ETV Bharat / state

ಹೊಳೆನರಸೀಪುರದ ಮನೆಗೆ ಪ್ರಜ್ವಲ್ ರೇವಣ್ಣ ಕರೆತಂದು ಸ್ಥಳ ಮಹಜರು ನಡೆಸಿದ ಎಸ್​ಐಟಿ - Prajwal Revanna Case

author img

By ETV Bharat Karnataka Team

Published : Jun 8, 2024, 7:41 PM IST

Updated : Jun 8, 2024, 8:45 PM IST

ಎಸ್​ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರನ್ನು ಹೊಳೆನರಸೀಪುರದ ಅವರ ನಿವಾಸಕ್ಕೆ ಕರೆತಂದು ಸ್ಥಳ ಮಹಜನರು ನಡೆಸಿದರು.

ಹೊಳೆನರಸೀಪುರದಲ್ಲಿ ಪೊಲೀಸ್ ಭದ್ರತೆ
ಹೊಳೆನರಸೀಪುರದಲ್ಲಿ ಪೊಲೀಸ್ ಭದ್ರತೆ (ETV Bharat)
ಹೊಳೆನರಸೀಪುರದ ಮನೆಗೆ ಪ್ರಜ್ವಲ್ ರೇವಣ್ಣ ಕರೆತಂದು ಸ್ಥಳ ಮಹಜರು ನಡೆಸಿದ ಎಸ್​ಐಟಿ (ETV Bharat)

ಹಾಸನ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಪ್ರಜ್ವಲ್ ರೇವಣ್ಣ ಅವರ ನಿವಾಸದಲ್ಲಿ ವಿಶೇಷ ತನಿಖಾ ತಂಡ ಸ್ಥಳ ಮಹಜರು ನಡೆಸಿತು. ಕ್ಯೂಆರ್‌ಟಿ ವಾಹನದಲ್ಲಿ ಪ್ರಜ್ವಲ್‌ ರೇವಣ್ಣ ಅವರನ್ನು ಕರೆದುಕೊಂಡು ಹೊಳೆನರಸೀಪುರಕ್ಕೆ ಬಂದಿದ್ದ ಎಸ್​ಐಟಿ ಅಧಿಕಾರಿಗಳು, ಪ್ರಜ್ವಲ್ ನಿವಾಸದಲ್ಲಿ ಮಹಜರು ನಡೆಸಿದರು.

ಸತತ ನಾಲ್ಕು ಗಂಟೆ ಮಹಜರು: ಶನಿವಾರ ಮಧ್ಯಾಹ್ನ ಒಂದು ಗಂಟೆಯ ಸಮಯದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಹಾಸನಕ್ಕೆ ಕರೆತರಲಾಗಿತ್ತು. ಪ್ರಜ್ವಲ್ ನಿವಾಸದಲ್ಲಿ ಎಫ್​​ಎಸ್​​ಎಲ್ ತಜ್ಞರ ಸಮ್ಮುಖದಲ್ಲಿ ಸತತ ನಾಲ್ಕು ಗಂಟೆ ಸ್ಥಳ ಮಹಜರು ಪ್ರಕ್ರಿಯೆ ನಡೆಸಲಾಯಿತು. ಮಹಜರು ಪೂರ್ಣವಾದ ಬಳಿಕ ಪ್ರಜ್ವಲ್ ಅವರನ್ನು ಎಸ್​ಐಟಿ ಅಧಿಕಾರಿಗಳು ಕರೆದೊಯ್ದರು. ನಾಲ್ಕು ವಾಹನಗಳಲ್ಲಿ ಆಗಮಿಸಿದ್ದ ಎಸ್​ಐಟಿ ತಂಡ ಮಹಜನರು ಪೂರ್ಣಗೊಳಿಸಿ ತೆರಳಿತು.

ಮೂರು ಕಡೆ ಸ್ಥಳ ಮಹಜರು: ಹೊಳೆನರಸೀಪುರ ನಿವಾಸ ಮತ್ತು ಹಾಸನದಲ್ಲಿ ಸಂಸದರ ನಿವಾಸಕ್ಕೆ ಪ್ರಜ್ವಲ್ ಅವರನ್ನು ಕರೆದೊಯ್ದು ಎಸ್​ಐಟಿ ಅಧಿಕಾರಿಗಳು ಮಹಜರು ನಡೆಸಿದರು. ಬಳಿಕ ಓರ್ವ ಸಂತ್ರಸ್ತೆಯ ಮನೆಗೂ ಭೇಟಿ ನೀಡಿ ಅಲ್ಲಿ ಕೆಲವು ಸಾಕ್ಷಾಧಾರಗಳನ್ನು ಕಲೆಹಾಕಿದ ಅಧಿಕಾರಿಗಳು ಬಳಿಕ ಬೆಂಗಳೂರಿನತ್ತ ತೆರಳಿದರು.

ಇನ್ನು ಮಹಜರು ಮುಗಿಸಿ ತೆರಳುತ್ತಿದ್ದ ವೇಳೆ ಬೆಂಬಲಿಗರು ಪ್ರಜ್ವಲ್ ಪರ ಘೋಷಣೆ ಕೂಗಿದರು. ಪ್ರಜ್ವಲ್ ತೆರಳುತ್ತಿದ್ದ ವಾಹನಕ್ಕೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಮತ್ತು ಸಿಐಡಿ ಎರಡು ಘಟಕಗಳಲ್ಲಿ ದೂರು ದಾಖಲಾಗಿದೆ. ಪ್ರಜ್ವಲ್ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದು, ಎಸ್​ಐಟಿ ತನಿಖೆ ನಡೆಸುತ್ತಿದೆ.

ಮೇ 31 ರಂದು ವಿದೇಶದಿಂದ ಬೆಂಗಳೂರಿಗೆ ಬಂದ ಬಳಿಕ ಪ್ರಜ್ವಲ್ ಅವರನ್ನು ಎಸ್​ಐಟಿ ಬಂಧಿಸಿ, ಕೋರ್ಟ್​ಗೆ ಹಾಜರುಪಡಿಸಿತ್ತು. ಆಗ ಕೋರ್ಟ್, ಜೂನ್ 6ರ ವರೆಗೆ ಎಸ್​ಐಟಿ ವಶಕ್ಕೆ ನೀಡಿತ್ತು. ಜೂನ್ 6 ರಂದು ಪ್ರಜ್ವಲ್ ಅವರನ್ನು ಮತ್ತೆ ಕೋರ್ಟ್​ಗೆ ಹಾಜರುಪಡಿಸಿ, ಜೂನ್ 10ರ ವರೆಗೆ ಎಸ್​ಐಟಿ ವಶಕ್ಕೆ ಪಡೆದಿದೆ.

ಇದನ್ನೂ ಓದಿ: ಹಾಸನದಲ್ಲಿ ಗೆದ್ದು ಬೀಗಿದ ಕಾಂಗ್ರೆಸ್ ಅಭ್ಯರ್ಥಿ, ಪ್ರಜ್ವಲ್​ ರೇವಣ್ಣನಿಗೆ ಸೋಲು; ಮರುಕಳಿಸಿತು 1999ರ ಘಟನೆ - M Shreyas

ಹೊಳೆನರಸೀಪುರದ ಮನೆಗೆ ಪ್ರಜ್ವಲ್ ರೇವಣ್ಣ ಕರೆತಂದು ಸ್ಥಳ ಮಹಜರು ನಡೆಸಿದ ಎಸ್​ಐಟಿ (ETV Bharat)

ಹಾಸನ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಪ್ರಜ್ವಲ್ ರೇವಣ್ಣ ಅವರ ನಿವಾಸದಲ್ಲಿ ವಿಶೇಷ ತನಿಖಾ ತಂಡ ಸ್ಥಳ ಮಹಜರು ನಡೆಸಿತು. ಕ್ಯೂಆರ್‌ಟಿ ವಾಹನದಲ್ಲಿ ಪ್ರಜ್ವಲ್‌ ರೇವಣ್ಣ ಅವರನ್ನು ಕರೆದುಕೊಂಡು ಹೊಳೆನರಸೀಪುರಕ್ಕೆ ಬಂದಿದ್ದ ಎಸ್​ಐಟಿ ಅಧಿಕಾರಿಗಳು, ಪ್ರಜ್ವಲ್ ನಿವಾಸದಲ್ಲಿ ಮಹಜರು ನಡೆಸಿದರು.

ಸತತ ನಾಲ್ಕು ಗಂಟೆ ಮಹಜರು: ಶನಿವಾರ ಮಧ್ಯಾಹ್ನ ಒಂದು ಗಂಟೆಯ ಸಮಯದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಹಾಸನಕ್ಕೆ ಕರೆತರಲಾಗಿತ್ತು. ಪ್ರಜ್ವಲ್ ನಿವಾಸದಲ್ಲಿ ಎಫ್​​ಎಸ್​​ಎಲ್ ತಜ್ಞರ ಸಮ್ಮುಖದಲ್ಲಿ ಸತತ ನಾಲ್ಕು ಗಂಟೆ ಸ್ಥಳ ಮಹಜರು ಪ್ರಕ್ರಿಯೆ ನಡೆಸಲಾಯಿತು. ಮಹಜರು ಪೂರ್ಣವಾದ ಬಳಿಕ ಪ್ರಜ್ವಲ್ ಅವರನ್ನು ಎಸ್​ಐಟಿ ಅಧಿಕಾರಿಗಳು ಕರೆದೊಯ್ದರು. ನಾಲ್ಕು ವಾಹನಗಳಲ್ಲಿ ಆಗಮಿಸಿದ್ದ ಎಸ್​ಐಟಿ ತಂಡ ಮಹಜನರು ಪೂರ್ಣಗೊಳಿಸಿ ತೆರಳಿತು.

ಮೂರು ಕಡೆ ಸ್ಥಳ ಮಹಜರು: ಹೊಳೆನರಸೀಪುರ ನಿವಾಸ ಮತ್ತು ಹಾಸನದಲ್ಲಿ ಸಂಸದರ ನಿವಾಸಕ್ಕೆ ಪ್ರಜ್ವಲ್ ಅವರನ್ನು ಕರೆದೊಯ್ದು ಎಸ್​ಐಟಿ ಅಧಿಕಾರಿಗಳು ಮಹಜರು ನಡೆಸಿದರು. ಬಳಿಕ ಓರ್ವ ಸಂತ್ರಸ್ತೆಯ ಮನೆಗೂ ಭೇಟಿ ನೀಡಿ ಅಲ್ಲಿ ಕೆಲವು ಸಾಕ್ಷಾಧಾರಗಳನ್ನು ಕಲೆಹಾಕಿದ ಅಧಿಕಾರಿಗಳು ಬಳಿಕ ಬೆಂಗಳೂರಿನತ್ತ ತೆರಳಿದರು.

ಇನ್ನು ಮಹಜರು ಮುಗಿಸಿ ತೆರಳುತ್ತಿದ್ದ ವೇಳೆ ಬೆಂಬಲಿಗರು ಪ್ರಜ್ವಲ್ ಪರ ಘೋಷಣೆ ಕೂಗಿದರು. ಪ್ರಜ್ವಲ್ ತೆರಳುತ್ತಿದ್ದ ವಾಹನಕ್ಕೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಮತ್ತು ಸಿಐಡಿ ಎರಡು ಘಟಕಗಳಲ್ಲಿ ದೂರು ದಾಖಲಾಗಿದೆ. ಪ್ರಜ್ವಲ್ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದು, ಎಸ್​ಐಟಿ ತನಿಖೆ ನಡೆಸುತ್ತಿದೆ.

ಮೇ 31 ರಂದು ವಿದೇಶದಿಂದ ಬೆಂಗಳೂರಿಗೆ ಬಂದ ಬಳಿಕ ಪ್ರಜ್ವಲ್ ಅವರನ್ನು ಎಸ್​ಐಟಿ ಬಂಧಿಸಿ, ಕೋರ್ಟ್​ಗೆ ಹಾಜರುಪಡಿಸಿತ್ತು. ಆಗ ಕೋರ್ಟ್, ಜೂನ್ 6ರ ವರೆಗೆ ಎಸ್​ಐಟಿ ವಶಕ್ಕೆ ನೀಡಿತ್ತು. ಜೂನ್ 6 ರಂದು ಪ್ರಜ್ವಲ್ ಅವರನ್ನು ಮತ್ತೆ ಕೋರ್ಟ್​ಗೆ ಹಾಜರುಪಡಿಸಿ, ಜೂನ್ 10ರ ವರೆಗೆ ಎಸ್​ಐಟಿ ವಶಕ್ಕೆ ಪಡೆದಿದೆ.

ಇದನ್ನೂ ಓದಿ: ಹಾಸನದಲ್ಲಿ ಗೆದ್ದು ಬೀಗಿದ ಕಾಂಗ್ರೆಸ್ ಅಭ್ಯರ್ಥಿ, ಪ್ರಜ್ವಲ್​ ರೇವಣ್ಣನಿಗೆ ಸೋಲು; ಮರುಕಳಿಸಿತು 1999ರ ಘಟನೆ - M Shreyas

Last Updated : Jun 8, 2024, 8:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.