ETV Bharat / state

ಮಲೆನಾಡ ಗ್ರಾಮಗಳಲ್ಲಿ ನಕ್ಸಲರು ಪ್ರತ್ಯಕ್ಷ? ಶಿವಮೊಗ್ಗ ಎಸ್​ಪಿ ಮಿಥುನ್​ ಕುಮಾರ್​ ಹೇಳಿದ್ದೇನು? - Naxal Movement

author img

By ETV Bharat Karnataka Team

Published : Apr 22, 2024, 8:34 PM IST

ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮರಾಠಿ ಗ್ರಾಮಕ್ಕೆ ನಕ್ಸಲರ ತಂಡ ಆಗಮಿಸಿತ್ತು ಎಂಬುದು ಸುಳ್ಳು ಸುದ್ದಿ ಎಂದು ಎಸ್​ಪಿ ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

shimogga-sp-mithun-kumar-reaction-on-naxals-movement
ಮಲೆನಾಡಿನ ಗ್ರಾಮಗಳಲ್ಲಿ ನಕ್ಸಲರ ಸಂಚಾರ: ಶಿವಮೊಗ್ಗ ಎಸ್​ಪಿ ಮಿಥುನ್​ ಕುಮಾರ್​ ಹೇಳಿದ್ದೇನು?

ಶಿವಮೊಗ್ಗ: ಕಳೆದ ಮೂರು ದಿನಗಳ ಹಿಂದೆ ನಕ್ಸಲರ ತಂಡ ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮರಾಠಿ ಗ್ರಾಮಕ್ಕೆ ಆಗಮಿಸಿತ್ತು ಎಂಬುದು ಸುಳ್ಳು ಸುದ್ದಿ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ ಮೂವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಏನಿದು ಘಟನೆ?: ಕಳೆದ ಮೂರು ದಿನಗಳ ಹಿಂದೆ ಶಿವಮೊಗ್ಗ-ಉಡುಪಿ ಜಿಲ್ಲೆಯ ಗಡಿಭಾಗದ ಮೂಕಾಂಬಿಕ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಹೊಸಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಮರಾಠಿ ಗ್ರಾಮಕ್ಕೆ ನಾಲ್ವರು ಭೇಟಿ ನೀಡಿದ್ದರು ಎಂಬ ಸುದ್ದಿ ಇಲ್ಲಿನ ಜನರಲ್ಲಿ ಆತಂಕ ಸೃಷ್ಟಿಸಿತ್ತು. ವಿಷಯ ತಿಳಿದ ಕಾರ್ಗಲ್ ಪೊಲೀಸರು ಗ್ರಾಮಕ್ಕೆ ದೌಡಾಯಿಸಿ ತಪಾಸಣೆ ನಡೆಸಿದ್ದರು. ಬಳಿಕ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸಹ ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ಇಷ್ಟೇ ಅಲ್ಲದೆ, ಶಿವಮೊಗ್ಗ ಗುಪ್ತಚರ ಇಲಾಖೆಯ ಡಿವೈಎಸ್​ಪಿ ಸಂಜೀವ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದರು. ಇದರ ಜೊತೆಗೆ ಎಎನ್ಎಫ್ ತಂಡ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಆದರೆ ಈ ಭಾಗದಲ್ಲಿ ನಕ್ಸಲರು ಸಂಚರಿಸಿರುವ ಬಗ್ಗೆ ಖಚಿತ ಮಾಹಿತಿಯನ್ನು ಯಾರೂ ನೀಡಿರಲಿಲ್ಲ ಮತ್ತು ನಕ್ಸಲರು ಬಂದು ಹೋದ ಬಗ್ಗೆ ಯಾವುದೇ ಕುರುಹುಗಳು ಪತ್ತೆಯಾಗಿರಲಿಲ್ಲ.

ಮತ್ತೊಂದೆಡೆ, ಮರಾಠಿ ಗ್ರಾಮದ ತೋಟದ ಮಾಲೀಕರೊಬ್ಬರು, ತಮ್ಮ ತೋಟಕ್ಕೆ ನಾಲ್ವರು ನಕ್ಸಲರು ಆಗಮಿಸಿರುವುದಾಗಿ ತೋಟದ ಕಾರ್ಮಿಕ ತನಗೆ ತಿಳಿಸಿದ್ದ, ನಾನು ನಕ್ಸಲರನ್ನು ನೇರವಾಗಿ ನೋಡಿಲ್ಲ ಎಂದು ಪೊಲೀಸ್​ ವಿಚಾರಣೆಯಲ್ಲಿ ಹೇಳಿದ್ದರು. ತೋಟದ ಮಾಲೀಕನಿಗೆ ನಕ್ಸಲರು ಬಂದಿದ್ದರು ಎಂದು ತಿಳಿಸಿದ್ದ ತೋಟದ ಕಾರ್ಮಿಕ ದಾವಣಗೆರೆಗೆ ಹೋಗಿದ್ದ. ಪೊಲೀಸರು ಆತನನ್ನು ದಾವಣಗೆರೆಯಿಂದ ಕರೆತಂದು ವಿಚಾರಣೆಗೆ ಬಳಪಡಿಸಿದಾಗ, ಆತ ನಾನು ರಾತ್ರಿ ವೇಳೆ ನಾಲ್ವರು ಸಂಚರಿಸುತ್ತಿರುವುದನ್ನು ನೋಡಿದೆ, ಆದರೆ ಅವರ ಬಳಿ ಯಾವುದೇ ಆಯುಧಗಳಿರಲಿಲ್ಲ ಎಂದು ತಿಳಿಸಿದ್ದ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬಂಧಿತರ ಎನ್ಐಎ ಕಸ್ಟಡಿ ಅವಧಿ ವಿಸ್ತರಣೆ - Rameshwaram Cafe Blast

ಶಿವಮೊಗ್ಗ: ಕಳೆದ ಮೂರು ದಿನಗಳ ಹಿಂದೆ ನಕ್ಸಲರ ತಂಡ ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮರಾಠಿ ಗ್ರಾಮಕ್ಕೆ ಆಗಮಿಸಿತ್ತು ಎಂಬುದು ಸುಳ್ಳು ಸುದ್ದಿ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ ಮೂವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಏನಿದು ಘಟನೆ?: ಕಳೆದ ಮೂರು ದಿನಗಳ ಹಿಂದೆ ಶಿವಮೊಗ್ಗ-ಉಡುಪಿ ಜಿಲ್ಲೆಯ ಗಡಿಭಾಗದ ಮೂಕಾಂಬಿಕ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಹೊಸಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಮರಾಠಿ ಗ್ರಾಮಕ್ಕೆ ನಾಲ್ವರು ಭೇಟಿ ನೀಡಿದ್ದರು ಎಂಬ ಸುದ್ದಿ ಇಲ್ಲಿನ ಜನರಲ್ಲಿ ಆತಂಕ ಸೃಷ್ಟಿಸಿತ್ತು. ವಿಷಯ ತಿಳಿದ ಕಾರ್ಗಲ್ ಪೊಲೀಸರು ಗ್ರಾಮಕ್ಕೆ ದೌಡಾಯಿಸಿ ತಪಾಸಣೆ ನಡೆಸಿದ್ದರು. ಬಳಿಕ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸಹ ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ಇಷ್ಟೇ ಅಲ್ಲದೆ, ಶಿವಮೊಗ್ಗ ಗುಪ್ತಚರ ಇಲಾಖೆಯ ಡಿವೈಎಸ್​ಪಿ ಸಂಜೀವ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದರು. ಇದರ ಜೊತೆಗೆ ಎಎನ್ಎಫ್ ತಂಡ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಆದರೆ ಈ ಭಾಗದಲ್ಲಿ ನಕ್ಸಲರು ಸಂಚರಿಸಿರುವ ಬಗ್ಗೆ ಖಚಿತ ಮಾಹಿತಿಯನ್ನು ಯಾರೂ ನೀಡಿರಲಿಲ್ಲ ಮತ್ತು ನಕ್ಸಲರು ಬಂದು ಹೋದ ಬಗ್ಗೆ ಯಾವುದೇ ಕುರುಹುಗಳು ಪತ್ತೆಯಾಗಿರಲಿಲ್ಲ.

ಮತ್ತೊಂದೆಡೆ, ಮರಾಠಿ ಗ್ರಾಮದ ತೋಟದ ಮಾಲೀಕರೊಬ್ಬರು, ತಮ್ಮ ತೋಟಕ್ಕೆ ನಾಲ್ವರು ನಕ್ಸಲರು ಆಗಮಿಸಿರುವುದಾಗಿ ತೋಟದ ಕಾರ್ಮಿಕ ತನಗೆ ತಿಳಿಸಿದ್ದ, ನಾನು ನಕ್ಸಲರನ್ನು ನೇರವಾಗಿ ನೋಡಿಲ್ಲ ಎಂದು ಪೊಲೀಸ್​ ವಿಚಾರಣೆಯಲ್ಲಿ ಹೇಳಿದ್ದರು. ತೋಟದ ಮಾಲೀಕನಿಗೆ ನಕ್ಸಲರು ಬಂದಿದ್ದರು ಎಂದು ತಿಳಿಸಿದ್ದ ತೋಟದ ಕಾರ್ಮಿಕ ದಾವಣಗೆರೆಗೆ ಹೋಗಿದ್ದ. ಪೊಲೀಸರು ಆತನನ್ನು ದಾವಣಗೆರೆಯಿಂದ ಕರೆತಂದು ವಿಚಾರಣೆಗೆ ಬಳಪಡಿಸಿದಾಗ, ಆತ ನಾನು ರಾತ್ರಿ ವೇಳೆ ನಾಲ್ವರು ಸಂಚರಿಸುತ್ತಿರುವುದನ್ನು ನೋಡಿದೆ, ಆದರೆ ಅವರ ಬಳಿ ಯಾವುದೇ ಆಯುಧಗಳಿರಲಿಲ್ಲ ಎಂದು ತಿಳಿಸಿದ್ದ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬಂಧಿತರ ಎನ್ಐಎ ಕಸ್ಟಡಿ ಅವಧಿ ವಿಸ್ತರಣೆ - Rameshwaram Cafe Blast

ETV Bharat Logo

Copyright © 2024 Ushodaya Enterprises Pvt. Ltd., All Rights Reserved.