ETV Bharat / state

ಭಜನೆ ಮಾಡುವಾಗ ಮಹಿಳೆಯ ಚಿನ್ನದ ಸರ ಎಗರಿಸಿದ ಖದೀಮ: ಭಕ್ತರ ಮೊಬೈಲ್​ನಲ್ಲಿ ವಿಡಿಯೋ ಸೆರೆ

ಬೆಂಗಳೂರಿನಲ್ಲಿ ದೇವರ ಭಜನೆ ಮಾಡುವಾಗ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಸರ ಕದ್ದ ಕುರಿತು ಪ್ರಕರಣ ದಾಖಲಾಗಿದೆ.

author img

By ETV Bharat Karnataka Team

Published : 3 hours ago

Updated : 1 hours ago

GOLD CHAIN THEFT
ಭಜನೆ ಮಾಡುವಾಗ ಮಹಿಳೆಯ ಚಿನ್ನದ ಸರ ಎಗರಿಸಿದ ಖದೀಮ (ETV Bharat)

ಬೆಂಗಳೂರು: ದೇವರ ಸನ್ನಿದಾನದೊಳಗೆ ಭಜನೆ ಮಾಡುವಾಗ ಕಿಟಕಿ ಪಕ್ಕದಲ್ಲಿ ಕುಳಿತುಕೊಂಡಿದ್ದ ಮಹಿಳೆಯ ಚಿನ್ನದ ಸರ ಕಳ್ಳತನವಾಗಿರುವ ಘಟನೆ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಶಂಕರ ನಗರದ 2ನೇ ಕ್ರಾಸ್​ನ 10ನೇ ಮುಖ್ಯ ರಸ್ತೆಯಲ್ಲಿದ್ದ ಗಣೇಶ ದೇಗುಲದಲ್ಲಿ ಕಳೆದ ಅಕ್ಟೋಬರ್​ನಲ್ಲಿ 11ರಂದು ಸಂಜೆ ನಡೆದಿದೆ. ಸರ ಕಳೆದುಕೊಂಡ ಮಂಗಳಾ ಎಂಬುವರು ನೀಡಿದ ದೂರಿನ ಮೇರೆಗೆ ಪೊಲೀಸರು ಅಪರಿಚಿತನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಸರಗಳ್ಳತನ ಮಾಡಿದ ವಿಡಿಯೋ ಭಕ್ತರೊಬ್ಬರ ಮೊಬೈಲ್​ನಲ್ಲಿ ಸೆರೆ ಕೂಡ ಆಗಿದೆ‌.

ಭಕ್ತರ ಮೊಬೈಲ್​ನಲ್ಲಿ ಸೆರೆಯಾದ ವಿಡಿಯೋ (ETV Bharat)

ಶಂಕರನಗರದ ನಿವಾಸಿಯಾಗಿರುವ ಮಂಗಳಾ ಪತಿ ರೈಲ್ವೆ ಇಲಾಖೆಯ ನಿವೃತ್ತ ಅಧಿಕಾರಿಯಾಗಿದ್ದಾರೆ. ಎಂದಿನಂತೆ ಅ.11ರ ಸಂಜೆ 6.30ರ ಸುಮಾರಿಗೆ ದೇಗುಲಕ್ಕೆ ಮಂಗಳಾ ಅವರು ಬಂದಿದ್ದರು. ಎಲ್ಲರೊಂದಿಗೆ ಸೇರಿ ಕಿಟಕಿ‌ ಪಕ್ಕದಲ್ಲಿ ಚೇರ್​ನಲ್ಲಿ ಕುಳಿತು ಭಜನೆ ಪಠಿಸುತ್ತಿದ್ದರು. ಈ ವೇಳೆ ಖದೀಮನೋರ್ವ ಹೊರಗಿನ ಕಿಟಕಿಯಿಂದ ಕೈ ಹಾಕಿ ಮಂಗಳಾ ಕುತ್ತಿಗೆಯಲ್ಲಿದ್ದ ಸರ ಕಸಿದಿದ್ದಾರೆ. ಬಿಗಿಯಾಗಿ ಹಿಡಿದುಕೊಂಡಿದ್ದ ಪರಿಣಾಮ 70 ಗ್ರಾಂ ಸರ ತುಂಡಾಗಿ 30 ಗ್ರಾಂ ಸರ ಖದೀಮನ ಪಾಲಾಗಿದೆ. ಭಕ್ತರೊಬ್ಬರ ಮೊಬೈಲ್​​ನಲ್ಲಿ ಸೆರೆಯಾಗಿದೆ. ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ತನ್ನ ಮನೆಯಲ್ಲೇ ಕಳ್ಳತನ ಮಾಡಿ, ಕಳ್ಳತನ ಆಗಿದೆ ಎಂದು ಸುಳ್ಳು ಕಥೆ ಕಟ್ಟಿ ಪೋಲಿಸರ ಅತಿಥಿಯಾದ ಯುವತಿ!

ಬೆಂಗಳೂರು: ದೇವರ ಸನ್ನಿದಾನದೊಳಗೆ ಭಜನೆ ಮಾಡುವಾಗ ಕಿಟಕಿ ಪಕ್ಕದಲ್ಲಿ ಕುಳಿತುಕೊಂಡಿದ್ದ ಮಹಿಳೆಯ ಚಿನ್ನದ ಸರ ಕಳ್ಳತನವಾಗಿರುವ ಘಟನೆ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಶಂಕರ ನಗರದ 2ನೇ ಕ್ರಾಸ್​ನ 10ನೇ ಮುಖ್ಯ ರಸ್ತೆಯಲ್ಲಿದ್ದ ಗಣೇಶ ದೇಗುಲದಲ್ಲಿ ಕಳೆದ ಅಕ್ಟೋಬರ್​ನಲ್ಲಿ 11ರಂದು ಸಂಜೆ ನಡೆದಿದೆ. ಸರ ಕಳೆದುಕೊಂಡ ಮಂಗಳಾ ಎಂಬುವರು ನೀಡಿದ ದೂರಿನ ಮೇರೆಗೆ ಪೊಲೀಸರು ಅಪರಿಚಿತನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಸರಗಳ್ಳತನ ಮಾಡಿದ ವಿಡಿಯೋ ಭಕ್ತರೊಬ್ಬರ ಮೊಬೈಲ್​ನಲ್ಲಿ ಸೆರೆ ಕೂಡ ಆಗಿದೆ‌.

ಭಕ್ತರ ಮೊಬೈಲ್​ನಲ್ಲಿ ಸೆರೆಯಾದ ವಿಡಿಯೋ (ETV Bharat)

ಶಂಕರನಗರದ ನಿವಾಸಿಯಾಗಿರುವ ಮಂಗಳಾ ಪತಿ ರೈಲ್ವೆ ಇಲಾಖೆಯ ನಿವೃತ್ತ ಅಧಿಕಾರಿಯಾಗಿದ್ದಾರೆ. ಎಂದಿನಂತೆ ಅ.11ರ ಸಂಜೆ 6.30ರ ಸುಮಾರಿಗೆ ದೇಗುಲಕ್ಕೆ ಮಂಗಳಾ ಅವರು ಬಂದಿದ್ದರು. ಎಲ್ಲರೊಂದಿಗೆ ಸೇರಿ ಕಿಟಕಿ‌ ಪಕ್ಕದಲ್ಲಿ ಚೇರ್​ನಲ್ಲಿ ಕುಳಿತು ಭಜನೆ ಪಠಿಸುತ್ತಿದ್ದರು. ಈ ವೇಳೆ ಖದೀಮನೋರ್ವ ಹೊರಗಿನ ಕಿಟಕಿಯಿಂದ ಕೈ ಹಾಕಿ ಮಂಗಳಾ ಕುತ್ತಿಗೆಯಲ್ಲಿದ್ದ ಸರ ಕಸಿದಿದ್ದಾರೆ. ಬಿಗಿಯಾಗಿ ಹಿಡಿದುಕೊಂಡಿದ್ದ ಪರಿಣಾಮ 70 ಗ್ರಾಂ ಸರ ತುಂಡಾಗಿ 30 ಗ್ರಾಂ ಸರ ಖದೀಮನ ಪಾಲಾಗಿದೆ. ಭಕ್ತರೊಬ್ಬರ ಮೊಬೈಲ್​​ನಲ್ಲಿ ಸೆರೆಯಾಗಿದೆ. ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ತನ್ನ ಮನೆಯಲ್ಲೇ ಕಳ್ಳತನ ಮಾಡಿ, ಕಳ್ಳತನ ಆಗಿದೆ ಎಂದು ಸುಳ್ಳು ಕಥೆ ಕಟ್ಟಿ ಪೋಲಿಸರ ಅತಿಥಿಯಾದ ಯುವತಿ!

Last Updated : 1 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.