ETV Bharat / state

ಮೈಸೂರು: ಸರ್ಕಾರಿ ಶಾಲೆಗೆ ಭೇಟಿ ನೀಡಿ 100ನೇ ಗ್ರಂಥಾಲಯ ಉದ್ಘಾಟಿಸಿದ ಸಂಸದ ಯದುವೀರ್‌ - Yaduveer Wodeyar

author img

By ETV Bharat Karnataka Team

Published : Sep 10, 2024, 10:16 AM IST

Updated : Sep 10, 2024, 10:44 AM IST

ಕುಂಬಾರು ಕೊಪ್ಪಲುವಿನಲ್ಲಿರುವ ಸರ್ಕಾರಿ ಶಾಲೆಯ ಗ್ರಂಥಾಲಯ ಉದ್ಘಾಟಿಸಿದ ಸಂಸದ ಯದುವೀರ್​ ಒಡೆಯರ್​, ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿ ಕಿವಿಮಾತು ಹೇಳಿದರು.

MP YADUVEER WODEYAR TAUGHT MORAL LESSON TO KUMBARU GOVERNMENT SCHOOL CHILDREN
ಕುಂಬಾರು ಕೊಪ್ಪಲುವಿನ ಸರ್ಕಾರಿ ಶಾಲೆಯಲ್ಲಿ ಸಂಸದ ಯದುವೀರ್‌ ಒಡೆಯರ್ (ETV Bharat)
ಸರ್ಕಾರಿ ಶಾಲೆಯ ಗ್ರಂಥಾಲಯ ಉದ್ಘಾಟಿಸಿದ ಸಂಸದ ಯದುವೀರ್‌ (ETV Bharat)

ಮೈಸೂರು: ಕುಂಬಾರು ಕೊಪ್ಪಲುವಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೋಮವಾರ ಬೆಳಗ್ಗೆ ಭೇಟಿ ನೀಡಿದ ಸಂಸದ ಯದುವೀರ್​ ಒಡೆಯರ್​, ಗ್ರಂಥಾಲಯ ಉದ್ಘಾಟಿಸಿದರು. ಬಳಿಕ ಡಿಜಿಟಲ್‌ ಬೋರ್ಡ್‌ ಮೂಲಕ ಮಕ್ಕಳಿಗೆ ನೀತಿ ಪಾಠ ಹೇಳಿ, ಅವರ ಪ್ರ‍ಶ್ನೆಗಳಿಗೆ ಉತ್ತರಿಸಿದರು.

ರಾಜವಂಶಸ್ಥ ಯದುವೀರ್‌ ಸಂಸದರಾಗುವ ಮುಂಚೆಯೂ ಎನ್​ಜಿಒಗಳ ಜೊತೆ ಸೇರಿ ಹಲವು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದರು. ಸರ್ಕಾರಿ ಶಾಲೆಗಳಿಗೆ ಗ್ರಂಥಾಲಯ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡುತ್ತಾ ಬಂದಿದ್ದು, ಇದು 100ನೇ ಗ್ರಂಥಾಲಯವಾಗಿದೆ.

ಈ ಸಂದರ್ಭದಲ್ಲಿ ಚಾಮುಂಡಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, "ಸರ್ಕಾರ ಚಾಮುಂಡಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೋರ್ಟ್‌ ಆದೇಶದಂತೆ ನಡೆದುಕೊಳ್ಳಲಿ" ಎಂದರು.

ಬಳಿಕ, ಹುಣಸೂರು ನಗರ ಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಕುರಿತು ಪ್ರತಿಕ್ರಿಯಿಸಿ, "ನಾನು ಸಂಸದನಾದ ಮೇಲೆ ಮೊದಲ ಬಾರಿಗೆ ಮತ ಚಲಾಯಿಸಲಿದ್ದೇನೆ. ಇಲ್ಲೂ ಎನ್​ಡಿಎಗೆ ಗೆಲುವು ಸಿಗಲಿದೆ" ಎಂದು ಹೇಳಿದರು.

ಇದನ್ನೂ ಓದಿ: ಸದ್ಯದ ಪರಿಸ್ಥಿತಿಯಲ್ಲಿ ಭಕ್ತಿಯೊಂದಿಗೆ ಜ್ಞಾನದ ಅನಿವಾರ್ಯತೆ ಎದುರಾಗಿದೆ : ಸಂಸದ ಯದುವೀರ್ - MP Yaduveer Wadiyar

ಸರ್ಕಾರಿ ಶಾಲೆಯ ಗ್ರಂಥಾಲಯ ಉದ್ಘಾಟಿಸಿದ ಸಂಸದ ಯದುವೀರ್‌ (ETV Bharat)

ಮೈಸೂರು: ಕುಂಬಾರು ಕೊಪ್ಪಲುವಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೋಮವಾರ ಬೆಳಗ್ಗೆ ಭೇಟಿ ನೀಡಿದ ಸಂಸದ ಯದುವೀರ್​ ಒಡೆಯರ್​, ಗ್ರಂಥಾಲಯ ಉದ್ಘಾಟಿಸಿದರು. ಬಳಿಕ ಡಿಜಿಟಲ್‌ ಬೋರ್ಡ್‌ ಮೂಲಕ ಮಕ್ಕಳಿಗೆ ನೀತಿ ಪಾಠ ಹೇಳಿ, ಅವರ ಪ್ರ‍ಶ್ನೆಗಳಿಗೆ ಉತ್ತರಿಸಿದರು.

ರಾಜವಂಶಸ್ಥ ಯದುವೀರ್‌ ಸಂಸದರಾಗುವ ಮುಂಚೆಯೂ ಎನ್​ಜಿಒಗಳ ಜೊತೆ ಸೇರಿ ಹಲವು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದರು. ಸರ್ಕಾರಿ ಶಾಲೆಗಳಿಗೆ ಗ್ರಂಥಾಲಯ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡುತ್ತಾ ಬಂದಿದ್ದು, ಇದು 100ನೇ ಗ್ರಂಥಾಲಯವಾಗಿದೆ.

ಈ ಸಂದರ್ಭದಲ್ಲಿ ಚಾಮುಂಡಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, "ಸರ್ಕಾರ ಚಾಮುಂಡಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೋರ್ಟ್‌ ಆದೇಶದಂತೆ ನಡೆದುಕೊಳ್ಳಲಿ" ಎಂದರು.

ಬಳಿಕ, ಹುಣಸೂರು ನಗರ ಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಕುರಿತು ಪ್ರತಿಕ್ರಿಯಿಸಿ, "ನಾನು ಸಂಸದನಾದ ಮೇಲೆ ಮೊದಲ ಬಾರಿಗೆ ಮತ ಚಲಾಯಿಸಲಿದ್ದೇನೆ. ಇಲ್ಲೂ ಎನ್​ಡಿಎಗೆ ಗೆಲುವು ಸಿಗಲಿದೆ" ಎಂದು ಹೇಳಿದರು.

ಇದನ್ನೂ ಓದಿ: ಸದ್ಯದ ಪರಿಸ್ಥಿತಿಯಲ್ಲಿ ಭಕ್ತಿಯೊಂದಿಗೆ ಜ್ಞಾನದ ಅನಿವಾರ್ಯತೆ ಎದುರಾಗಿದೆ : ಸಂಸದ ಯದುವೀರ್ - MP Yaduveer Wadiyar

Last Updated : Sep 10, 2024, 10:44 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.