ETV Bharat / state

ಉಡುಪಿಯಲ್ಲಿ ಪ್ರತ್ಯೇಕ ಘಟನೆ: ಕಾರು ಬೆಂಕಿಗಾಹುತಿ, ಬಸ್​ನಿಂದ ಜಿಗಿದು ಪ್ರಾಣ ಉಳಿಸಿಕೊಂಡ ಪ್ರಯಾಣಿಕರು - Car Caught Fire

ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಎರಡು ಪ್ರತ್ಯೇಕ ಘಟನೆ ಸಂಭವಿಸಿದ್ದು, ಪ್ರಯಾಣಿಕರು ಮತ್ತು ವಾಹನದ ಮಾಲೀಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

author img

By ETV Bharat Karnataka Team

Published : Jun 28, 2024, 1:10 PM IST

CAR PARKED  CAR FIRE ACCIDENT  UDUPI  BUS ACCIDENT IN UDUPI
ಕಾರು ಬೆಂಕಿಗಾಹುತಿ, ಬಸ್​ನಿಂದ ಜಿಗಿದು ಪ್ರಾಣ ಉಳಿಸಿಕೊಂಡ ಪ್ರಯಾಣಿಕರು (ETV Bharat)
ಕಾರು ಬೆಂಕಿಗಾಹುತಿಯ ದೃಶ್ಯ (ETV Bharat)

ಉಡುಪಿ: ತಡರಾತ್ರಿ ಕಾರೊಂದು ಬೆಂಕಿಯಿಂದ ಹೊತ್ತಿ‌ ಉರಿದ ಘಟನೆ ಮಣಿಪಾಲದ ಬಬ್ಬುಸ್ವಾಮಿ ದೈವಸ್ಥಾನದ ಎದುರು ನಡೆದಿದೆ. ರಸ್ತೆ ಬದಿ ನಿಲ್ಲಿಸಿದ್ದ ರಿಟ್ಜ್ ಕಾರು ಬೆಂಕಿಗಾಹುತಿಯಾಗಿದೆ. ಸಂಬಂಧಪಟ್ಟ ವಾಹನದ ಮಾಲಿಕ ತನ್ನ ಕಾರನ್ನು ರಸ್ತೆ ಬದಿ ನಿಲ್ಲಿಸಿ ಮಲಗಿದ್ದರು. ಕಾರಿನ ಬಾನೆಟ್​ನಲ್ಲಿ ಹೊಗೆಯನ್ನ ಕಂಡು ಕಾರು ಮಾಲಿಕ ಹೊರ ಬಂದಿದ್ದಾರೆ. ಆ ವೇಳೆಯಲ್ಲಿಯೇ ಕಾರಿನ ಒಳಗಡೆ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿಯ ಕೆನ್ನಾಲೆಗೆಯಿಂದ ಕಾರು ಹೊತ್ತಿ ಉರಿದು ಸಂಪೂರ್ಣ ಸುಟ್ಟುಹೋಗಿದೆ. ಕಾರು ಮಾಲೀಕನ ಮಾಹಿತಿ ಮೇಲೆ ಸ್ಥಳಕ್ಕಾಗಮಿಸಿದ ಉಡುಪಿಯ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.

ಬಸ್​ನಿಂದ ಜಿಗಿದು ಪ್ರಾಣ ಉಳಿಸಿಕೊಂಡ ಪ್ರಯಾಣಿಕರು: ಬಸ್ ಚಲಾಯಿಸುತ್ತಿದ್ದ ವೇಳೆ ಏಕಾಏಕಿ ಚಾಲಕ ಅಸ್ವಸ್ಥಗೊಂಡ ಪರಿಣಾಮ ಬಸ್​​​ ಹಿಂದಕ್ಕೆ ಚಲಿಸಿದೆ. ಈ ವೇಳೆ, ಬಸ್​ ರಸ್ತೆ ಬದಿಯ ಮೋರಿ ತಾಗಿ ನಿಂತ ಪರಿಣಾಮ ಸಂಭಾವ್ಯ ಅಪಾಯದಿಂದ ಪ್ರಯಾಣಿಕರು ಪಾರಾದ ಘಟನೆ ಮಣಿಪಾಲ ಸಮೀಪದ ಕೆಳ ಪರ್ಕಳದಲ್ಲಿ ಗುರುವಾರ ಸಂಜೆ ನಡೆದಿದೆ.

ಉಡುಪಿಯಿಂದ ಭೈರಂಜೆ ಕಡೆಗೆ ಚಲಿಸುತ್ತಿದ್ದ ಸಿಟಿ ಬಸ್ ಕೆಳ ಪರ್ಕಳ ಬಳಿ ತಲುಪಿದ ವೇಳೆ ಚಾಲಕನಿಗೆ ಆರೋಗ್ಯದ ಸಮಸ್ಯೆ ಎದುರಾಗಿದೆ. ಈ ವೇಳೆ ಚಾಲಕನ ಕೈಯಿಂದ ಸ್ಟೇರಿಂಗ್ ತಪ್ಪಿ ಹಿಂಬಂದಿಗೆ ಚಲಿಸಿ ರಸ್ತೆ ಪಕ್ಕದ ಮೋರಿ ಬಳಿ ನಿಂತಿದೆ. ಈ ವೇಳೆ, ಬಸ್​​​​​ನಲ್ಲಿದ್ದ ಕೆಲವು ಪ್ರಯಾಣಿಕರು ಜಿಗಿದು ತಮ್ಮ ಪ್ರಾಣವನ್ನು ರಕ್ಷಿಸಿಕೊಂಡಿದ್ದಾರೆ. ಅಸ್ವಸ್ಥಗೊಂಡ ಚಾಲಕ ಕೃಷ್ಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯರ ಸಹಕಾರದಿಂದ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ವೇಳೆ ಬಸ್​​​ನ ಹಿಂದೆ ವಾಹನ ಸವಾರರು ಇಲ್ಲದೇ ಇದ್ದುದರಿಂದ ಹಾಗೂ ಬಸ್​ ನಿಧಾನಗತಿಯಲ್ಲಿ ಚಲಿಸುತ್ತಿದ್ದ ಪರಿಣಾಮ ಸಂಭಾವ್ಯ ಅಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ. ಸ್ಥಳಕ್ಕೆ ಮಣಿಪಾಲ ಪೊಲೀಸರು ಭೇಟಿ ನೀಡಿ ಕ್ರೇನ್ ಮೂಲಕ ಬಸ್​​ ಮೇಲಕ್ಕೆ ಎತ್ತಿ ಸಂಚಾರ ವ್ಯವಸ್ಥೆ ಸುಗಮಗೊಳಿಸಿದರು

ಓದಿ: ಹಾವೇರಿ ಬಳಿ ಘನಘೋರ ರಸ್ತೆ ಅಪಘಾತ: ಮೂರು ಕುಟುಂಬಗಳ 13 ಮಂದಿ ಸಾವು, ಭೀಕರತೆ ಬಿಚ್ಚಿಟ್ಟ ಅಧಿಕಾರಿಗಳು - 13 Died In Haveri Accident

ಕಾರು ಬೆಂಕಿಗಾಹುತಿಯ ದೃಶ್ಯ (ETV Bharat)

ಉಡುಪಿ: ತಡರಾತ್ರಿ ಕಾರೊಂದು ಬೆಂಕಿಯಿಂದ ಹೊತ್ತಿ‌ ಉರಿದ ಘಟನೆ ಮಣಿಪಾಲದ ಬಬ್ಬುಸ್ವಾಮಿ ದೈವಸ್ಥಾನದ ಎದುರು ನಡೆದಿದೆ. ರಸ್ತೆ ಬದಿ ನಿಲ್ಲಿಸಿದ್ದ ರಿಟ್ಜ್ ಕಾರು ಬೆಂಕಿಗಾಹುತಿಯಾಗಿದೆ. ಸಂಬಂಧಪಟ್ಟ ವಾಹನದ ಮಾಲಿಕ ತನ್ನ ಕಾರನ್ನು ರಸ್ತೆ ಬದಿ ನಿಲ್ಲಿಸಿ ಮಲಗಿದ್ದರು. ಕಾರಿನ ಬಾನೆಟ್​ನಲ್ಲಿ ಹೊಗೆಯನ್ನ ಕಂಡು ಕಾರು ಮಾಲಿಕ ಹೊರ ಬಂದಿದ್ದಾರೆ. ಆ ವೇಳೆಯಲ್ಲಿಯೇ ಕಾರಿನ ಒಳಗಡೆ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿಯ ಕೆನ್ನಾಲೆಗೆಯಿಂದ ಕಾರು ಹೊತ್ತಿ ಉರಿದು ಸಂಪೂರ್ಣ ಸುಟ್ಟುಹೋಗಿದೆ. ಕಾರು ಮಾಲೀಕನ ಮಾಹಿತಿ ಮೇಲೆ ಸ್ಥಳಕ್ಕಾಗಮಿಸಿದ ಉಡುಪಿಯ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.

ಬಸ್​ನಿಂದ ಜಿಗಿದು ಪ್ರಾಣ ಉಳಿಸಿಕೊಂಡ ಪ್ರಯಾಣಿಕರು: ಬಸ್ ಚಲಾಯಿಸುತ್ತಿದ್ದ ವೇಳೆ ಏಕಾಏಕಿ ಚಾಲಕ ಅಸ್ವಸ್ಥಗೊಂಡ ಪರಿಣಾಮ ಬಸ್​​​ ಹಿಂದಕ್ಕೆ ಚಲಿಸಿದೆ. ಈ ವೇಳೆ, ಬಸ್​ ರಸ್ತೆ ಬದಿಯ ಮೋರಿ ತಾಗಿ ನಿಂತ ಪರಿಣಾಮ ಸಂಭಾವ್ಯ ಅಪಾಯದಿಂದ ಪ್ರಯಾಣಿಕರು ಪಾರಾದ ಘಟನೆ ಮಣಿಪಾಲ ಸಮೀಪದ ಕೆಳ ಪರ್ಕಳದಲ್ಲಿ ಗುರುವಾರ ಸಂಜೆ ನಡೆದಿದೆ.

ಉಡುಪಿಯಿಂದ ಭೈರಂಜೆ ಕಡೆಗೆ ಚಲಿಸುತ್ತಿದ್ದ ಸಿಟಿ ಬಸ್ ಕೆಳ ಪರ್ಕಳ ಬಳಿ ತಲುಪಿದ ವೇಳೆ ಚಾಲಕನಿಗೆ ಆರೋಗ್ಯದ ಸಮಸ್ಯೆ ಎದುರಾಗಿದೆ. ಈ ವೇಳೆ ಚಾಲಕನ ಕೈಯಿಂದ ಸ್ಟೇರಿಂಗ್ ತಪ್ಪಿ ಹಿಂಬಂದಿಗೆ ಚಲಿಸಿ ರಸ್ತೆ ಪಕ್ಕದ ಮೋರಿ ಬಳಿ ನಿಂತಿದೆ. ಈ ವೇಳೆ, ಬಸ್​​​​​ನಲ್ಲಿದ್ದ ಕೆಲವು ಪ್ರಯಾಣಿಕರು ಜಿಗಿದು ತಮ್ಮ ಪ್ರಾಣವನ್ನು ರಕ್ಷಿಸಿಕೊಂಡಿದ್ದಾರೆ. ಅಸ್ವಸ್ಥಗೊಂಡ ಚಾಲಕ ಕೃಷ್ಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯರ ಸಹಕಾರದಿಂದ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ವೇಳೆ ಬಸ್​​​ನ ಹಿಂದೆ ವಾಹನ ಸವಾರರು ಇಲ್ಲದೇ ಇದ್ದುದರಿಂದ ಹಾಗೂ ಬಸ್​ ನಿಧಾನಗತಿಯಲ್ಲಿ ಚಲಿಸುತ್ತಿದ್ದ ಪರಿಣಾಮ ಸಂಭಾವ್ಯ ಅಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ. ಸ್ಥಳಕ್ಕೆ ಮಣಿಪಾಲ ಪೊಲೀಸರು ಭೇಟಿ ನೀಡಿ ಕ್ರೇನ್ ಮೂಲಕ ಬಸ್​​ ಮೇಲಕ್ಕೆ ಎತ್ತಿ ಸಂಚಾರ ವ್ಯವಸ್ಥೆ ಸುಗಮಗೊಳಿಸಿದರು

ಓದಿ: ಹಾವೇರಿ ಬಳಿ ಘನಘೋರ ರಸ್ತೆ ಅಪಘಾತ: ಮೂರು ಕುಟುಂಬಗಳ 13 ಮಂದಿ ಸಾವು, ಭೀಕರತೆ ಬಿಚ್ಚಿಟ್ಟ ಅಧಿಕಾರಿಗಳು - 13 Died In Haveri Accident

ETV Bharat Logo

Copyright © 2024 Ushodaya Enterprises Pvt. Ltd., All Rights Reserved.