ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ವಿಜಯ ಸಂಕಲ್ಪ ಸಮಾವೇಶದ ಸ್ಥಳಕ್ಕೆ ಇಂದು ಬೆಳಗ್ಗೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಮತ್ತು ಅವರ ಪತ್ನಿ ಆಗಮಿಸಿ, ಅಲ್ಲಿ ಬಿದ್ದಿದ್ದ ಕಸವನ್ನು ಸ್ವಚ್ಛಗೊಳಿಸಿ ಗಮನ ಸೆಳೆದರು.
![ಮೈದಾನ ಸ್ವಚ್ಛಗೊಳಿಸಿದ ಯದುವೀರ್ ದಂಪತಿ](https://etvbharatimages.akamaized.net/etvbharat/prod-images/15-04-2024/ka-mys02-15-04-2024-yaduveer-news-7208092_15042024115335_1504f_1713162215_190.jpg)
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮೈಸೂರು ಕೊಡಗು ಅಭ್ಯರ್ಥಿ ಯದುವೀರ್ ಒಡೆಯರ್ ಸೇರಿದಂತೆ ಬಿಜೆಪಿ, ಜೆಡಿಎಸ್ ಪ್ರಮುಖರು ಭಾಗವಹಿಸಿದ್ದರು. ಕಾರ್ಯಕ್ರಮ ನಡೆದ ಹಿನ್ನೆಲೆಯಲ್ಲಿ ಮೈದಾನದಲ್ಲಿ ನೀರಿನ ಬಾಟಲ್, ಕಸ ಸೇರಿದಂತೆ ಅನುಪಯುಕ್ತ ವಸ್ತುಗಳು ಬಿದ್ದಿದ್ದವು. ಅಂತೆಯೇ ಇಂದು ಬೆಳಗ್ಗೆ ಯದುವೀರ್ ಒಡೆಯರ್ ಅವರು ತಮ್ಮ ಪತ್ನಿ ತ್ರಿಷಿಕಾ ಒಡೆಯರ್ ಜೊತೆ ಕಾರ್ಯಕ್ರಮ ನಡೆದ ಮೈದಾನಕ್ಕೆ ಆಗಮಿಸಿ, ಸ್ವಚ್ಛತಾ ಕಾರ್ಯ ಕೈಗೊಂಡರು. ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು ಕೂಡ ಈ ವೇಳೆ ಸಾಥ್ ನೀಡಿದರು.
![ಮೈದಾನ ಸ್ವಚ್ಛಗೊಳಿಸಿದ ಯದುವೀರ್ ದಂಪತಿ](https://etvbharatimages.akamaized.net/etvbharat/prod-images/15-04-2024/ka-mys02-15-04-2024-yaduveer-news-7208092_15042024115335_1504f_1713162215_998.jpg)