ETV Bharat / state

ರಾಮೋಜಿ ರಾವ್ ಅವರಿಗೆ ಈಟಿವಿ ಭಾರತ​ ವರದಿಗಾರರಿಂದ ಶ್ರದ್ಧಾಂಜಲಿ: ಅನ್ನದಾತನ ಸಾಧನೆ ಸ್ಮರಿಸಿ ನುಡಿ ನಮನ - Tribute To Ramoji Rao

author img

By ETV Bharat Karnataka Team

Published : Jun 20, 2024, 4:55 PM IST

Updated : Jun 20, 2024, 9:33 PM IST

ಮಾಧ್ಯಮ ಲೋಕದ ದಿಗ್ಗಜ ಮತ್ತು ರಾಮೋಜಿ ಗ್ರೂಪ್​ ಮುಖ್ಯಸ್ಥ ದಿ.ರಾಮೋಜಿ ರಾವ್‌ ಅವರಿಗೆ ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳ ಈಟಿವಿ ಭಾರತ್ ವರದಿಗಾರರು ನುಡಿ ನಮನ ಸಲ್ಲಿಸಿದರು.

ದಿ.ರಾಮೋಜಿ ರಾವ್​ರಿಗೆ ನುಡಿ ನಮನ
ದಿ.ರಾಮೋಜಿ ರಾವ್​ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ (ETV Bharat)
ಬೆಂಗಳೂರಿನಲ್ಲಿ ರಾಮೋಜಿ ರಾವ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ (ETV Bharat)

ಬೆಂಗಳೂರು: ಮಾಧ್ಯಮ ಲೋಕದ ಭೀಷ್ಮ, ರಾಮೋಜಿ ಗ್ರೂಪ್ ಮುಖ್ಯಸ್ಥ ದಿ.ರಾಮೋಜಿ ರಾವ್ ಅವರಿಗೆ ಈಟಿವಿ ಭಾರತದ ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳ ವರದಿಗಾರರು ಇಂದು ಶ್ರದ್ಧಾಂಜಲಿ ಸಲ್ಲಿಸಿದರು.

ಬೆಂಗಳೂರಿನ ಮಾಧವನಗರದಲ್ಲಿರುವ ಈಟಿವಿ ಭಾರತ ಕಚೇರಿಯಲ್ಲಿ ನುಡಿ ನಮನ ಕಾರ್ಯಕ್ರಮದಲ್ಲಿ ಬೆಂಗಳೂರು ಬ್ಯೂರೋ ಮುಖ್ಯಸ್ಥ ಸೋಮಶೇಖರ್ ಕವಚೂರು ಸೇರಿದಂತೆ ಈಟಿವಿ ಭಾರತದ ಬೆಂಗಳೂರು ವರದಿಗಾರರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಹಾಗೂ ಆನೇಕಲ್​​ನ ವರದಿಗಾರರು, ರಾಮೋಜಿ ರಾವ್ ಅವರ ಭಾವಚಿತ್ರಕ್ಕೆ ಪುಷ್ಪನಮನದ ಮೂಲಕ ಅಶ್ರುತರ್ಪಣ ಸಲ್ಲಿಸಿದರು. ಬಳಿಕ ಎರಡು ನಿಮಿಷಗಳ ಕಾಲ ಮೌನಾಚರಣೆ ನಡೆಯಿತು. ರಾಮೋಜಿ ರಾವ್‌ ಅವರು ಬೆಳೆದು ಬಂದ ದಾರಿ ಹಾಗೂ ಅವರು ನೀಡಿರುವ ಸಂದೇಶದ ಕಿರುಚಿತ್ರ ಪ್ರದರ್ಶಿಸಲಾಯಿತು. ಈ ವೇಳೆ ಬ್ಯೂರೊ ಮುಖ್ಯಸ್ಥ ಸೋಮಶೇಖರ್ ಕವಚೂರು, ರಾಮೋಜಿ ರಾವ್ ಸಿಬ್ಬಂದಿಗೆ ಬರೆದಿದ್ದ ಬದ್ಧತೆಯ ವಿಲ್ ಪತ್ರ ಓದಿದರು.

"ಆಂಧ್ರಪ್ರದೇಶದ ಒಂದು ಸಣ್ಣ ಹಳ್ಳಿಯ ರೈತ ಕುಟುಂಬದಲ್ಲಿ ಜನಿಸಿದ ರಾಮೋಜಿ ರಾವ್ ಅವರ ಸಾಧನೆ ಅಸಾಮಾನ್ಯವಾದದ್ದು. ಕಷ್ಟಪಟ್ಟು ಬೆಳೆದ ಅವರು ಮಾಧ್ಯಮ ಸಾಮ್ರಾಜ್ಯವನ್ನೇ ಕಟ್ಟಿದರು. ಶಿಸ್ತಿಗೆ ಪ್ರಾಮುಖ್ಯತೆ ಕೊಡುತ್ತಿದ್ದರು. ತಮ್ಮದೇ ಆದ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದರು. ಯಾವುದೇ ಕೆಲಸವನ್ನಾಗಲೀ ವ್ಯವಸ್ಥಿತವಾಗಿ ಮಾಡುತ್ತಿದ್ದರು. ಅವರ ನಡೆ, ನುಡಿ, ವ್ಯಕ್ತಿತ್ವ ನಮಗೆಲ್ಲರಿಗೂ ಮಾದರಿ. ದೇಶಾದ್ಯಂತ ತಮ್ಮ ಮಾಧ್ಯಮವನ್ನು ವಿಸ್ತರಿಸಿ ಸೈ ಎನಿಸಿಕೊಂಡ ರಾಮೋಜಿ ರಾವ್ ಅವರ ಜೀವನದ ಕಥೆಯನ್ನು ಸಿನಿಮಾ ಮೂಲಕ ಹೊರಬಂದರೆ ಮುಂದಿನ ಪೀಳಿಗೆಗೂ ರಾವ್ ಅವರ ಜೀವನ ಸಾಧನೆ ಪ್ರೇರಣೆಯಾಗಲಿದೆ" ಎಂದು ಸೋಮಶೇಖರ್ ಕವಚೂರು ಬಣ್ಣಿಸಿದರು.

ಈಟಿವಿ ಭಾರತ ಬೆಂಗಳೂರಿನ ಹಿರಿಯ ವರದಿಗಾರರಾದ ಮುನೇಗೌಡ, ವೆಂಕಟ್ ಪೊಳಲಿ, ಪ್ರಶಾಂತ್ ಕುಮಾರ್, ರವಿಕುಮಾರ್, ರಫೀಕ್, ಕಂಟೆಂಟ್ ಎಡಿಟರ್‌ಗಳಾದ ಸತೀಶ್, ಸೀಮಾ, ಮೈಸೂರು ಜಿಲ್ಲೆಯ ಹಿರಿಯ ವರದಿಗಾರರಾದ ಮಹೇಶ್, ಶಿವಮೊಗ್ಗ ಜಿಲ್ಲೆಯ ಕಿರಣ್ ಕುಮಾರ್, ಚಾಮರಾಜನಗರ ಜಿಲ್ಲೆಯ ಸುರೇಂದ್ರ, ಮಂಡ್ಯ ಜಿಲ್ಲೆಯ ಮಧು, ದೇವನಹಳ್ಳಿಯ ಗುರುಪ್ರಸಾದ್, ಆನೇಕಲ್ ವರದಿಗಾರ ಮುನಿರಾಜು ಸೇರಿದಂತೆ ಇತರ ಹಿರಿಯ ಪತ್ರಕರ್ತರು ರಾಮೋಜಿ ರಾವ್ ಸಾಧನೆಯನ್ನು ಸ್ಮರಿಸಿದರು.

ಉತ್ತರ ಕರ್ನಾಟಕ ವರದಿಗಾರರಿಂದ ನುಡಿ ನಮನ: ರಾಮೋಜಿ ರಾವ್ ಅವರಿಗೆ ಉತ್ತರ ಕರ್ನಾಟಕ ಈಟಿವಿ ಭಾರತ​ ವರದಿಗಾರರು ಮತ್ತು ಮಾರ್ಗದರ್ಶಿ ಚಿಟ್ಸ್ ಫಂಡ್ ಕೇಂದ್ರದ ವ್ಯವಸ್ಥಾಪಕರು ಶ್ರದ್ಧಾಂಜಲಿ ಸಲ್ಲಿಸಿದರು.

ರಾಯಚೂರಿನ ಮಾರ್ಗದರ್ಶಿ ಚಿಟ್ ಫಂಡ್‌ ಕಚೇರಿಯಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ (ETV Bharat)

ರಾಯಚೂರು ನಗರದ ಗೋ ಶಾಲಾ ರಸ್ತೆಯಲ್ಲಿರುವ ಮಾರ್ಗದರ್ಶಿ ಚಿಟ್ಸ್ ಕಚೇರಿಯಲ್ಲಿ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ ಚಿಟ್ಸ್ ಫಂಡ್ ಶಾಖೆಯ ಸಿಬ್ಬಂದಿ ಮತ್ತು ವರದಿಗಾರರು ಭಾಗಿಯಾಗಿದ್ದರು.

ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ, ದಾವಣಗೆರೆ, ಕೊಪ್ಪಳ, ಗಂಗಾವತಿ, ಚಿಕ್ಕೋಡಿಯ ಈಟಿವಿ ಭಾರತ ಸಿಬ್ಬಂದಿ ಭಾಗಿಯಾಗಿ ನುಡಿನಮನ ಸಲ್ಲಿಸಿದರು. ರಾಮೋಜಿ ರಾವ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು. ಇದಾದ ಬಳಿಕ ರಾವ್‌ ಅವರು ಬೆಳೆದು ಬಂದ ದಾರಿ ಹಾಗೂ ಅವರು ನೀಡಿರುವ ಸಂದೇಶದ ಕಿರುಚಿತ್ರ ಪ್ರದರ್ಶಿಸಲಾಯಿತು.

ಹುಬ್ಬಳ್ಳಿಯಲ್ಲಿ ರಾಮೋಜಿ ರಾವ್ ಅವರಿಗೆ ನುಡಿ ನಮನ (ETV Bharat)

ಮಾರ್ಗದರ್ಶಿ ಚಿಟ್ಸ್ ಫಂಡ್ ರಾಯಚೂರು ಶಾಖೆಯ ವ್ಯವಸ್ಥಾಪಕ ಎಂ.ಸದಾಶಿವಯ್ಯ ಮಾತನಾಡಿ, "ರಾಮೋಜಿರಾವ್‌ ಅವರು ಅವರದೇ ಆದ ತತ್ವ ಸಿದ್ಧಾಂತದಲ್ಲಿ ಬಾಳಿ ಬದುಕಿದವರು. ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ಅದನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದರು. ಬಡತನದಲ್ಲಿ ಜನಿಸಿದರೂ ಕಷ್ಟಪಟ್ಟು ಉನ್ನತ ಸ್ಥಾನಕ್ಕೇರಿದರು. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ" ಎಂದರು.

ರಾಮೋಜಿ ರಾವ್ ಅವರು ಬರೆದ ಸಂದೇಶ ಓದುವುದರ ಮೂಲಕ ಸದ್ಗತಿ ದೊರೆಯಲೆಂದು ಪ್ರಾರ್ಥನೆ ಸಲ್ಲಿಸಲಾಯಿತು. ಈಟಿವಿ ಭಾರತ ಹುಬ್ಬಳ್ಳಿ ವರದಿಗಾರ ಹೆಚ್​.ಬಿ.ಗಡ್ಡದ, ದಾವಣಗೆರೆಯ ನೂರುಲ್ಲಾ ಡಿ, ಬಾಗಲಕೋಟೆಯ ಆನಂದ ದಲಬಂಜನ್, ಹಾವೇರಿಯ ಶಿವಕುಮಾರ ಹೆಬ್ಬಳ್ಳಿ, ಕೊಪ್ಪಳ ಜಗದೀಶ್ ಚಟ್ಟಿ, ಗದಗ ಮಂಜುನಾಥ ಶಿರಸಂಗಿ, ಚಿಕ್ಕೋಡಿ ಶಿವರಾಜ್ ನೇಸರ್ಗಿ, ಗಂಗಾವತಿ ಶ್ರೀನಿವಾಸ ಎಂ.ಜೆ., ಧಾರವಾಡ ವಿಠಲ್ ಕರಡಿಗುಡ್ಡ, ಬೆಳಗಾವಿ ಸಿದ್ದನಗೌಡ ಪಾಟೀಲ್ ಉಪಸ್ಥಿತರಿದ್ದರು.

ಇದನ್ನೂ ಓದಿ: ಕರುನಾಡಲ್ಲಿ ವಾಸಿಸುವವರೆಲ್ಲರು ಕನ್ನಡ ಕಲಿಯಲೇಬೇಕು: ಸಿಎಂ ಸಿದ್ದರಾಮಯ್ಯ - CM SIDDARAMAIAH

ಬೆಂಗಳೂರಿನಲ್ಲಿ ರಾಮೋಜಿ ರಾವ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ (ETV Bharat)

ಬೆಂಗಳೂರು: ಮಾಧ್ಯಮ ಲೋಕದ ಭೀಷ್ಮ, ರಾಮೋಜಿ ಗ್ರೂಪ್ ಮುಖ್ಯಸ್ಥ ದಿ.ರಾಮೋಜಿ ರಾವ್ ಅವರಿಗೆ ಈಟಿವಿ ಭಾರತದ ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳ ವರದಿಗಾರರು ಇಂದು ಶ್ರದ್ಧಾಂಜಲಿ ಸಲ್ಲಿಸಿದರು.

ಬೆಂಗಳೂರಿನ ಮಾಧವನಗರದಲ್ಲಿರುವ ಈಟಿವಿ ಭಾರತ ಕಚೇರಿಯಲ್ಲಿ ನುಡಿ ನಮನ ಕಾರ್ಯಕ್ರಮದಲ್ಲಿ ಬೆಂಗಳೂರು ಬ್ಯೂರೋ ಮುಖ್ಯಸ್ಥ ಸೋಮಶೇಖರ್ ಕವಚೂರು ಸೇರಿದಂತೆ ಈಟಿವಿ ಭಾರತದ ಬೆಂಗಳೂರು ವರದಿಗಾರರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಹಾಗೂ ಆನೇಕಲ್​​ನ ವರದಿಗಾರರು, ರಾಮೋಜಿ ರಾವ್ ಅವರ ಭಾವಚಿತ್ರಕ್ಕೆ ಪುಷ್ಪನಮನದ ಮೂಲಕ ಅಶ್ರುತರ್ಪಣ ಸಲ್ಲಿಸಿದರು. ಬಳಿಕ ಎರಡು ನಿಮಿಷಗಳ ಕಾಲ ಮೌನಾಚರಣೆ ನಡೆಯಿತು. ರಾಮೋಜಿ ರಾವ್‌ ಅವರು ಬೆಳೆದು ಬಂದ ದಾರಿ ಹಾಗೂ ಅವರು ನೀಡಿರುವ ಸಂದೇಶದ ಕಿರುಚಿತ್ರ ಪ್ರದರ್ಶಿಸಲಾಯಿತು. ಈ ವೇಳೆ ಬ್ಯೂರೊ ಮುಖ್ಯಸ್ಥ ಸೋಮಶೇಖರ್ ಕವಚೂರು, ರಾಮೋಜಿ ರಾವ್ ಸಿಬ್ಬಂದಿಗೆ ಬರೆದಿದ್ದ ಬದ್ಧತೆಯ ವಿಲ್ ಪತ್ರ ಓದಿದರು.

"ಆಂಧ್ರಪ್ರದೇಶದ ಒಂದು ಸಣ್ಣ ಹಳ್ಳಿಯ ರೈತ ಕುಟುಂಬದಲ್ಲಿ ಜನಿಸಿದ ರಾಮೋಜಿ ರಾವ್ ಅವರ ಸಾಧನೆ ಅಸಾಮಾನ್ಯವಾದದ್ದು. ಕಷ್ಟಪಟ್ಟು ಬೆಳೆದ ಅವರು ಮಾಧ್ಯಮ ಸಾಮ್ರಾಜ್ಯವನ್ನೇ ಕಟ್ಟಿದರು. ಶಿಸ್ತಿಗೆ ಪ್ರಾಮುಖ್ಯತೆ ಕೊಡುತ್ತಿದ್ದರು. ತಮ್ಮದೇ ಆದ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದರು. ಯಾವುದೇ ಕೆಲಸವನ್ನಾಗಲೀ ವ್ಯವಸ್ಥಿತವಾಗಿ ಮಾಡುತ್ತಿದ್ದರು. ಅವರ ನಡೆ, ನುಡಿ, ವ್ಯಕ್ತಿತ್ವ ನಮಗೆಲ್ಲರಿಗೂ ಮಾದರಿ. ದೇಶಾದ್ಯಂತ ತಮ್ಮ ಮಾಧ್ಯಮವನ್ನು ವಿಸ್ತರಿಸಿ ಸೈ ಎನಿಸಿಕೊಂಡ ರಾಮೋಜಿ ರಾವ್ ಅವರ ಜೀವನದ ಕಥೆಯನ್ನು ಸಿನಿಮಾ ಮೂಲಕ ಹೊರಬಂದರೆ ಮುಂದಿನ ಪೀಳಿಗೆಗೂ ರಾವ್ ಅವರ ಜೀವನ ಸಾಧನೆ ಪ್ರೇರಣೆಯಾಗಲಿದೆ" ಎಂದು ಸೋಮಶೇಖರ್ ಕವಚೂರು ಬಣ್ಣಿಸಿದರು.

ಈಟಿವಿ ಭಾರತ ಬೆಂಗಳೂರಿನ ಹಿರಿಯ ವರದಿಗಾರರಾದ ಮುನೇಗೌಡ, ವೆಂಕಟ್ ಪೊಳಲಿ, ಪ್ರಶಾಂತ್ ಕುಮಾರ್, ರವಿಕುಮಾರ್, ರಫೀಕ್, ಕಂಟೆಂಟ್ ಎಡಿಟರ್‌ಗಳಾದ ಸತೀಶ್, ಸೀಮಾ, ಮೈಸೂರು ಜಿಲ್ಲೆಯ ಹಿರಿಯ ವರದಿಗಾರರಾದ ಮಹೇಶ್, ಶಿವಮೊಗ್ಗ ಜಿಲ್ಲೆಯ ಕಿರಣ್ ಕುಮಾರ್, ಚಾಮರಾಜನಗರ ಜಿಲ್ಲೆಯ ಸುರೇಂದ್ರ, ಮಂಡ್ಯ ಜಿಲ್ಲೆಯ ಮಧು, ದೇವನಹಳ್ಳಿಯ ಗುರುಪ್ರಸಾದ್, ಆನೇಕಲ್ ವರದಿಗಾರ ಮುನಿರಾಜು ಸೇರಿದಂತೆ ಇತರ ಹಿರಿಯ ಪತ್ರಕರ್ತರು ರಾಮೋಜಿ ರಾವ್ ಸಾಧನೆಯನ್ನು ಸ್ಮರಿಸಿದರು.

ಉತ್ತರ ಕರ್ನಾಟಕ ವರದಿಗಾರರಿಂದ ನುಡಿ ನಮನ: ರಾಮೋಜಿ ರಾವ್ ಅವರಿಗೆ ಉತ್ತರ ಕರ್ನಾಟಕ ಈಟಿವಿ ಭಾರತ​ ವರದಿಗಾರರು ಮತ್ತು ಮಾರ್ಗದರ್ಶಿ ಚಿಟ್ಸ್ ಫಂಡ್ ಕೇಂದ್ರದ ವ್ಯವಸ್ಥಾಪಕರು ಶ್ರದ್ಧಾಂಜಲಿ ಸಲ್ಲಿಸಿದರು.

ರಾಯಚೂರಿನ ಮಾರ್ಗದರ್ಶಿ ಚಿಟ್ ಫಂಡ್‌ ಕಚೇರಿಯಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ (ETV Bharat)

ರಾಯಚೂರು ನಗರದ ಗೋ ಶಾಲಾ ರಸ್ತೆಯಲ್ಲಿರುವ ಮಾರ್ಗದರ್ಶಿ ಚಿಟ್ಸ್ ಕಚೇರಿಯಲ್ಲಿ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ ಚಿಟ್ಸ್ ಫಂಡ್ ಶಾಖೆಯ ಸಿಬ್ಬಂದಿ ಮತ್ತು ವರದಿಗಾರರು ಭಾಗಿಯಾಗಿದ್ದರು.

ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ, ದಾವಣಗೆರೆ, ಕೊಪ್ಪಳ, ಗಂಗಾವತಿ, ಚಿಕ್ಕೋಡಿಯ ಈಟಿವಿ ಭಾರತ ಸಿಬ್ಬಂದಿ ಭಾಗಿಯಾಗಿ ನುಡಿನಮನ ಸಲ್ಲಿಸಿದರು. ರಾಮೋಜಿ ರಾವ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು. ಇದಾದ ಬಳಿಕ ರಾವ್‌ ಅವರು ಬೆಳೆದು ಬಂದ ದಾರಿ ಹಾಗೂ ಅವರು ನೀಡಿರುವ ಸಂದೇಶದ ಕಿರುಚಿತ್ರ ಪ್ರದರ್ಶಿಸಲಾಯಿತು.

ಹುಬ್ಬಳ್ಳಿಯಲ್ಲಿ ರಾಮೋಜಿ ರಾವ್ ಅವರಿಗೆ ನುಡಿ ನಮನ (ETV Bharat)

ಮಾರ್ಗದರ್ಶಿ ಚಿಟ್ಸ್ ಫಂಡ್ ರಾಯಚೂರು ಶಾಖೆಯ ವ್ಯವಸ್ಥಾಪಕ ಎಂ.ಸದಾಶಿವಯ್ಯ ಮಾತನಾಡಿ, "ರಾಮೋಜಿರಾವ್‌ ಅವರು ಅವರದೇ ಆದ ತತ್ವ ಸಿದ್ಧಾಂತದಲ್ಲಿ ಬಾಳಿ ಬದುಕಿದವರು. ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ಅದನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದರು. ಬಡತನದಲ್ಲಿ ಜನಿಸಿದರೂ ಕಷ್ಟಪಟ್ಟು ಉನ್ನತ ಸ್ಥಾನಕ್ಕೇರಿದರು. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ" ಎಂದರು.

ರಾಮೋಜಿ ರಾವ್ ಅವರು ಬರೆದ ಸಂದೇಶ ಓದುವುದರ ಮೂಲಕ ಸದ್ಗತಿ ದೊರೆಯಲೆಂದು ಪ್ರಾರ್ಥನೆ ಸಲ್ಲಿಸಲಾಯಿತು. ಈಟಿವಿ ಭಾರತ ಹುಬ್ಬಳ್ಳಿ ವರದಿಗಾರ ಹೆಚ್​.ಬಿ.ಗಡ್ಡದ, ದಾವಣಗೆರೆಯ ನೂರುಲ್ಲಾ ಡಿ, ಬಾಗಲಕೋಟೆಯ ಆನಂದ ದಲಬಂಜನ್, ಹಾವೇರಿಯ ಶಿವಕುಮಾರ ಹೆಬ್ಬಳ್ಳಿ, ಕೊಪ್ಪಳ ಜಗದೀಶ್ ಚಟ್ಟಿ, ಗದಗ ಮಂಜುನಾಥ ಶಿರಸಂಗಿ, ಚಿಕ್ಕೋಡಿ ಶಿವರಾಜ್ ನೇಸರ್ಗಿ, ಗಂಗಾವತಿ ಶ್ರೀನಿವಾಸ ಎಂ.ಜೆ., ಧಾರವಾಡ ವಿಠಲ್ ಕರಡಿಗುಡ್ಡ, ಬೆಳಗಾವಿ ಸಿದ್ದನಗೌಡ ಪಾಟೀಲ್ ಉಪಸ್ಥಿತರಿದ್ದರು.

ಇದನ್ನೂ ಓದಿ: ಕರುನಾಡಲ್ಲಿ ವಾಸಿಸುವವರೆಲ್ಲರು ಕನ್ನಡ ಕಲಿಯಲೇಬೇಕು: ಸಿಎಂ ಸಿದ್ದರಾಮಯ್ಯ - CM SIDDARAMAIAH

Last Updated : Jun 20, 2024, 9:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.