲು ಅನುಕರಿಸಲಾಗಿದೆ ಎಂಬ ಅಂಶವು ಗುಣಮಟ್ಟದ ಆರ್ &ಡಿ ಕೊರತೆಗೆ ಸಾಕ್ಷಿಯಾಗಿದೆ.

ಕೆಲ ವರ್ಷಗಳ ಹಿಂದೆ ತಮ್ಮ ಭಾರತೀಯ ಸಹವರ್ತಿಗಳಿಗಿಂತ ಮೊದಲೇ ಸ್ಥಾಪಿಸಲಾದ ಯಶಸ್ವಿ ವಿದೇಶಿ ಸ್ಟಾರ್ಟ್ ಅಪ್ ಗಳು ಭಾರತೀಯ ಸ್ಟಾರ್ಟ್ ಅಪ್ ಗಳಿಗೆ ನೀಲನಕ್ಷೆಗಳಾಗಿವೆ. ದೇಶದ 763 ಜಿಲ್ಲೆಗಳಲ್ಲಿ 1,12,718 ಕ್ಕೂ ಹೆಚ್ಚು ಮಾನ್ಯತೆ ಪಡೆದ ಸ್ಟಾರ್ಟ್ ಅಪ್ ಗಳೊಂದಿಗೆ ಭಾರತವು ಜಾಗತಿಕವಾಗಿ ಸ್ಟಾರ್ಟ್ ಅಪ್ ಗಳಿಗೆ 3 ನೇ ಅತಿದೊಡ್ಡ ಪರಿಸರ ವ್ಯವಸ್ಥೆಯಾಗಿ ಸ್ಟಾರ್ಟ್ ಅಪ್ ಕೇಂದ್ರವಾಗಿ ಮಾರ್ಪಟ್ಟಿದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಮೂಲಸೌಕರ್ಯದಲ್ಲಿನ ಈ ಮಿತಿಗಳು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ರಂಗದಲ್ಲಿ ಸರ್ಕಾರದ ನಿಷ್ಕ್ರಿಯತೆಯನ್ನು ದಾಟುವುದು ಭಾರತೀಯ ನವೋದ್ಯಮ ಪರಿಸರ ವ್ಯವಸ್ಥೆಗೆ ಸವಾಲಾಗಿದೆ.

ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಅಭಿವೃದ್ಧಿ ಹೊಂದಿದ ದೇಶಗಳಾದ ಯುಎಸ್ಎ, ಸ್ವೀಡನ್ ಮತ್ತು ಸ್ವಿಟ್ಜರ್ಲೆಂಡ್ ಕ್ರಮವಾಗಿ 2.9%, 3.2% ಮತ್ತು 3.4% ಖರ್ಚು ಮಾಡುತ್ತವೆ. ಇಸ್ರೇಲ್ ತನ್ನ ಜಿಡಿಪಿಯ ಸುಮಾರು 4.5% ಅನ್ನು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಖರ್ಚು ಮಾಡುತ್ತದೆ. ಇದು ವಿಶ್ವದಲ್ಲೇ ಅತಿ ಹೆಚ್ಚು.

ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿನ ಹೂಡಿಕೆಗಳು ಫಲಿತಾಂಶ ನೀಡಲು ತುಂಬಾ ಸಮಯ ತೆಗೆದುಕೊಳ್ಳುತ್ತವೆ ಎಂಬುದು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಸಂಶೋಧನೆ ಮತ್ತು ಅಭಿವೃದ್ಧಿಗೆ ಕಡಿಮೆ ವೆಚ್ಚ ಮಾಡುವುದಕ್ಕೆ ಮುಖ್ಯ ಕಾರಣವಾಗಿದೆ. ಭಾರತದಂತಹ ದೇಶಗಳು ಹಸಿವು ಸೂಚ್ಯಂಕ, ರೋಗ ನಿಯಂತ್ರಣ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸುವಂತಹ ದೊಡ್ಡ ವಿಷಯಗಳ ಮೇಲೆ ಗಮನ ಹರಿಸುತ್ತವೆ ಮತ್ತು ಅಧಿಕಾರಿಗಳು ಅವುಗಳನ್ನು ನಿಭಾಯಿಸಲು ಸಂಪನ್ಮೂಲಗಳನ್ನು ಬೇರೆಡೆಗೆ ತಿರುಗಿಸುತ್ತಾರೆ. ಆದಾಗ್ಯೂ, ಈ ಕಾಳಜಿಗಳನ್ನು ಅಡಚಣೆಯಾಗಿ ನೋಡದೆ, ಆರ್ &ಡಿ ವ್ಯಾಪ್ತಿಯನ್ನು ವಿಸ್ತರಿಸುವ ಅವಕಾಶವಾಗಿ ನೋಡಬೇಕು ಎಂದು ವಾದಿಸಬಹುದು.

ಜಿಇಆರ್​ಡಿಗೆ ಕಡಿಮೆ ಖರ್ಚು ಮಾಡುವ ದೇಶಗಳು ದೀರ್ಘಾವಧಿಯಲ್ಲಿ ತಮ್ಮ ಮಾನವ ಬಂಡವಾಳವನ್ನು ಉಳಿಸಿಕೊಳ್ಳಲು ವಿಫಲವಾಗುತ್ತವೆ ಎಂಬುದನ್ನು ಅಂಕಿ ಅಂಶಗಳು ತೋರಿಸಿವೆ. ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲಿನ ಕಡಿಮೆ ವೆಚ್ಚ ಮತ್ತು ಕಡಿಮೆ ನವೀನ ಅವಕಾಶಗಳು ಜನರು ಉತ್ತಮ ಅವಕಾಶಗಳಿಗಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶ / ರಾಜ್ಯ / ದೇಶಕ್ಕೆ ಹೋಗಲು ಕಾರಣವಾಗಬಹುದು. ಈ ವಿದ್ಯಮಾನವನ್ನು ಬ್ರೇನ್ ಡ್ರೇನ್ ಅಥವಾ ಪ್ರತಿಭಾ ಪಲಾಯನ ಎಂದು ಕರೆಯಲಾಗುತ್ತದೆ. ಇದು ರಾಜ್ಯದ ಸ್ಪರ್ಧಾತ್ಮಕತೆಯನ್ನು ಕಡಿಮೆ ಮಾಡುತ್ತದೆ ಹಾಗೂ ದೇಶದ ಒಟ್ಟಾರೆ ಆರ್ಥಿಕತೆಯ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ. ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸಲು, ಭಾರತದ ಜಿಇಆರ್​ಡಿ ಕನಿಷ್ಠ 2% ಅನ್ನು ಮುಟ್ಟಲು ಗಣನೀಯ ಸುಧಾರಣೆಯ ಅಗತ್ಯವಿದೆ.

ಭಾರತದ ಜಿಇಆರ್​ಡಿ ತಲಾ 43 ಡಾಲರ್ ಆಗಿದ್ದು, ಇದು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ಭಾರತದ ಬ್ರಿಕ್ಸ್ ಮತ್ತು ಏಷ್ಯಾದ ಸಹವರ್ತಿಗಳಾದ ರಷ್ಯಾ (285), ಬ್ರೆಜಿಲ್ (173) ಮತ್ತು ಮಲೇಷ್ಯಾ (293) ಅಂತಹ ಕಡಿಮೆ ಕೊಡುಗೆಯೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.

ತೀರಾ ಇತ್ತೀಚೆಗೆ, ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಅವರು ಖಾಸಗಿ ಕಂಪನಿಗಳು ಮತ್ತು ಸಂಸ್ಥೆಗಳಿಂದ ಹೆಚ್ಚಿನ ಕೊಡುಗೆಯೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಖರ್ಚು ಮಾಡುವ ಅಗತ್ಯವನ್ನು ಪ್ರತಿಪಾದಿಸಿದ್ದರು. "ನಾವು ಸಂಶೋಧನೆಯಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡಬೇಕಾಗಿದೆ. ಸಂಶೋಧನಾ ವೆಚ್ಚವು ಭಾರತದ ಜಿಡಿಪಿಯ ಶೇ 0.7 ರಿಂದ ಶೇ 3ಕ್ಕೆ ತಲುಪಬೇಕು. ಇದರಲ್ಲಿ, ಖಾಸಗಿ ಕೊಡುಗೆ ಪ್ರಸ್ತುತ 0.1% ರಿಂದ ಕನಿಷ್ಠ 1.5% ಕ್ಕೆ ಏರಬೇಕು." ಎಂದು ಅವರು ಹೇಳಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ)ಯು 2020 ರಲ್ಲಿ ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ವೆಚ್ಚದ ಬಗ್ಗೆ ಈ ಹಿಂದೆ ಕೊನೆಯದಾಗಿ ಸಮಗ್ರ ವರದಿಯನ್ನು ಪ್ರಕಟಿಸಿತ್ತು. ಸಂಶೋಧನೆ ಮತ್ತು ಅಭಿವೃದ್ಧಿಗಾಗಿ 2017-18ರಲ್ಲಿ ಹಂಚಿಕೆಯಾದ ನಿಧಿಯಲ್ಲಿ, ಶೇಕಡಾ 61.4 ರಷ್ಟು ಮೊತ್ತವು ಡಿಆರ್​ಡಿಒ (31.6 ಶೇಕಡಾ), ಬಾಹ್ಯಾಕಾಶ ಇಲಾಖೆಗಳು (19 ಶೇಕಡಾ) ಮತ್ತು ಪರಮಾಣು ಶಕ್ತಿ (10.8 ಶೇಕಡಾ) ಗೆ ಹಂಚಿಕೆಯಾಗಿದೆ.

2011-12 ಮತ್ತು 2017-18ರ ನಡುವೆ ವಿಶ್ವವಿದ್ಯಾಲಯಗಳು ಅಥವಾ ಸಂಸ್ಥೆಗಳ ಸಂಖ್ಯೆ 752 ರಿಂದ 1,016 ಕ್ಕೆ ಮತ್ತು ವಾರ್ಷಿಕವಾಗಿ ನೀಡಲಾಗುವ ಡಾಕ್ಟರೇಟ್ ಪದವಿಗಳು 10,011 ರಿಂದ 24,474 ಕ್ಕೆ ಏರಿದೆ. ವಿಶ್ವವಿದ್ಯಾಲಯಗಳು ಅಥವಾ ಸಂಸ್ಥೆಗಳ ಸಂಖ್ಯೆ ಮತ್ತು ಡಾಕ್ಟರೇಟ್ ವಿದ್ಯಾರ್ಥಿಗಳ ಸಂಖ್ಯೆಯಲ್ಲಿನ ಹೆಚ್ಚಳವು ಧನಸಹಾಯದಲ್ಲಿನ ಅಲ್ಪ ಹೆಚ್ಚಳಕ್ಕೆ ಅನುಗುಣವಾಗಿಲ್ಲ. ಇದು ಡಾಕ್ಟರೇಟ್ ಮಟ್ಟದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸದ ಗುಣಮಟ್ಟ ಹದಗೆಡಲು ಕಾರಣವಾಗುತ್ತದೆ. ಡಿಎಸ್​ಟಿ, ಡಿಬಿಟಿ, ಐಸಿಎಂಆರ್ ಮತ್ತು ಸಿಎಸ್ಐಆರ್ ಅನ್ನು ತಮ್ಮ ಬಾಹ್ಯ ಬೆಂಬಲ ವ್ಯವಸ್ಥೆಯಡಿ ಅವಲಂಬಿಸಿರುವ ವಿಶ್ವವಿದ್ಯಾಲಯಗಳಲ್ಲಿ ಪರಿಸ್ಥಿತಿ ವಿಶೇಷವಾಗಿ ಕಳವಳಕಾರಿಯಾಗಿದೆ.

ಭಾರತದ ಶಿಕ್ಷಣ ಸಂಸ್ಥೆಗಳಲ್ಲಿ, ವಿಶೇಷವಾಗಿ ಉನ್ನತ ಶಿಕ್ಷಣದಲ್ಲಿ ತೊಡಗಿರುವ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆ ನಿರ್ಣಾಯಕವಾಗಿದೆ. ಇತಿಹಾಸದುದ್ದಕ್ಕೂ ಉನ್ನತ ಶಿಕ್ಷಣ ಮಟ್ಟದಲ್ಲಿ ಉತ್ತಮ ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಯಗಳು ಸಂಶೋಧನೆ ಮತ್ತು ಜ್ಞಾನ ಸೃಷ್ಟಿಯ ಬಲವಾದ ಸಂಸ್ಕೃತಿ ಇರುವ ಪರಿಸರದಲ್ಲಿ ಸಂಭವಿಸುತ್ತದೆ ಎಂಬುದನ್ನು ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಪುರಾವೆಗಳು ತೋರಿಸುತ್ತವೆ.

ನವೀನ ಪರಿಹಾರಗಳ ಭಾರಿ ಅಗತ್ಯವಿದ್ದರೂ, ವಿಶೇಷವಾಗಿ ಬಡತನವನ್ನು ನಿವಾರಿಸುವ ಮತ್ತು ಒಳಗೊಳ್ಳುವಿಕೆಯ ಮಾನದಂಡಗಳನ್ನು ಸುಧಾರಿಸುವ ಆವಿಷ್ಕಾರಗಳು ಪ್ರವರ್ಧಮಾನಕ್ಕೆ ಬರಲು ಭಾರತವು ಮೂಲಸೌಕರ್ಯ-ಸಿದ್ಧವಾಗಿರಬೇಕು. ಭಾರತೀಯ ಮಾರುಕಟ್ಟೆಯ ಪ್ರಮಾಣ ಮತ್ತು ಅದರ ಸಂಪನ್ಮೂಲ ನಿರ್ಬಂಧಗಳನ್ನು ಗಮನಿಸಿದರೆ, ಕಡಿಮೆ ವೆಚ್ಚದ, ಹೆಚ್ಚಿನ ಪರಿಣಾಮ ಬೀರುವ ಪರಿಹಾರಗಳು ಸಮಯದ ಅಗತ್ಯವಾಗಿದೆ. ಭಾರತೀಯ ಆರ್ಥಿಕತೆಯನ್ನು ತನ್ನ ಮಾರುಕಟ್ಟೆ ಪೂರ್ಣ ಸಾಮರ್ಥ್ಯವನ್ನು ತಲುಪಲು ಸಿದ್ಧಗೊಳಿಸುವಲ್ಲಿ ಸರ್ಕಾರದಿಂದ ಭಾರಿ ಉತ್ತೇಜನದ ಅಗತ್ಯವಿದೆ.

(ಲೇಖನ: ಪೊಟ್ಲೂರಿ ವೆಂಕಟೇಶ್ವರ ರಾವ್)

ಇದನ್ನೂ ಓದಿ: ಚಂದ್ರನತ್ತ ಮತ್ತೆ ನಾಸಾ ಚಿತ್ತ: ವ್ಯಾಲೆಂಟೈನ್ಸ್​ ದಿನ ನಭಕ್ಕೆ ಚಿಮ್ಮಲಿದೆ ಐಎಂ-1 ಲ್ಯಾಂಡರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.